ಆ್ಯಪ್ನಗರ

ಸಾಮೂಹಿಕ ಆತ್ಮಹತ್ಯೆ: ಅನುಮಾನ ತಂದ ಹಿರಿಯ ಮಹಿಳೆ ಸಾವು

ರಾಷ್ಟ್ರರಾಜಧಾನಿಯ ಬುರಾರಿಯ ಸಂತ್‌ ನಗರದ 11 ಜನರ ಸಾಮೂಹಿಕ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಅಚ್ಚರಿಯ ಅಂಶಗಳು ಪತ್ತೆಯಾಗುತ್ತಿವೆ.

Vijaya Karnataka Web 2 Jul 2018, 4:58 pm
ಹೊಸದಿಲ್ಲಿ: ರಾಷ್ಟ್ರರಾಜಧಾನಿಯ ಬುರಾರಿಯ ಸಂತ್‌ ನಗರದ 11 ಜನರ ಸಾಮೂಹಿಕ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಅಚ್ಚರಿಯ ಅಂಶಗಳು ಪತ್ತೆಯಾಗುತ್ತಿವೆ.
Vijaya Karnataka Web delhi death


ಒಂದೆಡೆ ಕುಟುಂಬ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮುಂಚೆ ಸಾಕಷ್ಟು ಪೂರ್ವಸಿದ್ಧತೆ ಮಾಡಿಕೊಂಡಿರುವ ಬಗ್ಗೆ ಬರೆದುಕೊಂಡಿದ್ದ ಡೈರಿ ಪತ್ತೆಯಾಗಿದ್ದು, ವಿವಿಧ ಸಂಗತಿ ಬಯಲಾಗಿದ್ದರೆ, ಮತ್ತೊಂದೆಡೆ ತನಿಖೆ ನಡೆಸುತ್ತಿರುವ ಪೊಲೀಸರು ಕೂಡ ಬೆಚ್ಚಿ ಬೀಳುವಂತೆ ಮಾಡುತ್ತಿದೆ.

ಆತ್ಮಹತ್ಯೆ ಮಾಡಿಕೊಂಡವರ ಪೈಕಿ 6 ಮೃತದೇಹಗಳ ಮರಣೋತ್ತರ ಪರೀಕ್ಷಾ ವರದಿ ಬಂದಿದ್ದು, ಅದರಲ್ಲಿ ನೇಣು ಬಿಗಿದುಕೊಂಡು ಸಾವು ಎಂದಿದೆ.

ಒಂದೇ ಕುಟುಂಬದ 11 ಜನರ ಆತ್ಮಹತ್ಯೆ

ಉಳಿದಂತೆ ಜೂನ್ 17ರಿಂದ ಜುಲೈ 1ರವರೆಗಿನ ವಿವಿಧ ಸಂದರ್ಭ ಮತ್ತು ಕುಟುಂಬದ ಸದಸ್ಯರ ನಡೆ, ನೆರೆಮನೆಯವರ ವಿವರ, ಕುಟುಂಬ ವ್ಯವಹರಿಸುತ್ತಿದ್ದ ಜನರು ಹೀಗೆ ವಿವಿಧ ರೀತಿಯ ಮಾಹಿತಿಯನ್ನು ಪೊಲೀಸರು ಸಂಗ್ರಹಿಸುತ್ತಿದ್ದಾರೆ.

ಡೈರಿಯಲ್ಲಿತ್ತು ಬೆಚ್ಚಿಬೀಳಿಸುವ ಸಂಗತಿ

ಹಾಗಿದ್ದೂ ಮನೆಯಲ್ಲಿದ್ದ ಹಿರಿಯ ಮಹಿಳೆಯ ಸಾವು ಹಲವು ಸಂಶಯ ಹುಟ್ಟುಹಾಕಿದ್ದು, ಆಕೆಯನ್ನು ಯಾರಾದರೂ ಹತ್ಯೆಗೈದಿರಬಹುದೇ ಅಥವಾ ಆಕೆಯದ್ದೂ ಆತ್ಮಹತ್ಯೆಯಾಗಿರಬಹುದೇ ಎಂಬ ರೀತಿಯ ಪ್ರಶ್ನೆಗಳು ಪೊಲೀಸರನ್ನು ಕಾಡುತ್ತಿವೆ. ಜತೆಗೆ ಆತ್ಮಹತ್ಯೆ ಮಾಡಿಕೊಂಡಿರುವ ರೀತಿ ಕೂಡ ಅಚ್ಚರಿ ಮೂಡಿಸಿದ್ದು, ಹೆಚ್ಚಿನ ತನಿಖೆಯ ಬಳಿಕ ಕಾರಣ ಬಯಲಾಗಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ