ಹೈದರಾಬಾದ್: ಹಿಂದೂ ಸೋಂಕಿತನ ಶವಕ್ಕೆ ಸಂಪ್ರದಾಯದಂತೆ ಮುಸ್ಲಿಂ ಸಹೋದರರಿಂದ ಅಂತ್ಯಸಂಸ್ಕಾರ
ಆಸ್ಪತ್ರೆಯವರು ಶವ ತೆಗೆದುಕೊಂಡು ಹೋಗಲು ಮನೆಯವರಿಗೆ ಸೂಚನೆ ನೀಡಿದರು. ಸೋಂಕು ಭೀತಿಯಿಂದ ಆಸ್ಪತ್ರೆಯತ್ತ ತಲೆ ಹಾಕದ ಮನೆಯವರು, ಮೊಗುಲಯ್ಯ ಅವರ ಶವವನ್ನು ಅನಾಥಗೊಳಿಸಿದರು. ಕೊನೆಗೆ ಅದೇ ಗ್ರಾಮದ ಶಫಿ ಮತ್ತು ಅಲಿ ಎಂಬ ಮುಸ್ಲಿಂ ಸೋದರರು ಸೋಂಕು ಪೀಡಿತ ಶವವನ್ನು ಯಾವುದೇ ಹಿಂಜರಿಕೆ ಇಲ್ಲದೇ ಎತ್ತಿ ರುದ್ರಭೂಮಿಗೆ ಸಾಗಿಸಿದರು.
Vijaya Karnataka Web 21 Apr 2021, 7:24 am
ಹೈಲೈಟ್ಸ್:
- ಕೊರೊನಾ ಸೋಂಕಿತ ಹೆಣವನ್ನು ಸ್ವೀಕರಿಸಲು ಕುಟುಂಬಸ್ಥರು ನಕಾರ
- ಈ ವೇಳೆ ಮುಸ್ಲಿಂ ಸಹೋದರರಿಂದ ಸಂಪ್ರದಾಯದಂತೆ ಅಂತ್ಯಸಂಸ್ಕಾರ
- ಹಿಂದೂ ವ್ಯಕ್ತಿಯ ಅಂತ್ಯಸಂಸ್ಕಾರ ಮೂಲಕ ಮಾನವೀಯತೆ
ಹೈದರಾಬಾದ್: ಕೊರೊನಾ ಸೋಂಕಿನಿಂದ ಕೊನೆಯುಸಿರೆಳೆದು ಯಾರಿಗೂ ಬೇಡವಾಗಿದ್ದ ಹಿಂದೂ ವ್ಯಕ್ತಿಯೊಬ್ಬರ ಮೃತದೇಹವನ್ನು ಮುಸ್ಲಿಂ ಯುವಕರಿಬ್ಬರು ರುದ್ರಭೂಮಿಗೆ ಕೊಂಡೊಯ್ದು ಹಿಂದೂ ಸಂಪ್ರದಾಯದ ಪ್ರಕಾರ ಅಂತ್ಯ ಸಂಸ್ಕಾರ ನೆರವೇರಿಸಿ ಮಾನವೀಯತೆ ಮೆರೆದ ಪ್ರಕರಣ ತೆಲಂಗಾಣದ ಕಾಟೇಪಲ್ಲಿ ಗ್ರಾಮದಲ್ಲಿನಡೆದಿದೆ. ಪೆದ್ದ ಕೊಡಪ್ಗಲ್ ಮಂಡಲದ ಕಾಟೇಪಲ್ಲಿಯ ಮೊಗುಲಯ್ಯ ಎಂಬವರು ಭಾಣಸುವಾಡ ಆಸ್ಪತ್ರೆಯಲ್ಲಿ ಅಸು ನೀಗಿದರು. ಆಸ್ಪತ್ರೆಯವರು ಶವ ತೆಗೆದುಕೊಂಡು ಹೋಗಲು ಮನೆಯವರಿಗೆ ಸೂಚನೆ ನೀಡಿದರು. ಸೋಂಕು ಭೀತಿಯಿಂದ ಆಸ್ಪತ್ರೆಯತ್ತ ತಲೆ ಹಾಕದ ಮನೆಯವರು, ಮೊಗುಲಯ್ಯ ಅವರ ಶವವನ್ನು ಅನಾಥಗೊಳಿಸಿದರು.
ಕೊನೆಗೆ ಅದೇ ಗ್ರಾಮದ ಶಫಿ ಮತ್ತು ಅಲಿ ಎಂಬ ಮುಸ್ಲಿಂ ಸೋದರರು ಸೋಂಕು ಪೀಡಿತ ಶವವನ್ನು ಯಾವುದೇ ಹಿಂಜರಿಕೆ ಇಲ್ಲದೇ ಎತ್ತಿ ರುದ್ರಭೂಮಿಗೆ ಸಾಗಿಸಿದರು. ಹಿಂದೂ ಸಂಪ್ರದಾಯದ ಪ್ರಕಾರ ಮೊಗುಲಯ್ಯನವರ ಅಂತ್ಯ ಸಂಸ್ಕಾರ ನೆರವೇರಿಸಿ ಊರಿಗೆ ಹಿಂದಿರುಗಿದರು. ಇಷ್ಟಾದರೂ ಮೃತನ ಕುಟುಂಬ ಸದಸ್ಯರು ರುದ್ರಭೂಮಿಗೂ ಭೇಟಿ ನೀಡಲಿಲ್ಲ.
ತೆಲಂಗಾಣ ರಾಜಕಾರಣಕ್ಕೆ ವೈಎಸ್ಆರ್ ಕುಟುಂಬ ಎಂಟ್ರಿ, ಹೊಸ ಪಕ್ಷ ಹುಟ್ಟುಹಾಕಲಿದ್ದಾರೆ ಜಗನ್ ರೆಡ್ಡಿ ತಂಗಿ
ಕೊನೆಗೆ ಅದೇ ಗ್ರಾಮದ ಶಫಿ ಮತ್ತು ಅಲಿ ಎಂಬ ಮುಸ್ಲಿಂ ಸೋದರರು ಸೋಂಕು ಪೀಡಿತ ಶವವನ್ನು ಯಾವುದೇ ಹಿಂಜರಿಕೆ ಇಲ್ಲದೇ ಎತ್ತಿ ರುದ್ರಭೂಮಿಗೆ ಸಾಗಿಸಿದರು. ಹಿಂದೂ ಸಂಪ್ರದಾಯದ ಪ್ರಕಾರ ಮೊಗುಲಯ್ಯನವರ ಅಂತ್ಯ ಸಂಸ್ಕಾರ ನೆರವೇರಿಸಿ ಊರಿಗೆ ಹಿಂದಿರುಗಿದರು. ಇಷ್ಟಾದರೂ ಮೃತನ ಕುಟುಂಬ ಸದಸ್ಯರು ರುದ್ರಭೂಮಿಗೂ ಭೇಟಿ ನೀಡಲಿಲ್ಲ.
ತೆಲಂಗಾಣ ರಾಜಕಾರಣಕ್ಕೆ ವೈಎಸ್ಆರ್ ಕುಟುಂಬ ಎಂಟ್ರಿ, ಹೊಸ ಪಕ್ಷ ಹುಟ್ಟುಹಾಕಲಿದ್ದಾರೆ ಜಗನ್ ರೆಡ್ಡಿ ತಂಗಿ