ಆ್ಯಪ್ನಗರ

ಹಂದ್ವಾರಾ ಎನ್‌ಕೌಂಟರ್: ತುಂಬ ದು:ಖಿತನಾಗಿದ್ದೇನೆ ಎಂದ ರಕ್ಷಣಾ ಸಚಿವ ರಾಜನಾಥ್ ಸಿಂಗ್!

ಹಂದ್ವಾರಾ ಎನ್‌ಕೌಂಟರ್‌ ಘಟನೆ ತಮ್ಮ ಮನಸ್ಸನ್ನು ಘಾಸಿಗೊಳಿಸಿದೆ ಎಂದಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕರ್ನಲ್ ಅಶುತೋಷ್ ಶರ್ಮಾ ಸೇರಿದಂತೆ ಎಲ್ಲಾ ಐವರು ಯೋಧರ ಬಲಿದಾನವನ್ನು ಈ ದೇಶ ಎಂದಿಗೂ ಮರೆಯವುದಿಲ್ಲ ಎಂದು ಹೇಳಿದ್ದಾರೆ.

Vijaya Karnataka Web 3 May 2020, 7:46 pm
ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಹಂದ್ವಾರಾದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಬಲಿಯಾದ ಯೋಧರನ್ನು ನೆನೆದು ಭಾವುಕರಾಗಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಘಟನೆಯಿಂದ ತುಂಬ ದು:ಖಿತನಾಗಿದ್ದೇನೆ ಎಂದು ಹೇಳಿದ್ದಾರೆ.
Vijaya Karnataka Web Rajnath Singh
ಸಂಗ್ರಹ ಚಿತ್ರ


ಈ ಕುರಿತು ಟ್ವೀಟ್ ಮಾಡಿರುವ ರಾಜನಾಥ್ ಸಿಂಗ್, ಹಂದ್ವಾರಾ ಎನ್‌ಕೌಂಟರ್‌ ಘಟನೆ ತಮ್ಮ ಮನಸ್ಸನ್ನು ಘಾಸಿಗೊಳಿಸಿದೆ ಎಂದು ಹೇಳಿದ್ದಾರೆ. ಎನ್‌ಕೌಂಟರ್‌ನಲ್ಲಿ ವೀರ ಯೋಧರು ಹುತಾತ್ಮರಾಗಿರುವುದು ಅತ್ಯಂತ ನೋವಿನ ಸಂಗತಿ ಎಂದು ಹೇಳಿದ್ದಾರೆ.

ಉಗ್ರರ ಪಾಲಿನ ದುಸ್ವಪ್ನ ಹುತಾತ್ಮ ಕರ್ನಲ್ ಅಶುತೋಷ್: ವೀರರ ಬಲಿದಾನ ವ್ಯರ್ಥವಾಗಲು ಬಿಡಲ್ಲ ಎಂದ ಪ್ರಧಾನಿ!

ಉಗ್ರರು ಗುರಾಣಿಯಾಗಿ ಬಳಿಸಿದ ನಾಗರಿಕರ ರಕ್ಷಣೆಗಾಗಿ ತಮ್ಮ ಪ್ರಾಣವನ್ನು ಅರ್ಪಿಸಿದ ಕರ್ನಲ್ ಅಶುತೋಷ್ ಶರ್ಮಾ ಸೇರಿದಂತೆ ಎಲ್ಲಾ ಐವರು ಯೋಧರ ಬಲಿದಾನವನ್ನು ಈ ದೇಶ ಎಂದಿಗೂ ಮರೆಯವುದಿಲ್ಲ ಎಂದು ರಾಜನಾಥ್ ಕಂಬನಿ ಮಿಡಿದಿದ್ದಾರೆ.


ಹುತಾತ್ಮರ ಕುಟುಂಬದೊಂದಿಗೆ ರಕ್ಷಣಾ ಇಲಾಖೆ ಗಟ್ಟಿಯಾಗಿ ನಿಲ್ಲಲಿದ್ದು, ಇಡೀ ದೇಶ ಕುಟುಂಬ ವರ್ಗದ ನೋವಿನಲ್ಲಿ ಭಾಗಿಯಾಗಿದೆ ಎಂದು ರಾಜನಾಥ್ ಸಿಂಗ್ ನುಡಿದಿದ್ದಾರೆ.

ಹಂದ್ವಾರಾದಲ್ಲಿ ಐವರು ಯೋಧರು ಹುತಾತ್ಮ, ಇಬ್ಬರು ಉಗ್ರರು ಎನ್‌ಕೌಂಟರ್‌

ನಿನ್ನೆ ತಡರಾತ್ರಿ ಹಂದ್ವಾರಾದಲ್ಲಿ ಉಗ್ರರ ಚಲನವಲನಗಳ ಕುರಿತು ಮಾಹಿತಿ ಪಡೆದ ಭಾರತೀಯ ಸೇನೆ ಹಾಗೂ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಇಲಾಖೆ, ಉಗ್ರರ ವಿರುದ್ಧ ಜಂಟಿ ಕಾರ್ಯಾಚರಣೆ ಕೈಗೊಂಡಿತ್ತು. ಕಾರ್ಯಾಚರಣೆಯ ನೇತೃತ್ವವಹಿಸಿದ್ದ 21ನೇ ರಾಷ್ಟ್ರೀಯ ರೈಫಲ್ಸ್‌ನ ಕರ್ನಲ್ ಅಶುತೋಷ್ ಶರ್ಮಾ ಸೇರಿದಂತೆ ಐವರು ಯೋಧರು ಹುತಾತ್ಮರಾಗಿರುವುದುನ್ನು ಇಲ್ಲಿ ಸ್ಮರಿಸಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ