ಮುಜಫ್ಫರಪುರ: ಬಿಹಾರದ ಮುಜಫ್ಫರಪುರ ಬಾಲಿಕಾ ಗೃಹದಲ್ಲಿ ಬಾಲಕಿಯರ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ದಿಲ್ಲಿ ನ್ಯಾಯಾಲಯವು ಬಿಹಾರ ಪೀಪಲ್ಸ್ ಪಾರ್ಟಿಯ ಮಾಜಿ ಶಾಸಕ ಬೃಜೇಶ್ ಠಾಕೂರ್ ಸೇರಿ 19 ಜನರು ಅಪರಾಧಿಗಳೆಂದು ಸೋಮವಾರ ತೀರ್ಪು ನೀಡಿದೆ.
19 ತಪ್ಪಿತಸ್ಥರಲ್ಲಿ 8 ಮಹಿಳೆಯರು ಹಾಗೂ 11 ಪುರುಷರಿದ್ದಾರೆ. ಶಿಕ್ಷೆಯ ಪ್ರಮಾಣವನ್ನು ಕೋರ್ಟ್ ಜ.28ರಂದು ಪ್ರಕಟಿಸಲಿದೆ. ಒಬ್ಬ ಆರೋಪಿಯನ್ನು ಖುಲಾಸೆಗೊಳಿಸಿದೆ. ಠಾಕೂರ್ ನಡೆಸುತ್ತಿದ್ದ ಬಾಲಿಕಾ ಗೃಹದಲ್ಲಿ ಬಾಲಕಿಯರ ಮೇಲೆ ನಿರಂತರ ಲೈಂಗಿಕ ಶೋಷಣೆ ನಡೆಯುತ್ತಿದ್ದ ಸಂಗತಿ ಮುಂಬಯಿಯ 'ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್' ಸಂಸ್ಥೆ 2018ರಲ್ಲಿ ಸಮೀಕ್ಷೆ ನಡೆಸಿ ಬಿಹಾರ ಸರಕಾರಕ್ಕೆ ಅದೇ ವರ್ಷದ ಮೇ 26ರಂದು ಸಲ್ಲಿಸಿದ ವರದಿಯಿಂದ ಬೆಳಕಿಗೆ ಬಂದಿತ್ತು.
ಇದಾದ ಬಳಿಕ ಬಿಹಾರದ ಹಲವು ಕಡೆ ಇರುವ ಬಾಲಿಕಾ ಗೃಹಗಳಲ್ಲಿಬಾಲಕಿಯರ ಮೇಲೆ ಲೈಂಗಿಕ ಕಿರುಕುಳ ಹಾಗೂ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ ಎಂಬ ಆರೋಪಗಳು ಜೋರಾಗಿ ಕೇಳಿಬಂದಿದ್ದವು. ಮುಜಫ್ಫರಪುರ ಪ್ರಕರಣವು ದೇಶಾದ್ಯಂತ ಸಂಚಲನ ಸೃಷ್ಟಿಸಿತ್ತು. ಸಾರ್ವಜನಿಕರಿಂದ ವ್ಯಕ್ತವಾದ ಭಾರಿ ಆಕ್ರೋಶ ಹಾಗೂ ಪ್ರತಿಪಕ್ಷಗಳಿಂದ ತೀವ್ರ ಒತ್ತಡ ಎದುರಾದ ಹಿನ್ನೆಲೆಯಲ್ಲಿ ಬಿಹಾರ ಸಿಎಂ ನಿತೀಶ್ ಕುಮಾರ್ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿದ್ದರು.
ದಿಲ್ಲಿ ನ್ಯಾಯಾಲಯ ಕಳೆದ ವರ್ಷದ ಮಾರ್ಚ್ 30ರಂದು ಠಾಕೂರ್ ಸೇರಿ ಆರೋಪಿಗಳ ವಿರುದ್ಧ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಎಸಗಿದ ದೋಷಾರೋಪ ಹೊರಿಸಿತ್ತು. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಪ್ರಕರಣದ ವಿಚಾರಣೆಯನ್ನು 2019ರ ಫೆ.7ರಂದು ಮುಜಫ್ಫರ್ ಪುರ ಕೋರ್ಟ್ನಿಂದ ದಿಲ್ಲಿಯ ಸಾಕೇತ್ ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿರುವ ಪೋಕ್ಸೊ ಕೋರ್ಟ್ಗೆ ವರ್ಗಾಯಿಸಲಾಗಿತ್ತು. ಕೋರ್ಟ್ ಸೆಪ್ಟೆಂಬರ್ 30ರಂದು ವಿಚಾರಣೆ ಅಂತಿಮಗೊಳಿಸಿ ತೀರ್ಪು ಕಾಯ್ದಿರಿಸಿತ್ತು. ಹೆಚ್ಚುವರಿ ಸೆಷನ್ಸ್ ಕೋರ್ಟ್ ನ್ಯಾಯಾ ಧೀಶ ಸೌರಭ್ ಕುಲಶ್ರೇಷ್ಠ ಅವರು ಮಾಜಿ ಶಾಸಕ ಬೃಜೇಶ್ ಠಾಕೂರ್, ಬಿಹಾರದ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸೇರಿ ಒಟ್ಟು 18 ಮಂದಿಯನ್ನು ದೋಷಿಗಳು ಎಂದು ತೀರ್ಪು ನೀಡಿದರು.
ಠಾಕೂರ್ ವಿರುದ್ಧ ಪೋಕ್ಸೊ ಕಾಯಿದೆಯಡಿ ಹೊರಿಸಲಾಗಿದ್ದ ಆರೋಪಗಳನ್ನು ಕೋರ್ಟ್ ಎತ್ತಿಹಿಡಿಯಿತು. ರಾಜ್ಯದ ಸಮಾಜ ಕಲ್ಯಾಣ ಸಚುವೆಯಾಗಿದ್ದ ಮಂಜು ಶರ್ಮಾ ಅವರ ಪತಿ ಆರೋಪಿ ಠಾಕೂರ್ ಜತೆ ನಂಟು ಹೊಂದಿದ್ದಾರೆ ಎಂಬ ಆರೋಪ ಕೇಳಿಬಂದಿದ್ದರಿಂದ ರಾಜಕೀಯ ಒತ್ತಡಗಳಿಗೆ ಮಣಿದು ಮಂಜು ಶರ್ಮಾ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
19 ತಪ್ಪಿತಸ್ಥರಲ್ಲಿ 8 ಮಹಿಳೆಯರು ಹಾಗೂ 11 ಪುರುಷರಿದ್ದಾರೆ. ಶಿಕ್ಷೆಯ ಪ್ರಮಾಣವನ್ನು ಕೋರ್ಟ್ ಜ.28ರಂದು ಪ್ರಕಟಿಸಲಿದೆ. ಒಬ್ಬ ಆರೋಪಿಯನ್ನು ಖುಲಾಸೆಗೊಳಿಸಿದೆ. ಠಾಕೂರ್ ನಡೆಸುತ್ತಿದ್ದ ಬಾಲಿಕಾ ಗೃಹದಲ್ಲಿ ಬಾಲಕಿಯರ ಮೇಲೆ ನಿರಂತರ ಲೈಂಗಿಕ ಶೋಷಣೆ ನಡೆಯುತ್ತಿದ್ದ ಸಂಗತಿ ಮುಂಬಯಿಯ 'ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್' ಸಂಸ್ಥೆ 2018ರಲ್ಲಿ ಸಮೀಕ್ಷೆ ನಡೆಸಿ ಬಿಹಾರ ಸರಕಾರಕ್ಕೆ ಅದೇ ವರ್ಷದ ಮೇ 26ರಂದು ಸಲ್ಲಿಸಿದ ವರದಿಯಿಂದ ಬೆಳಕಿಗೆ ಬಂದಿತ್ತು.
ಇದಾದ ಬಳಿಕ ಬಿಹಾರದ ಹಲವು ಕಡೆ ಇರುವ ಬಾಲಿಕಾ ಗೃಹಗಳಲ್ಲಿಬಾಲಕಿಯರ ಮೇಲೆ ಲೈಂಗಿಕ ಕಿರುಕುಳ ಹಾಗೂ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ ಎಂಬ ಆರೋಪಗಳು ಜೋರಾಗಿ ಕೇಳಿಬಂದಿದ್ದವು. ಮುಜಫ್ಫರಪುರ ಪ್ರಕರಣವು ದೇಶಾದ್ಯಂತ ಸಂಚಲನ ಸೃಷ್ಟಿಸಿತ್ತು. ಸಾರ್ವಜನಿಕರಿಂದ ವ್ಯಕ್ತವಾದ ಭಾರಿ ಆಕ್ರೋಶ ಹಾಗೂ ಪ್ರತಿಪಕ್ಷಗಳಿಂದ ತೀವ್ರ ಒತ್ತಡ ಎದುರಾದ ಹಿನ್ನೆಲೆಯಲ್ಲಿ ಬಿಹಾರ ಸಿಎಂ ನಿತೀಶ್ ಕುಮಾರ್ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿದ್ದರು.
ದಿಲ್ಲಿ ನ್ಯಾಯಾಲಯ ಕಳೆದ ವರ್ಷದ ಮಾರ್ಚ್ 30ರಂದು ಠಾಕೂರ್ ಸೇರಿ ಆರೋಪಿಗಳ ವಿರುದ್ಧ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಎಸಗಿದ ದೋಷಾರೋಪ ಹೊರಿಸಿತ್ತು. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಪ್ರಕರಣದ ವಿಚಾರಣೆಯನ್ನು 2019ರ ಫೆ.7ರಂದು ಮುಜಫ್ಫರ್ ಪುರ ಕೋರ್ಟ್ನಿಂದ ದಿಲ್ಲಿಯ ಸಾಕೇತ್ ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿರುವ ಪೋಕ್ಸೊ ಕೋರ್ಟ್ಗೆ ವರ್ಗಾಯಿಸಲಾಗಿತ್ತು. ಕೋರ್ಟ್ ಸೆಪ್ಟೆಂಬರ್ 30ರಂದು ವಿಚಾರಣೆ ಅಂತಿಮಗೊಳಿಸಿ ತೀರ್ಪು ಕಾಯ್ದಿರಿಸಿತ್ತು. ಹೆಚ್ಚುವರಿ ಸೆಷನ್ಸ್ ಕೋರ್ಟ್ ನ್ಯಾಯಾ ಧೀಶ ಸೌರಭ್ ಕುಲಶ್ರೇಷ್ಠ ಅವರು ಮಾಜಿ ಶಾಸಕ ಬೃಜೇಶ್ ಠಾಕೂರ್, ಬಿಹಾರದ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸೇರಿ ಒಟ್ಟು 18 ಮಂದಿಯನ್ನು ದೋಷಿಗಳು ಎಂದು ತೀರ್ಪು ನೀಡಿದರು.
ಠಾಕೂರ್ ವಿರುದ್ಧ ಪೋಕ್ಸೊ ಕಾಯಿದೆಯಡಿ ಹೊರಿಸಲಾಗಿದ್ದ ಆರೋಪಗಳನ್ನು ಕೋರ್ಟ್ ಎತ್ತಿಹಿಡಿಯಿತು. ರಾಜ್ಯದ ಸಮಾಜ ಕಲ್ಯಾಣ ಸಚುವೆಯಾಗಿದ್ದ ಮಂಜು ಶರ್ಮಾ ಅವರ ಪತಿ ಆರೋಪಿ ಠಾಕೂರ್ ಜತೆ ನಂಟು ಹೊಂದಿದ್ದಾರೆ ಎಂಬ ಆರೋಪ ಕೇಳಿಬಂದಿದ್ದರಿಂದ ರಾಜಕೀಯ ಒತ್ತಡಗಳಿಗೆ ಮಣಿದು ಮಂಜು ಶರ್ಮಾ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.