ದಿಲ್ಲಿಯಲ್ಲಿ ಮತ್ತೆ ಸಮ-ಬೆಸ ವಾಹನ ನಿಯಮ ಜಾರಿ: ಸಿಎಂ ಕೇಜ್ರಿವಾಲ್ ವಾಹನಕ್ಕೂ ಇಲ್ಲ ವಿನಾಯ್ತಿ!
ದಿಲ್ಲಿಯಲ್ಲಿ ಮತ್ತೆ ಸಮ-ಬೆಸ ವಾಹನ ಓಡಾಟ ನಿಯಮ ಜಾರಿಗೆ ಬರಲಿದೆ. ನಿಯಮ ಜಾರಿ ಮಾಡಲು ಇನ್ನೂ 15 ದಿನಗಳ ಕಾಲಾವಕಾಶವಿದ್ದು, ಈಗಲೇ ದಿಲ್ಲಿ ಸಿಎಂ ಪ್ರಕಟಣೆ ಹೊರಡಿಸಿದ್ದಾರೆ. ದ್ವಿಚಕ್ರ ವಾಹನಕ್ಕೆ ಈ ನಿಯಮ ಅನ್ವಯ ಆಗೋದಿಲ್ಲ ಅನ್ನೋದಷ್ಟೇ ಸಮಾಧಾನ.
Vijaya Karnataka Web 17 Oct 2019, 1:15 pm
ಹೊಸ ದಿಲ್ಲಿ: ರಾಜಧಾನಿ ಹೊಸ ದಿಲ್ಲಿಯಲ್ಲಿ ಮತ್ತೆ ಸಮ-ಬೆಸ ವಾಹನಗಳ ಓಡಾಟ ಜಾರಿ ಮಾಡಲು ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ನಿರ್ಧರಿಸಿದ್ದಾರೆ. ನವೆಂಬರ್ 4 ರಿಂದ 15ರವರೆಗೂ ಪ್ರಾಯೋಗಿಕವಾಗಿ ಈ ಯೋಜನೆ ಜಾರಿಗೆ ತರ್ತಿರೋದಾಗಿ ಕೇಜ್ರಿವಾಲ್ ಪ್ರಕಟಿಸಿದ್ಧಾರೆ. ಈ ನಿಯಮ, ಹೊರ ರಾಜ್ಯಗಳಿಂದ ಬರುವ ವಾಹನಗಳಿಗೂ ಅನ್ವಯವಾಗಲಿದೆ. ಖಾಸಗಿ ಬಳಕೆಯ 4 ಚಕ್ರದ ವಾಹನಗಳಿಗೆ ಮಾತ್ರ ಈ ಯೋಜನೆ ಅನ್ವಯವಾಗಲಿದ್ದು, ದ್ವಿಚಕ್ರ ವಾಹನಗಳನ್ನು ಹೊರತುಪಡಿಸಲಾಗಿದೆ.
ಮಾಜಿಯಾದ್ರೂ ಮನೆ ಖಾಲಿ ಮಾಡದ ಮಾನಗೇಡಿಗಳು! ಗ್ಯಾಸ್, ನೀರು, ಕರೆಂಟ್ ಕಟ್!
ನವೆಂಬರ್ 4 ರಿಂದ 15ರವರೆಗೂ ಭಾನುವಾರವನ್ನು ಹೊರತುಪಡಿಸಿ ಉಳಿದ ದಿನಗಳಲ್ಲಿ ಬೆಳಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ಸಮ-ಬೆಸ ನಿಯಮ ಜಾರಿಯಲ್ಲಿ ಇರಲಿದೆ. ಈ ನಿಯಮ ಉಲ್ಲಂಘಿಸುವವರಿಗೆ 4 ಸಾವಿರ ರೂ. ದಂಡ ವಿಧಿಸಲು ನಿರ್ಧರಿಸಲಾಗಿದೆ.
ರಾಷ್ಟ್ರಪತಿ, ಉಪ ರಾಷ್ಟ್ರಪತಿ, ಪ್ರಧಾನ ಮಂತ್ರಿ, ರಾಜ್ಯಪಾಲರು, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ, ಲೋಕಸಭಾ ಸ್ಪೀಕರ್, ಕೇಂದ್ರ ಸಚಿವರು, ರಾಜ್ಯಸಭೆ ಹಾಗೂ ಲೋಕಸಭೆಯ ವಿಪಕ್ಷ ನಾಯಕರು, ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳ ವಾಹನಗಳಿಗೆ ಸಮ-ಬೆಸ ನಿಯಮ ಅನ್ವಯ ಆಗೋದಿಲ್ಲ. ಆದ್ರೆ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ತಮ್ಮ ವಾಹನ ಹಾಗೂ ತಮ್ಮ ಸಂಪುಟ ಸಚಿವರ ವಾಹನಗಳನ್ನು ಈ ನಿಯಮಗಳ ಅಡಿ ಸೇರ್ಪಡೆ ಮಾಡಿಕೊಂಡು ಇಡೀ ರಾಜ್ಯಕ್ಕೆ ಮಾದರಿಯಾಗಿದ್ದಾರೆ. ಶಾಲಾ ವಾಹನಗಳು ಈ ನಿಯಮಗಳ ವ್ಯಾಪ್ತಿಗೆ ಬರೋದಿಲ್ಲ ಎಂದು ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಪ್ರಕಟಿಸಿದ್ದಾರೆ.
ಕರ್ಮದ ಫಲ; ಕಾರಿಗೆ ಇಟ್ಟಿಗೆ ಎಸೆದವನಿಗೆ ಏನಾಯಿತು ಗೊತ್ತಾ?
ಏನಿದು ಸಮ-ಬೆಸ ವಾಹನ ಓಡಾಟ..?
ವಾಹನಗಳ ನಂಬರ್ ಪ್ಲೇಟ್ನಲ್ಲಿ ಇರುವ ಕೊನೆ ಅಂಕಿ ಸಮ ಸಂಖ್ಯೆಯೋ, ಬೆಸ ಸಂಖ್ಯೆಯೋ ಅನ್ನೋದ್ರ ಆಧಾರದ ಮೇಲೆ ನಿಯಮ ಅನ್ವಯ ಆಗುತ್ತೆ. ಉದಾಹರಣೆಗೆ ನಿಮ್ಮ ವಾಹನದ ಸಂಖ್ಯೆ ಡಿಎಲ್ 05, 1999 ಆಗಿದ್ದಲ್ಲಿ, ಕೊನೆಯ ಅಂಕಿ 9 ಆಗಿದ್ದು, ಇದು ಬೆಸಸಂಖ್ಯೆಯಾದ ಕಾರಣ, ಬೆಸ ಸಂಖ್ಯೆಯ ವಾಹನ ಓಡಾಟ ಮಾಡಬೇಕಾದ ದಿನ ಮಾತ್ರ ನಿಮ್ಮ ವಾಹನ ರಸ್ತೆಗೆ ಇಳಿಯಬೇಕಿದೆ. ಒಂದು ವೇಳೆ ನಿಮ್ಮ ವಾಹನದ ಸಂಖ್ಯೆ ಡಿಎಲ್ 03, 1996 ಆಗಿದ್ದಲ್ಲಿ, ಕೊನೆಯ ಅಂಕಿ 6 ಆಗಿದ್ದು, ಇದು ಸಮಸಂಖ್ಯೆಯಾದ ಕಾರಣ, ಸಮ ಸಂಖ್ಯೆಯ ವಾಹನ ಓಡಾಟ ಮಾಡಬೇಕಾದ ದಿನ ಮಾತ್ರ ನಿಮ್ಮ ವಾಹನ ರಸ್ತೆಗೆ ಇಳಿಯಬೇಕಾಗುತ್ತೆ.
ಒಂದು ದಿನ ಸಮಸಂಖ್ಯೆಯ ವಾಹನ ಓಡಾಟಕ್ಕೆ ಅನುಮತಿ ನೀಡಿದ್ರೆ, ಮತ್ತೊಂದು ದಿನ ಬೆಸ ಸಂಖ್ಯೆಯ ವಾಹನ ಓಡಾಟಕ್ಕೆ ಅನುಮತಿ ಸಿಗುತ್ತೆ. ಈ ಮೂಲಕ, ರಾಜ್ಯದಲ್ಲಿ ಅರ್ಧದಷ್ಟು ವಾಹನ ಸಂಚಾರ ಕಡಿಮೆ ಯಾಗುತ್ತೆ. ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಈ ತಂತ್ರಗಾರಿಕೆ, ಈ ಹಿಂದೆಯೂ ಜಾರಿಗೆ ಬಂದಿತ್ತು. ಆದ್ರೆ, ಸೂಕ್ತ ರೀತಿಯಲ್ಲಿ ಜಾರಿಯಾಗದ ಕಾರಣ, ತಡೆಹಿಡಿಯಲಾಗಿತ್ತು. ಇದೀಗ ಮತ್ತೆ ಆರಂಭಿಸಲು ಕೇಜ್ರಿ ಸರ್ಕಾರ ಮುಂದಾಗಿದೆ.
ಗುಂಡು ಹೊಡೆದಂತೆ ಪ್ರಶ್ನೆ ಕೇಳ್ತಾನೆ ಚೋಟಾ ರಿಪೋರ್ಟರ್! 12ರ ಬಾಲಕ ಈಗ ಸೋಷಿಯಲ್ ಮೀಡಿಯಾ ಸೆನ್ಸೇಷನ್!
ಮಾಜಿಯಾದ್ರೂ ಮನೆ ಖಾಲಿ ಮಾಡದ ಮಾನಗೇಡಿಗಳು! ಗ್ಯಾಸ್, ನೀರು, ಕರೆಂಟ್ ಕಟ್!
ನವೆಂಬರ್ 4 ರಿಂದ 15ರವರೆಗೂ ಭಾನುವಾರವನ್ನು ಹೊರತುಪಡಿಸಿ ಉಳಿದ ದಿನಗಳಲ್ಲಿ ಬೆಳಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ಸಮ-ಬೆಸ ನಿಯಮ ಜಾರಿಯಲ್ಲಿ ಇರಲಿದೆ. ಈ ನಿಯಮ ಉಲ್ಲಂಘಿಸುವವರಿಗೆ 4 ಸಾವಿರ ರೂ. ದಂಡ ವಿಧಿಸಲು ನಿರ್ಧರಿಸಲಾಗಿದೆ.
ರಾಷ್ಟ್ರಪತಿ, ಉಪ ರಾಷ್ಟ್ರಪತಿ, ಪ್ರಧಾನ ಮಂತ್ರಿ, ರಾಜ್ಯಪಾಲರು, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ, ಲೋಕಸಭಾ ಸ್ಪೀಕರ್, ಕೇಂದ್ರ ಸಚಿವರು, ರಾಜ್ಯಸಭೆ ಹಾಗೂ ಲೋಕಸಭೆಯ ವಿಪಕ್ಷ ನಾಯಕರು, ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳ ವಾಹನಗಳಿಗೆ ಸಮ-ಬೆಸ ನಿಯಮ ಅನ್ವಯ ಆಗೋದಿಲ್ಲ. ಆದ್ರೆ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ತಮ್ಮ ವಾಹನ ಹಾಗೂ ತಮ್ಮ ಸಂಪುಟ ಸಚಿವರ ವಾಹನಗಳನ್ನು ಈ ನಿಯಮಗಳ ಅಡಿ ಸೇರ್ಪಡೆ ಮಾಡಿಕೊಂಡು ಇಡೀ ರಾಜ್ಯಕ್ಕೆ ಮಾದರಿಯಾಗಿದ್ದಾರೆ. ಶಾಲಾ ವಾಹನಗಳು ಈ ನಿಯಮಗಳ ವ್ಯಾಪ್ತಿಗೆ ಬರೋದಿಲ್ಲ ಎಂದು ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಪ್ರಕಟಿಸಿದ್ದಾರೆ.
ಕರ್ಮದ ಫಲ; ಕಾರಿಗೆ ಇಟ್ಟಿಗೆ ಎಸೆದವನಿಗೆ ಏನಾಯಿತು ಗೊತ್ತಾ?
ಏನಿದು ಸಮ-ಬೆಸ ವಾಹನ ಓಡಾಟ..?
ವಾಹನಗಳ ನಂಬರ್ ಪ್ಲೇಟ್ನಲ್ಲಿ ಇರುವ ಕೊನೆ ಅಂಕಿ ಸಮ ಸಂಖ್ಯೆಯೋ, ಬೆಸ ಸಂಖ್ಯೆಯೋ ಅನ್ನೋದ್ರ ಆಧಾರದ ಮೇಲೆ ನಿಯಮ ಅನ್ವಯ ಆಗುತ್ತೆ. ಉದಾಹರಣೆಗೆ ನಿಮ್ಮ ವಾಹನದ ಸಂಖ್ಯೆ ಡಿಎಲ್ 05, 1999 ಆಗಿದ್ದಲ್ಲಿ, ಕೊನೆಯ ಅಂಕಿ 9 ಆಗಿದ್ದು, ಇದು ಬೆಸಸಂಖ್ಯೆಯಾದ ಕಾರಣ, ಬೆಸ ಸಂಖ್ಯೆಯ ವಾಹನ ಓಡಾಟ ಮಾಡಬೇಕಾದ ದಿನ ಮಾತ್ರ ನಿಮ್ಮ ವಾಹನ ರಸ್ತೆಗೆ ಇಳಿಯಬೇಕಿದೆ. ಒಂದು ವೇಳೆ ನಿಮ್ಮ ವಾಹನದ ಸಂಖ್ಯೆ ಡಿಎಲ್ 03, 1996 ಆಗಿದ್ದಲ್ಲಿ, ಕೊನೆಯ ಅಂಕಿ 6 ಆಗಿದ್ದು, ಇದು ಸಮಸಂಖ್ಯೆಯಾದ ಕಾರಣ, ಸಮ ಸಂಖ್ಯೆಯ ವಾಹನ ಓಡಾಟ ಮಾಡಬೇಕಾದ ದಿನ ಮಾತ್ರ ನಿಮ್ಮ ವಾಹನ ರಸ್ತೆಗೆ ಇಳಿಯಬೇಕಾಗುತ್ತೆ.
ಒಂದು ದಿನ ಸಮಸಂಖ್ಯೆಯ ವಾಹನ ಓಡಾಟಕ್ಕೆ ಅನುಮತಿ ನೀಡಿದ್ರೆ, ಮತ್ತೊಂದು ದಿನ ಬೆಸ ಸಂಖ್ಯೆಯ ವಾಹನ ಓಡಾಟಕ್ಕೆ ಅನುಮತಿ ಸಿಗುತ್ತೆ. ಈ ಮೂಲಕ, ರಾಜ್ಯದಲ್ಲಿ ಅರ್ಧದಷ್ಟು ವಾಹನ ಸಂಚಾರ ಕಡಿಮೆ ಯಾಗುತ್ತೆ. ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಈ ತಂತ್ರಗಾರಿಕೆ, ಈ ಹಿಂದೆಯೂ ಜಾರಿಗೆ ಬಂದಿತ್ತು. ಆದ್ರೆ, ಸೂಕ್ತ ರೀತಿಯಲ್ಲಿ ಜಾರಿಯಾಗದ ಕಾರಣ, ತಡೆಹಿಡಿಯಲಾಗಿತ್ತು. ಇದೀಗ ಮತ್ತೆ ಆರಂಭಿಸಲು ಕೇಜ್ರಿ ಸರ್ಕಾರ ಮುಂದಾಗಿದೆ.
ಗುಂಡು ಹೊಡೆದಂತೆ ಪ್ರಶ್ನೆ ಕೇಳ್ತಾನೆ ಚೋಟಾ ರಿಪೋರ್ಟರ್! 12ರ ಬಾಲಕ ಈಗ ಸೋಷಿಯಲ್ ಮೀಡಿಯಾ ಸೆನ್ಸೇಷನ್!