ಆ್ಯಪ್ನಗರ

ಶರದ್‌ ವಿರುದ್ಧದ ಆಪಾದನೆಯಿಂದ ಮನನೊಂದು ರಾಜೀನಾಮೆ: ಅಜಿತ್‌

'ಆತ್ಮಸಾಕ್ಷಿ'ಗೆ ಬೆಲೆಕೊಟ್ಟು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ಪಕ್ಷದ ಹಿರಿಯ ಮುಖಂಡ ಅಜಿತ್‌ ಪವಾರ್‌ ತಿಳಿಸಿದ್ದಾರೆ.

Agencies 29 Sep 2019, 5:00 am
ಮುಂಬಯಿ: ಮಹಾರಾಷ್ಟ್ರ ರಾಜ್ಯ ಸಹಕಾರ ಬ್ಯಾಂಕ್‌ ಹಗರಣದಲ್ಲಿ ಅನಗತ್ಯವಾಗಿ ತಮ್ಮ ಸಂಬಂಧಿ ಹಾಗೂ ಎನ್‌ಸಿಪಿ ವರಿಷ್ಠ ಶರದ್‌ ಪವಾರ್‌ ಹೆಸರನ್ನು ಸೇರಿಸಿರುವುದರಿಂದ ಆಘಾತಗೊಂಡು 'ಆತ್ಮಸಾಕ್ಷಿ'ಗೆ ಬೆಲೆಕೊಟ್ಟು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ಪಕ್ಷದ ಹಿರಿಯ ಮುಖಂಡ ಅಜಿತ್‌ ಪವಾರ್‌ ತಿಳಿಸಿದ್ದಾರೆ.
Vijaya Karnataka Web decided to quit because allegations against sharad pawar pained me ajit
ಶರದ್‌ ವಿರುದ್ಧದ ಆಪಾದನೆಯಿಂದ ಮನನೊಂದು ರಾಜೀನಾಮೆ: ಅಜಿತ್‌

ಶನಿವಾರ ಬೆಳಗ್ಗೆ ಶರದ್‌ ಪವಾರ್‌ ಅವನ್ನು ಭೇಟಿಯಾದ ಬಳಿಕ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ''ಈಗ ಹಗರಣದ ಬಿರುಗಾಳಿಗೆ ಸಿಲುಕಿರುವ ಬ್ಯಾಂಕಿನ ಜತೆಗೆ ಶರದ್‌ ಪವಾರ್‌ ಅವರು ಯಾವುದೇ ರೀತಿಯ ಸಂಬಂಧ ಇಟ್ಟುಕೊಂಡಿರಲಿಲ್ಲ. ಅದರ ವಹಿವಾಟಿನಲ್ಲಿಅವರದ್ದು ಯಾವ ಪಾತ್ರವೂ ಇರಲಿಲ್ಲ. ಆದರೂ ಪ್ರಕರಣದಲ್ಲಿಪವಾರ್‌ ಸಾಹೇಬರ ಹೆಸರು ತಳುಕು ಹಾಕಿಕೊಂಡಿರುವುದು ಬೇಸರದ ಸಂಗತಿ,'' ಎಂದರು. ''ಶರದ್‌ ಪವಾರ್‌ ಅವರ ಆಶೀರ್ವಾದದಿಂದಲೇ ನಾನು ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಏರಿದ್ದೆ. ಈ ವಯಸ್ಸಿನಲ್ಲಿಅವರು ಅಪಖ್ಯಾತಿಯನ್ನು ಎದುರಿಸಬೇಕಾಗಿರುವುದು ನನ್ನ ಕಾರಣದಿಂದಾಗಿ ಎಂದು ಭಾವಿಸಿದ್ದೇನೆ. ಆದ್ದರಿಂದ, ನನ್ನ ಆತ್ಮಸಾಕ್ಷಿಗೆ ಅನುಗುಣವಾಗಿ ರಾಜೀನಾಮೆ ನೀಡಲು ನಿರ್ಧರಿಸಿದೆ,'' ಎಂದು ವಿವರಿಸಿದರು. ವಿವಾದಿತ ಬ್ಯಾಂಕ್‌ನ ಈ ಹಿಂದಿನ ನಿರ್ಣಯಗಳಲ್ಲಿಯಾರೋ ಒಬ್ಬಿಬ್ಬರ ಪಾತ್ರ ಇರಲಿಲ್ಲ. ಸಾಲ ನೀಡಿಕೆ ಮತ್ತಿತರೆ ಕ್ರಮಗಳು ಸಹಕಾರಿ ಬ್ಯಾಂಕ್‌ ಆಡಳಿತ ಮಂಡಳಿಯ ನಿರ್ಧಾರ ಆಧರಿಸಿ ಜರುಗಿವೆ. ಆ ಮಂಡಳಿಯಲ್ಲಿಎಲ್ಲಪಕ್ಷಗಳ ಮುಖಂಡರೂ ಸದಸ್ಯರಾಗಿದ್ದರು. ಹೀಗಿರುವಾಗಿ ಈಗ ಯಾರೋ ಕೆಲವರನ್ನು ಗುರಿಯಾಗಿಸಿಕೊಂಡು ತನಿಖೆ ನಡೆಸುವುದು ಸರಿಯಲ್ಲಎಂದು ಅಜಿತ್‌ ಪವಾರ್‌ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ