ಹೊಸದಿಲ್ಲಿ: ಕಲ್ಲಿದ್ದಲು ಹಂಚಿಕೆ ಹಗರಣದಲ್ಲಿ ಉದ್ಯಮಿ ನವೀನ್ ಜಿಂದಾಲ್ ಹಾಗೂ ಇತರೆ ನಾಲ್ವರ ವಿರುದ್ಧ ಆರೋಪ ಪಟ್ಟಿ ದಾಖಲಿಸುವಂತೆ ವಿಶೇಷ ನ್ಯಾಯಾಲಯ ಸೋಮವಾರ ಸಿಬಿಐಗೆ ನಿರ್ದೇಶನÜ ನೀಡಿದೆ. ಜಿಂದಾಲ್ ಮತ್ತು ಇತರೆ ನಾಲ್ವರ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 420 (ವಂಚನೆ) ಮತ್ತು 120-ಬಿ (ಕ್ರಿಮಿನಲ್ ಪಿತೂರಿ) ಅಡಿಯಲ್ಲಿ ಪ್ರಕರಣ ದಾಖಲಿಸುವಂತೆ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಭರತ್ ಪರಾಶರ ಆದೇಶಿಸಿದರು. ಜಿಂದಾಲ್ ಸ್ಟೀಲ್ ಆಂಡ್ ಪವರ್ ಲಿಮಿಡೆಟ್ನ ಮಾಜಿ ನಿರ್ದೇಶಕ ಸುಶೀಲ್ ಮಾರೂ, ಮಾಜಿ ಡೆಪ್ಯುಟಿ ಮ್ಯಾನೇಜಿಂಗ್ ಡೈರೆಕ್ಟರ್ ಆನಂದ್ ಗೋಯಲ್, ಮುಖ್ಯ ನಿರ್ವಾಹಣ ಅಧಿಕಾರಿ ವಿಕ್ರಾಂತ್ ಗುಜ್ರಾಲ್ ಮತ್ತು ಕಂಪನಿಯ ಪರವಾನಿಗೆ ಅಧಿಕಾರಿ ಡಿ.ಎನ್.ಅಬ್ರೋಲ್ ಅವರು ಜಿಂದಾಲ್ ಜತೆ ವಂಚನೆಗೆ ಸಹಕಾರ ನೀಡಿದ ಆರೋಪಕ್ಕೆ ಗುರಿಯಾಗಿದ್ದು, ಇವರ ವಿರುದ್ಧ ಕ್ರಮಕ್ಕೆ ಕೋರ್ಟ್ ಆದೇಶಿಸಿದೆ.
ಕಲ್ಲಿದ್ದಲು ಹಗರಣ: ನವೀನ್ ಜಿಂದಾಲ್ ವಿರುದ್ಧ ಚಾಜ್ಶೀಟ್ಗೆ ಕೋರ್ಟ್ ಆದೇಶ
ಜಿಂದಾಲ್ ಮತ್ತು ಇತರೆ ನಾಲ್ವರ ವಿರುದ್ಧ ವಂಚನೆ ಮತ್ತು ಕ್ರಿಮಿನಲ್ ಪಿತೂರಿ ಪ್ರಕರಣ ದಾಖಲಿಸುವಂತೆ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಭರತ್ ಪರಾಶರ ಆದೇಶಿಸಿದರು.
PTI 2 Jul 2019, 5:00 am