ಹೊಸದಿಲ್ಲಿ: ಆತ್ಮ ನಿರ್ಭರ ಭಾರತ ಯೋಜನೆಗೆ ಮತ್ತಷ್ಟು ಬಲ ನೀಡಲು ಕೇಂದ್ರ ಸರಕಾರ ಮುಂದಾಗಿದೆ. ರಕ್ಷಣಾ ಇಲಾಖೆ 101 ಸೇನಾ ಸಾಮಗ್ರಿಗಳ ಆಮದನ್ನು ನಿಷೇಧಿಸಲಾಗಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾನುವಾರ ಹೇಳಿದ್ದಾರೆ. ಈ ಮೂಲಕ ಮೇಕ್ ಇನ್ ಇಂಡಿಯಾ ಕಲ್ಪನೆಗೆ ಹೆಚ್ಚಿನ ಬಲ ನೀಡಿದಂತಾಗಿದೆ.
ರಕ್ಷಣಾ ಇಲಾಖೆಯ ಈ ನಡೆಯಿಂದ ದೇಶಿಯ ಕಂಪನಿಗಳಿಗೆ ಮುಂದಿನ 6 ರಿಂದ 7 ವರ್ಷಗಳಲ್ಲಿ 4 ಲಕ್ಷ ಕೋಟಿ ರೂ. ಹೂಡಿಕೆಯಾಗಲಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದು, 2020 ಮತ್ತು 2024ರ ನಡುವೆ ಹಂತ ಹಂತವಾಗಿ ಈ ಕ್ರಮವನ್ನು ಅನುಷ್ಠಾನಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.
ರಕ್ಷಣಾ ಇಲಾಖೆ ಪಟ್ಟಿ ಮಾಡಿದ 101 ಉತ್ಪನ್ನಗಳಲ್ಲಿ ಅತ್ಯುನ್ನತ ತಂತ್ರಜ್ಞಾನ ಹೊಂದಿದ ಶಸ್ತ್ರಾಸ್ತ್ರಗಳು ಕೂಡ ಇವೆ. ಆರ್ಟಿಲರಿ ಗನ್ಸ್, ಅಸಾಲ್ಟ್ ರೈಫಲ್ಸ್, ಕಾರ್ವೆಟ್ಸ್, ಸೋನಾರ್ ವ್ಯವಸ್ಥೆ, ಸಾರಿಗೆ ವಿಮಾನಗಳು, ಲಘು ಯುದ್ಧ ವಿಮಾನಗಳು, ರಾಡಾರ್ಗಳು ಮತ್ತಿತರ ಉತ್ಪನ್ನಗಳ ಆಮದನ್ನು ರಕ್ಷಣಾ ಇಲಾಖೆ ರದ್ದುಪಡಿಸಿದೆ.
ದೇಶದ ‘ಮೂಡ್’ ಮೋದಿ ಸರ್ಕಾರದ ಪರ..! ರಾಹುಲ್ ಮತ್ತೆ ‘ಕೈ’ ಸಾರಥಿ ಆಗಬೇಕಂತೆ..
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಮುಂದಿನ ದಿನಗಳಲ್ಲಿ ಸಂಪೂರ್ಣವಾಗಿ ರಕ್ಷಣಾ ಸಾಮಾಗ್ರಿ ದೇಶದಲ್ಲೇ ಉತ್ಪಾದನೆ ಆಗಲಿದೆ. ಇದಕ್ಕಾಗಿ ಪ್ರತ್ಯೇಕ ಬಜೆಟ್ ಮುಖ್ಯಸ್ಥರ ನೇಮಕ ಮಾಡಲಾಗುತ್ತದೆ ಎಂದು ಹೇಳಿದ್ದಾರೆ. ದುಬಾರಿ ವಿದೇಶಿ ರಕ್ಷಣಾ ಸಾಮಗ್ರಿಗಳ ಬದಲಾಗಿ ದೇಶೀಯ ರಕ್ಷಣಾ ಸಾಮಗ್ರಿಗಳನ್ನು ಪ್ರಚುರಪಡಿಸಿ ದೇಶದ ಸೇನೆಯ ಮೂರೂ ಪಡೆಗಳ ಶಕ್ತಿ ಬಲವರ್ಧನೆ ಮಾಡುವುದು ಕೇಂದ್ರ ಸರ್ಕಾರದ ಉದ್ದೇಶವಾಗಿದೆ.
ರಕ್ಷಣಾ ಕ್ಷೇತ್ರದಲ್ಲಿ ‘ಆತ್ಮ ನಿರ್ಭರ್ ’ ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರ
ಸ್ವಾವಲಂಬನೆಗೆ ಕರೆ ನೀಡಿರುವ ಪ್ರಧಾನಿ ಮೋದಿ ಆತ್ಮನಿರ್ಭರ ಭಾರತಕ್ಕೆ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸಿದ್ದಾರೆ. ಅವರಿಂದ ಪ್ರೇರಣೆ ಪಡೆದು ಇದುವರೆಗೆ ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿದ್ದ 101 ರಕ್ಷಣಾ ಸಾಮಗ್ರಿಗಳ ಮೇಲೆ ನಿರ್ಬಂಧ ಹೇರಲಾಗುತ್ತದೆ. ರಕ್ಷಣಾ ಇಲಾಖೆಯ ಸ್ವಾವಲಂಬನೆ ಹಾದಿಯಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ ಎಂದು ರಾಜನಾಥ್ ಸಿಂಗ್ ತಿಳಿಸಿದ್ದಾರೆ.
'ಆತ್ಮ ನಿರ್ಭರ್' ಶೀರ್ಷಿಕೆಯಲ್ಲಿ ಬರಲಿದೆ ಸಿನಿಮಾ! ತಂದೆಗಾಗಿ 1200 ಕಿ.ಮೀ. ಸೈಕಲ್ ತುಳಿದ ಹುಡುಗಿಯೇ ಕಥಾನಾಯಕಿ!
ರಕ್ಷಣಾ ಇಲಾಖೆಯ ಈ ನಡೆಯಿಂದ ದೇಶಿಯ ಕಂಪನಿಗಳಿಗೆ ಮುಂದಿನ 6 ರಿಂದ 7 ವರ್ಷಗಳಲ್ಲಿ 4 ಲಕ್ಷ ಕೋಟಿ ರೂ. ಹೂಡಿಕೆಯಾಗಲಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದು, 2020 ಮತ್ತು 2024ರ ನಡುವೆ ಹಂತ ಹಂತವಾಗಿ ಈ ಕ್ರಮವನ್ನು ಅನುಷ್ಠಾನಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.
ರಕ್ಷಣಾ ಇಲಾಖೆ ಪಟ್ಟಿ ಮಾಡಿದ 101 ಉತ್ಪನ್ನಗಳಲ್ಲಿ ಅತ್ಯುನ್ನತ ತಂತ್ರಜ್ಞಾನ ಹೊಂದಿದ ಶಸ್ತ್ರಾಸ್ತ್ರಗಳು ಕೂಡ ಇವೆ. ಆರ್ಟಿಲರಿ ಗನ್ಸ್, ಅಸಾಲ್ಟ್ ರೈಫಲ್ಸ್, ಕಾರ್ವೆಟ್ಸ್, ಸೋನಾರ್ ವ್ಯವಸ್ಥೆ, ಸಾರಿಗೆ ವಿಮಾನಗಳು, ಲಘು ಯುದ್ಧ ವಿಮಾನಗಳು, ರಾಡಾರ್ಗಳು ಮತ್ತಿತರ ಉತ್ಪನ್ನಗಳ ಆಮದನ್ನು ರಕ್ಷಣಾ ಇಲಾಖೆ ರದ್ದುಪಡಿಸಿದೆ.
ದೇಶದ ‘ಮೂಡ್’ ಮೋದಿ ಸರ್ಕಾರದ ಪರ..! ರಾಹುಲ್ ಮತ್ತೆ ‘ಕೈ’ ಸಾರಥಿ ಆಗಬೇಕಂತೆ..
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಮುಂದಿನ ದಿನಗಳಲ್ಲಿ ಸಂಪೂರ್ಣವಾಗಿ ರಕ್ಷಣಾ ಸಾಮಾಗ್ರಿ ದೇಶದಲ್ಲೇ ಉತ್ಪಾದನೆ ಆಗಲಿದೆ. ಇದಕ್ಕಾಗಿ ಪ್ರತ್ಯೇಕ ಬಜೆಟ್ ಮುಖ್ಯಸ್ಥರ ನೇಮಕ ಮಾಡಲಾಗುತ್ತದೆ ಎಂದು ಹೇಳಿದ್ದಾರೆ. ದುಬಾರಿ ವಿದೇಶಿ ರಕ್ಷಣಾ ಸಾಮಗ್ರಿಗಳ ಬದಲಾಗಿ ದೇಶೀಯ ರಕ್ಷಣಾ ಸಾಮಗ್ರಿಗಳನ್ನು ಪ್ರಚುರಪಡಿಸಿ ದೇಶದ ಸೇನೆಯ ಮೂರೂ ಪಡೆಗಳ ಶಕ್ತಿ ಬಲವರ್ಧನೆ ಮಾಡುವುದು ಕೇಂದ್ರ ಸರ್ಕಾರದ ಉದ್ದೇಶವಾಗಿದೆ.
ರಕ್ಷಣಾ ಕ್ಷೇತ್ರದಲ್ಲಿ ‘ಆತ್ಮ ನಿರ್ಭರ್ ’ ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರ
ಸ್ವಾವಲಂಬನೆಗೆ ಕರೆ ನೀಡಿರುವ ಪ್ರಧಾನಿ ಮೋದಿ ಆತ್ಮನಿರ್ಭರ ಭಾರತಕ್ಕೆ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸಿದ್ದಾರೆ. ಅವರಿಂದ ಪ್ರೇರಣೆ ಪಡೆದು ಇದುವರೆಗೆ ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿದ್ದ 101 ರಕ್ಷಣಾ ಸಾಮಗ್ರಿಗಳ ಮೇಲೆ ನಿರ್ಬಂಧ ಹೇರಲಾಗುತ್ತದೆ. ರಕ್ಷಣಾ ಇಲಾಖೆಯ ಸ್ವಾವಲಂಬನೆ ಹಾದಿಯಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ ಎಂದು ರಾಜನಾಥ್ ಸಿಂಗ್ ತಿಳಿಸಿದ್ದಾರೆ.
'ಆತ್ಮ ನಿರ್ಭರ್' ಶೀರ್ಷಿಕೆಯಲ್ಲಿ ಬರಲಿದೆ ಸಿನಿಮಾ! ತಂದೆಗಾಗಿ 1200 ಕಿ.ಮೀ. ಸೈಕಲ್ ತುಳಿದ ಹುಡುಗಿಯೇ ಕಥಾನಾಯಕಿ!