ಆ್ಯಪ್ನಗರ

ಆಸ್ಟ್ರಿಯಾ ಜೊತೆ ನಾವಿದ್ದೇವೆ; ಉಗ್ರರ ದಾಳಿಗೆ ಬೆಚ್ಚಿದ ರಾಷ್ಟ್ರಕ್ಕೆ ನರೇಂದ್ರ ಮೋದಿ ಸಾಂತ್ವನ

ಉಗ್ರರ ದಾಳಿಗೆ ಬೆಚ್ಚಿದ ರಾಷ್ಟ್ರ ಯೂರೋಪ್‌ ಖಂಡದ ಆಸ್ಟ್ರಿಯಾಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಸಾಂತ್ವನ ಹೇಳಿದ್ದಾರೆ. ಕಳೆದ ರಾತ್ರಿ ಅಟ್ಟಹಾಸ ಮೆರೆದಿದ್ದ ರಕ್ತಪಾತವನ್ನೇ ಹರಿಸಿದ್ದರು. ವಿಯೆನ್ನಾದ ಕಿಕ್ಕಿರಿದ ಪ್ರದೇಶದಲ್ಲಿ ಉಗ್ರರು ಗುಂಡು ಹಾರಿಸಿ ಭೀಕರತೆ ಮೆರೆದಿದ್ದರು.

Vijaya Karnataka Web 3 Nov 2020, 1:29 pm
ಹೊಸದಿಲ್ಲಿ: ಯೂರೋಪ್‌ ಖಂಡದಲ್ಲಿ ಕಳೆದ ರಾತ್ರಿ ಅಟ್ಟಹಾಸ ಮೆರೆದಿದ್ದ ರಕ್ತಪಾತವನ್ನೇ ಹರಿಸಿದ್ದರು. ಆಸ್ಟ್ರಿಯಾ ರಾಜಧಾನಿ ವಿಯೆನ್ನಾದ ಕಿಕ್ಕಿರಿದ ಪ್ರದೇಶದಲ್ಲಿ ಏಕಾಏಕಿ ಉಗ್ರರು ಏಕಾಏಕಿ ಗುಂಡು ಹಾರಿಸಿದ್ದು ಈ ಪೈಕಿ ಒಬ್ಬರು ಮೃತಪಟ್ಟರೆ, 15 ಮಂದಿ ಹೆಚ್ಚು ಮಂದಿಗೆ ಗಂಭೀರ ಗಾಯವಾಗಿದೆ ಎಂದು ಅಲ್ಲಿನ ಪೊಲೀಸರು ತಿಳಿಸಿದ್ದಾರೆ.
Vijaya Karnataka Web PM Modi


ಆಸ್ಟ್ರಿಯಾ: ವಿಯೆನ್ನಾದಲ್ಲಿ ಉಗ್ರರ ದಾಳಿಗೆ ಮೂವರು ಬಲಿ, 15 ಮಂದಿಗೆ ಗಾಯ; 6 ಕಡೆ ಗುಂಡು ಹಾರಿಸಿ ರಣ ಕೇಕೆ!

ಉಗ್ರರ ರಾಕ್ಷಸೀ ಪ್ರವೃತ್ತಿಯನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಖಂಡಿಸಿದ್ದು, ಟ್ವೀಟ್‌ ಮೂಲಕ ಉಗ್ರರ ಕುಕೃತ್ಯದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೇ ವಿಯೆನ್ನಾದಲ್ಲಿ ಉಗ್ರರ ದಾಳಿ ಕೃತ್ಯದ ವಿಷಯ ತಿಳಿದು ತೀವ್ರವಾದ ಆತಂಕ ಮತ್ತು ಬೇಸರವಾಯಿತು. ಇಂತಹ ಕೆಟ್ಟ ಸಮಯದಲ್ಲಿ ಭಾರತವು ಆಸ್ಟ್ರಿಯಾ ಜೊತೆ ನಿಲ್ಲಲಿದೆ. ಘಟನೆಯಲ್ಲಿ ಸಾವನ್ನಪ್ಪಿದವರು ಮತ್ತು ಗಾಯಗೊಂಡವರ ಕುಟುಂಬಕ್ಕೆ ಸಂತಾಪಗಳು ಎಂದು ನರೇಂದ್ರ ಮೋದಿ ಹೇಳಿದ್ದಾರೆ.

ತೋಳಿನಲ್ಲಿ ಬ್ಯಾಗ್, ಕೈಯಲ್ಲಿ ಎಕೆ47, ಸಿಕ್ಕ ಸಿಕ್ಕವರ ಮೇಲೆ ಗುಂಡು: ಮುಂಬಯಿ ಟೆರರ್‌ ಅಟ್ಯಾಕ್‌ನಂತೆ ವಿಯೆನ್ನಾದಲ್ಲೂ ದಾಳಿ!

ಫ್ರಾನ್ಸ್‌ ಬಳಿಕ ಆಸ್ಟ್ರಿಯಾದ ವಿಯೆನ್ನಾದಲ್ಲೂ ಉಗ್ರರು ದುಷ್ಕೃತ್ಯವೆಸಗಿದ್ದು, ವಿಯೆನ್ನಾದ ಪ್ರಮುಖ ಪ್ರದೇಶಗಳ ಆರು ಕಡೆಗಳಲ್ಲಿ ಗುಂಡಿನ ದಾಳಿ ನಡೆಸಿ ಇಬ್ಬರ ಪ್ರಾಣವನ್ನು ಕಸಿದುಕೊಂಡಿದ್ದಾರೆ. ಒಬ್ಬ ಉಗ್ರನನ್ನು ಪೊಲೀಸರು ಕೊಂದಿದ್ದು, ಕೆಲವರನ್ನು ಸೆರೆ ಹಿಡಿದಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಉಗ್ರ ದಾಳಿ ಸಂಬಂಧ ವಿಡಿಯೊಗಳು ಹರಿದಾಡುತ್ತಿದ್ದು ನವೆಂಬರ್‌ 26,2008 ಮುಂಬಯಿನ ಮೇಲೆ ನಡೆದ ದಾಳಿಯಂತೆ ಇದೂ ಆಗಿದೆ ಎಂದು ಹೇಳಲಾಗ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ