ಆ್ಯಪ್ನಗರ

ಜೀವಂತ ಪ್ರಾಣಿಗಳ ರಫ್ತು ನಿಷೇಧಕ್ಕೆ ಕೇಂದ್ರ ಸರಕಾರ ನಿರ್ಧಾರ

ಪ್ರಾಣಿ ದಯಾ ಸಂಘಗಳು ಹಾಗೂ ಪ್ರಾಣಿ ಹಕ್ಕುಗಳ ಕಾರ‍್ಯಕರ್ತರ ಮನವಿಗೆ ಸ್ಪಂದಿಸಿರುವ ಕೇಂದ್ರ ಸರಕಾರವು ದೇಶಾದ್ಯಂತ ಎಲ್ಲ ಬಂದರುಗಳಿಂದ ಜೀವಂತ ಪ್ರಾಣಿಗಳ ರಫ್ತನನ್ನು ನಿಷೇಧಿಸಲು ನಿರ್ಧರಿಸಿದೆ.

Vijaya Karnataka 11 Aug 2018, 9:10 am
ಹೊಸದಿಲ್ಲಿ: ಪ್ರಾಣಿ ದಯಾ ಸಂಘಗಳು ಹಾಗೂ ಪ್ರಾಣಿ ಹಕ್ಕುಗಳ ಕಾರ‍್ಯಕರ್ತರ ಮನವಿಗೆ ಸ್ಪಂದಿಸಿರುವ ಕೇಂದ್ರ ಸರಕಾರವು ದೇಶಾದ್ಯಂತ ಎಲ್ಲ ಬಂದರುಗಳಿಂದ ಜೀವಂತ ಪ್ರಾಣಿಗಳ ರಫ್ತನನ್ನು ನಿಷೇಧಿಸಲು ನಿರ್ಧರಿಸಿದೆ.
Vijaya Karnataka Web peta


ಆಗಸ್ಟ್‌ 22ರಂದು ಬಕ್ರೀದ್‌ ಹಬ್ಬ ನಡೆಯಲಿದ್ದು ದುಬೈ ಸೇರಿದಂತೆ ಅರಬ್‌ ದೇಶಗಳಲ್ಲಿ ಭಾರತೀಯ ಕುರಿ, ಮೇಕೆಗಳಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಗುಜರಾತ್‌ನ ಕಛ್‌ ಬಂದರಿನಿಂದ ಎಗ್ಗಿಲ್ಲದೇ ಕುರಿ, ಮೇಕೆ ಸೇರಿದಂತೆ ಅನೇಕ ಜೀವಂತ ಪ್ರಾಣಿಗಳನ್ನು ರಫ್ತು ಮಾಡಲಾಗುತ್ತಿದೆ ಎಂಬ ಮಾಹಿತಿ ಬೆನ್ನಲ್ಲೇ ನೌಕಾ ಸಾರಿಗೆ ಸಚಿವಾಲಯ ನಿಷೇಧಕ್ಕೆ ಮುಂದಾಗಿದೆ.

ಗುಜರಾತ್‌ ಹಾಗೂ ಮಹಾರಾಷ್ಟ್ರದಲ್ಲಿ ಸ್ಥಳೀಯರಿಂದ ಹಾಗೂ ಪ್ರಾಣಿ ದಯಾ ಸಂಘಗಳು ನಡೆಸುತ್ತಿರುವ ಪ್ರತಿಭಟನೆಗಳಿಗೆ ಮಣಿದು ಸಚಿವಾಲಯ ಈ ತೀರ್ಮಾನ ಕೈಗೊಂಡಿದೆ. ವಾಸ್ತವದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಜೀವಂತ ಪ್ರಾಣಿಗಳ ರಫ್ತಿನಿಂದ ಕೋಟ್ಯಂತರ ರೂ. ಆದಾಯ ಸರಕಾರದ ಬೊಕ್ಕಸಕ್ಕೆ ಹರಿದುಬರುತ್ತಿದ್ದರೂ ಈ ನಿರ್ಧಾರ ಕೈಗೊಳ್ಳಲಾಗಿದೆ. 2013-14ನೇ ಸಾಲಿನಲ್ಲಿ ಜೀವಂತ ಪ್ರಾಣಿಗಳ ರಫ್ತಿನಿಂದ 69.30 ಕೋಟಿ ರೂ. ಆದಾಯ ಬಂದಿದ್ದರೆ, 2017-18ನೇ ಸಾಲಿನಲ್ಲಿ ಈ ಮೊತ್ತ 411.02 ಕೋಟಿ ರೂ. ದಾಟಿದೆ ಎನ್ನುತ್ತವೆ ವಾಣಿಜ್ಯ ಸಚಿವಾಲಯದ ಅಂಕಿ-ಅಂಶಗಳು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ