ಆ್ಯಪ್ನಗರ

ವಿಜಯದಶಮಿ ದಿನ ಭಾರತಕ್ಕೆ ಮೊದಲ ರಫೇಲ್‌ ಹಸ್ತಾಂತರ

ಪ್ಯಾರಿಸ್‌ನಿಂದ 590 ಕಿ.ಮೀ ದೂರದಲ್ಲಿರುವ ಬೊರ್ಡೆಕ್ಸ್‌ನಲ್ಲಿರುವ ಡಸಾಲ್ಟ್‌ ಏವಿಯೇಷನ್‌ ತಯಾರಿಕಾ ಘಟಕದಲ್ಲಿಮೊದಲ ರಫೇಲ್‌ಅನ್ನು ರಾಜನಾಥ ಸಿಂಗ್‌ ಅವರಿಗೆ ಹಸ್ತಾಂತರಿಸುವ ಮೂಲಕ ಅತ್ಯಾಧುನಿಕ ಯುದ್ಧ ವಿಮಾನ ಭಾರತೀಯ ವಾಯುಪಡೆಗೆ ಅಧಿಕೃತವಾಗಿ ಸೇರ್ಪಡೆಯಾಗಲಿದೆ.

PTI 7 Oct 2019, 8:06 am
ಹೊಸದಿಲ್ಲಿ: ರಕ್ಷಣಾ ಸಚಿವ ರಾಜನಾಥ ಸಿಂಗ್‌ ಅವರು ವಿಜಯ ದಶಮಿಯಂದು ಫ್ರಾನ್ಸ್‌ನಲ್ಲಿಮೊದಲ ರಫೇಲ್‌ ಯುದ್ಧವಿಮಾನವನ್ನು ಔಪಚಾರಿಕವಾಗಿ ಸ್ವೀಕರಿಸಲಿದ್ದು, ಅಲ್ಲಿಯೇ 'ಆಯುಧ ಪೂಜೆ' ನೆರವೇರಿಸಲಿದ್ದಾರೆ.
Vijaya Karnataka Web rajnath


ಪ್ಯಾರಿಸ್‌ನಿಂದ 590 ಕಿ.ಮೀ ದೂರದಲ್ಲಿರುವ ಬೊರ್ಡೆಕ್ಸ್‌ನಲ್ಲಿರುವ ಡಸಾಲ್ಟ್‌ ಏವಿಯೇಷನ್‌ ತಯಾರಿಕಾ ಘಟಕದಲ್ಲಿಮೊದಲ ರಫೇಲ್‌ ಅನ್ನು ರಾಜನಾಥ ಸಿಂಗ್‌ ಅವರಿಗೆ ಹಸ್ತಾಂತರಿಸುವ ಮೂಲಕ ಅತ್ಯಾಧುನಿಕ ಯುದ್ಧವಿಮಾನ ಭಾರತೀಯ ವಾಯುಪಡೆಗೆ ಅಧಿಕೃತವಾಗಿ ಸೇರ್ಪಡೆಯಾಗಲಿದೆ. ಕಾಕತಾಳೀಯ ಎಂದರೆ ಅಂದು (ಅ.8) ಭಾರತೀಯ ವಾಯುಪಡೆ ದಿನವೂ ಹೌದು. ಆದರೆ, ಕ್ಷಿಪಣಿ ನಿರೋಧಕ ವ್ಯವಸ್ಥೆ ಸೇರಿದಂತೆ ಅತ್ಯಾಧುನಿಕ ರಕ್ಷಣಾ ವ್ಯವಸ್ಥೆ ಅಳವಡಿಕೆ, ಪೈಲಟ್‌ಗಳಿಗೆ ತರಬೇತಿ ಬಳಿಕ 2020ರ ಮೇ ತಿಂಗಳಿನಲ್ಲಿವಾಯುಪಡೆಗೆ ಸೇರ್ಪಡೆಯಾಗಲಿದೆ. ಆಯುಧ ಪೂಜೆ ನೆರವೇರಿಸಿದ ಬಳಿಕ ಸಿಂಗ್‌ ಅವರು ರಫೇಲ್‌ನಲ್ಲಿಹಾರಾಟ ನಡೆಸಲಿದ್ದಾರೆ. ಕೆಲದಿನಗಳ ಹಿಂದೆ ಬೆಂಗಳೂರಿನಲ್ಲಿತೇಜಸ್‌ ಯುದ್ಧ ವಿಮಾನದಲ್ಲಿಯೂ ಅವರು ಹಾರಾಟ ನಡೆಸಿದ್ದರು.

ಸೈನಿಕರ ಪರಿಹಾರ 4 ಪಟ್ಟು ಹೆಚ್ಚಳ

''ಗೃಹ ಸಚಿವರಾಗಿದ್ದಾಗಲೂ ರಾಜನಾಥ ಸಿಂಗ್‌ ಅವರು ವಿಜಯ ದಶಮಿಯಂದು ಆಯುಧ ಪೂಜೆ ನೆರವೇರಿಸುತ್ತಿದ್ದರು. ಈ ಸಲ ಫ್ರಾನ್ಸ್‌ನಲ್ಲಿರಫೇಲ್‌ಗೆ ಪೂಜೆ ನೆರವೇರಿಸುವ ಮೂಲಕ ಆ ಸಂಪ್ರದಾಯವನ್ನು ಮುಂದುವರಿಸಲಿದ್ದಾರೆ,'' ಎಂದು ರಕ್ಷಣಾ ಸಚಿವಾಲಯದ ಮೂಲಗಳು ತಿಳಿಸಿವೆ.

ಫ್ರೆಂಚ್‌ ವಾಯುಪಡೆ ವಿಮಾನಗಳ ಮೂಲಕ ಭಾರತೀಯ ಪೈಲಟ್‌ಗಳಿಗೆ ರಫೇಲ್‌ ಹಾರಾಟದ ತರಬೇತಿ ನೀಡಲಾಗುತ್ತಿದೆ. ಒಟ್ಟು 24 ಪೈಲಟ್‌ಗಳಿಗೆ ಮೂರು ಬ್ಯಾಚ್‌ಗಳಲ್ಲಿತರಬೇತಿ ನೀಡಲು ನಿರ್ಧರಿಸಲಾಗಿದೆ.

ಉಗ್ರ ನಿಗ್ರಹಕ್ಕೆ ಕಮಾಂಡೊಗಳ ಏರ್‌ಡ್ರಾಪ್‌

ಅಭಿನಂದನ್‌ಗೆ ಪುರಸ್ಕಾರ

ಭಾರತೀಯ ವಾಯುಪಡೆಯ 51ನೇ ಸ್ಕ್ಯಾ‌ಡ್ರನ್‌ನಲ್ಲಿಕಾರ್ಯರ್ನಿಹಿಸುವ ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ಧಮಾನ್‌ ಅವರನ್ನು ಅ.8ರಂದು ಗೌರವಿಸಲಾಗುತ್ತದೆ. ವಾಯುಪಡೆ ಮುಖ್ಯಸ್ಥ ಏರ್‌ ಚೀಫ್‌ ಮಾರ್ಷಲ್‌ ಆರ್‌.ಕೆ.ಎಸ್‌. ಬದೌರಿಯಾ ಅವರು 'ಯೂನಿಟ್‌ ಅವಾರ್ಡ್‌' ನೀಡಿ ಸನ್ಮಾನಿಸುವರು. ಕಳೆದ ಫೆಬ್ರವರಿಯಲ್ಲಿಪಾಕಿಸ್ತಾನದ ಎಫ್‌-16 ಯುದ್ಧವಿಮಾನವನ್ನು ಅಭಿನಂದನ್‌ ಹೊಡೆದುರುಳಿಸಿದ್ದರು. ಬಾಲಾಕೋಟ್‌ ವಾಯುದಾಳಿಯನ್ನು ಸಮರ್ಥವಾಗಿ ನಿರ್ವಹಿಸಿದ ಸಿಗ್ನಲ್‌ ಘಟಕದ ಸ್ಕಾ$್ವಡ್ರನ್‌ ಮುಖ್ಯಸ್ಥ ಮಿಂಟಿ ಅಗರ್‌ವಾಲ್‌ ಅವರನ್ನೂ ವಾಯುಪಡೆ ದಿನದಂದು ಗೌರವಿಸಲಾಗುತ್ತದೆ.

36 ರಫೇಲ್‌ ಯುದ್ಧವಿಮಾನಗಳನ್ನು ಭಾರತ ಫ್ರಾನ್ಸ್‌ನಿಂದ ಖರೀದಿಸಲಿದೆ
59,000 ಕೋಟಿ ರೂಪಾಯಿ ರಫೇಲ್‌ ಒಪ್ಪಂದದ ಮೊತ್ತ

ಎಲ್ಲಿನಿಯೋಜನೆ?

- ಮೊದಲ ಸ್ಕ್ವಾಡ್ರನ್‌ ಭಾರತ-ಪಾಕ್‌ ಗಡಿಯಿಂದ 220 ಕಿ.ಮೀ ದೂರದಲ್ಲಿರುವ ಅಂಬಾಲಾದಲ್ಲಿ
- ಎರಡನೇ ಸ್ಕ್ವಾಡ್ರನ್‌ ಪಶ್ಚಿಮ ಬಂಗಾಳದ ಹಾಸಿಮಾರಾ ವಾಯುನೆಲೆಯಲ್ಲಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ