ಆ್ಯಪ್ನಗರ

ಮಾನನಷ್ಟ ಪ್ರಕರಣ: ಖುದ್ದು ಹಾಜರಾಗಲು ರಾಹುಲ್‌ಗೆ ಮತ್ತೊಂದು ಅವಕಾಶ

ಆರೆಸ್ಸೆಸ್‌ ವಿರುದ್ಧ ಮಾನಹಾನಿಕರ ಹೇಳಿಕೆ ನೀಡಿದ್ದಕ್ಕಾಗಿ ಮಾನನಷ್ಟ ಮೊಕದ್ದಮೆ ಎದುರಿಸುತ್ತಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಆರೋಪಪಟ್ಟಿ ದಾಖಲಿಸುವುದಕ್ಕಾಗಿ ಏಪ್ರಿಲ್ 23ರಂದು ತನ್ನ ಮುಂದೆ ಹಾಜರಾಗುವಂತೆ ಭಿವಂಡಿ ನ್ಯಾಯಾಲಯ ಆದೇಶಿಸಿದೆ.

Vijaya Karnataka Web 17 Jan 2018, 2:36 pm
ಹೊಸದಿಲ್ಲಿ: ಆರೆಸ್ಸೆಸ್‌ ವಿರುದ್ಧ ಮಾನಹಾನಿಕರ ಹೇಳಿಕೆ ನೀಡಿದ್ದಕ್ಕಾಗಿ ಮಾನನಷ್ಟ ಮೊಕದ್ದಮೆ ಎದುರಿಸುತ್ತಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಆರೋಪಪಟ್ಟಿ ದಾಖಲಿಸುವುದಕ್ಕಾಗಿ ಏಪ್ರಿಲ್ 23ರಂದು ತನ್ನ ಮುಂದೆ ಹಾಜರಾಗುವಂತೆ ಭಿವಂಡಿ ನ್ಯಾಯಾಲಯ ಆದೇಶಿಸಿದೆ.
Vijaya Karnataka Web defamation case bhiwandi court orders rahul gandhi to appear on april 23
ಮಾನನಷ್ಟ ಪ್ರಕರಣ: ಖುದ್ದು ಹಾಜರಾಗಲು ರಾಹುಲ್‌ಗೆ ಮತ್ತೊಂದು ಅವಕಾಶ


'ಆರೆಸ್ಸೆಸ್‌ ಮಂದಿ ಗಾಂಧಿಯನ್ನು ಕೊಂದರು' ಎಂದು ಹೇಳಿದ್ದಕ್ಕಾಗಿ ರಾಹುಲ್ ವಿರುದ್ಧ ಸಂಘಪರಿವಾರ ಮಾನನಷ್ಟ ದಾವೆ ಹೂಡಿದೆ.

ರಾಹುಲ್‌ ಇಂದು ಕೋರ್ಟಿಗೆ ಹಾಜರಾಗಬೇಕಿತ್ತು. ಆದರೆ ಹಾಜರಾಗದೆ ವಕೀಲರನ್ನು ಮಾತ್ರ ಕಳಿಸಿಕೊಟ್ಟಿದ್ದರು. ಹೀಗಾಗಿ ತನ್ನ ಮುಂದೆ ಖುದ್ದಾಗಿ ಹಾಜರಾಗಲು ರಾಹುಲ್‌ಗೆ ಕೋರ್ಟ್‌ ಮತ್ತೊಂದು ಅವಕಾಶ ನೀಡಿದೆ.

2014ರ ಮಾರ್ಚ್‌ನಲ್ಲಿ ಥಾಣೆಯಲ್ಲಿ ನಡೆದ ರ‍್ಯಾಲಿಯಲ್ಲಿ ರಾಹುಲ್‌ ಆರೆಸ್ಸೆಸ್‌ ವಿರುದ್ಧ ಈ ಆರೋಪ ಮಾಡಿದ್ದರು. ಕೂಡಲೇ ಆರೆಸ್ಸೆಸ್‌ ಕಾರ್ಯಕರ್ತರೊಬ್ಬರು ಸಂಘದ ಪರವಾಗಿ ಕೇಸು ದಾಖಲಿಸಿದ್ದರು.

'ಆರೆಸ್ಸೆಸ್‌ ಮಂದಿಯೇ ಗಾಂಧೀಜಿಯನ್ನು ಕೊಂದಿದ್ದರು. ಇಂದು ಅವರ ಜನರೇ ಗಾಂಧಿ ಬಗ್ಗೆ ಮಾತನಾಡುತ್ತಾರೆ. ಅವರು ಸರ್ದಾರ್‌ ಪಟೇಲ್‌ ಮತ್ತು ಗಾಂಧೀಜಿ ಇಬ್ಬರನ್ನೂ ವಿರೋಧಿಸಿದ್ದರು' ಎಂದು ರಾಹುಲ್‌ ಆಗ ಹೇಳಿಕೆ ನೀಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ