ಹೊಸದಿಲ್ಲಿ: ಬಾಂಬೆ ಹೈಕೋರ್ಟ್ ನ್ಯಾಯಮೂರ್ತಿ ಅಖಿಲ್ ಎ.ಕುರೇಶಿ ಅವರಿಗೆ ಬಡ್ತಿ ನೀಡಿ ಮಧ್ಯಪ್ರದೇಶ ಹೈಕೋರ್ಟ್ ನ್ಯಾಯಮೂರ್ತಿಯಗಿ ನೇಮಕ ಮಾಡುವಂತೆ ಕೊಲಿಜಿಯಂ ಸಲ್ಲಿಸಿರುವ ಪ್ರಸ್ತಾವ ಇನ್ನೂ ಪರಿಶೀಲನೆಯಲ್ಲಿದೆ ಎಂದು ಕೇಂದ್ರ ಸರಕಾರ ಸೋಮವಾರ ಸುಪ್ರೀಂ ಕೋರ್ಟ್ಗೆ ತಿಳಿಸಿದೆ. ಜತೆಗೆ, ಈ ವಿಚಾರವಾಗಿ ತೀರ್ಮಾನ ಕೈಗೊಳ್ಳಲು ಎರಡು ವಾರ ಕಾಲವಕಾಶ ನೀಡಬೇಕು ಎಂದೂ ಮನವಿ ಮಾಡಿದೆ. ನ್ಯಾ.ಕುರೇಶಿ ಬಡ್ತಿ ಕುರಿತ ಪ್ರಸ್ತಾವವನ್ನು ಯಾವುದೇ ಕಾರಣ ನೀಡದೇ ಕೇಂದ್ರ ಸರಕಾರ ವಾಪಸ್ ಕಳಿಸಿದ್ದು, ಸರಕಾರ ಹಾಗೂ ಕೊಲಿಜಿಯಂ ನಡುವೆ ಮತ್ತೆ ಸಂಘರ್ಷ ಏರ್ಪಟ್ಟಿದೆ ಎಂದು ವರದಿಯಾಗಿತ್ತು. ನ್ಯಾ.ಕುರೇಶಿ ಅವರನ್ನು ಮಧ್ಯಪ್ರದೇಶ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಮಾಡುವಂತೆ ಕೇಂದ್ರಕ್ಕೆ ನಿರ್ದೇಶನ ನೀಡಬೇಕೆಂದು ಆಗ್ರಹಿಸಿ ಗುಜರಾತ್ ಹೈಕೋರ್ಟ್ ಅಡ್ವೊಕೇಟ್ಸ್ ಅಸೋಸಿಯೇಷನ್ ಸರ್ವೋಚ್ಚ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿತ್ತು. ಅದರ ಬೆನ್ನಲ್ಲೇ ಸಾಲಿಸಿಟರ್ ಜನರನ್ ತುಷಾರ್ ಮೆಹ್ತಾ ಮೂಲಕ ಸುಪ್ರೀಂಗೆ ತನ್ನ ನಿಲುವು ಸ್ಪಷ್ಟಪಡಿಸಿದ ಸರಕಾರವು, ಎರಡು ವಾರಗಳಲ್ಲಿ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿತು.
ನ್ಯಾ.ಕುರೇಶಿ ಬಡ್ತಿ ಶಿಫಾರಸನ್ನು ತಿರಸ್ಕರಿಸಿಲ್ಲವೆಂದ ಕೇಂದ್ರ ಸರಕಾರ
ಕುರೇಶಿ ಅವರನ್ನು ಮಧ್ಯಪ್ರದೇಶ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಮಾಡುವಂತೆ ಕೇಂದ್ರಕ್ಕೆ ನಿರ್ದೇಶನ ನೀಡಬೇಕೆಂದು ಆಗ್ರಹಿಸಿ ಗುಜರಾತ್ ಹೈಕೋರ್ಟ್ ಅಡ್ವೊಕೇಟ್ಸ್ ಅಸೋಸಿಯೇಷನ್ ಸರ್ವೋಚ್ಚ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿತ್ತು.
Agencies 23 Jul 2019, 5:00 am