ಆ್ಯಪ್ನಗರ

ಸಂಬಳ ಕೇಳಿದ್ದಕ್ಕೆ ಕೊಲೆ; ದೇಹವನ್ನು ತುಂಡರಿಸಿ ಪ್ಯಾಕ್ ಮಾಡಿ ಚರಂಡಿಗೆಸೆದ

ಸಂಬಳ ಕೇಳಿದ್ದಕ್ಕೆ ಮನೆಗೆಲಸದ ಹುಡುಗಿಯನ್ನು ಕೊಲೆಗೈದು ತುಂಡು ತುಂಡು ಮಾಡಿ ಚರಂಡಿಗೆ ಬೀಸಾಡಿದ ಬೆಚ್ಚಿಬೀಳಿಸುವ ಘಟನೆ ನವದೆಹಲಿಯಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಬ್ ಕನ್ಸಲ್ಟೆನ್ಸಿ ಮಾಲೀಕನಾಗಿರುವ 30 ವರ್ಷದ ಮನಜೀತ್ ಕರ್ಕೇತಾನನ್ನು ಪೊಲೀಸರು ಬಂಧಿಸಿದ್ದು ತನಿಖೆ ನಡೆಸುತ್ತಿದ್ದಾರೆ.

TIMESOFINDIA.COM 21 May 2018, 3:39 pm
ಹೊಸದಿಲ್ಲಿ: ಸಂಬಳ ಕೇಳಿದ್ದಕ್ಕೆ ಮನೆಗೆಲಸದ ಹುಡುಗಿಯನ್ನು ಕೊಲೆಗೈದು ತುಂಡು ತುಂಡು ಮಾಡಿ ಚರಂಡಿಗೆ ಬೀಸಾಡಿದ ಬೆಚ್ಚಿಬೀಳಿಸುವ ಘಟನೆ ನವದೆಹಲಿಯಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಬ್ ಕನ್ಸಲ್ಟೆನ್ಸಿ ಮಾಲೀಕನಾಗಿರುವ 30 ವರ್ಷದ ಮನಜೀತ್ ಕರ್ಕೇತಾನನ್ನು ಪೊಲೀಸರು ಬಂಧಿಸಿದ್ದು ತನಿಖೆ ನಡೆಸುತ್ತಿದ್ದಾರೆ.
Vijaya Karnataka Web 48635020


ಘಟನೆ ವಿವರ:
ಜಾರ್ಖಂಡ್ ಮೂಲದ 16 ವರ್ಷದ ಬಾಲಕಿ ಸೋನು ಕುಮಾರಿ, ಕಳೆದ ಮೂರು ವರ್ಷಗಳಿಂದ ಆರೋಪಿ ಮನೆಯಲ್ಲಿ ಮನೆಗೆಲಸ ಮಾಡಿಕೊಂಡಿದ್ದಳು. ಆರೋಪಿಯೂ ಜಾರ್ಖಂಡ್ ಮೂಲದವನಾಗಿದ್ದು ಮೂರು ವರ್ಷದ ಹಿಂದೆ ಸೋನಿಯನ್ನು ತನ್ನ ಜತೆ ಕರೆದುಕೊಂಡಿದ್ದ. ತಂದೆಯ ನಿಧನದಿಂದಾಗಿ ಮನೆ ಜವಾಬ್ದಾರಿ ಹೊತ್ತ ಸೋನಿಗೆ ಒಳ್ಳೆಯ ಕೆಲಸ ಕೊಡಿಸುವುದಾಗಿ ಆತ ನಂಬಿಸಿದ್ದ. ಆದರೆ ದೆಹಲಿ ಹೊರವಲಯಲ್ಲಿರುವ ತನ್ನ ಬಾಡಿಗೆ ಮನೆಯಲ್ಲಿ ಕೆಲಸಕ್ಕೆ ನೇಮಿಸಿಕೊಂಡ.

ಮೂರು ವರ್ಷದಿಂದ ಸಂಬಳ ಕೊಡದೇ ಕಾಡಿಸುತ್ತಿದ್ದ ಮಾಲೀಕಳನ್ನು ಇತ್ತೀಚಿಗೆ ಆಕೆ ಪ್ರಶ್ನಿಸಿದ್ದಾಳೆ. ಇದರಿಂದ ಸಿಟ್ಟಿಗೆದ್ದ ಆತ ಇಬ್ಬರು ಮಹಿಳೆಯರ ಜತೆ ಸೇರಿ ಬಾಲಕಿಯ ಕೊಲೆಗೈದು ದೇಹವನ್ನು ತುಂಡು ತುಂಡು ಮಾಡಿದ್ದಾನೆ. ಎರಡು ಬ್ಯಾಗ್‌ಗಳಲ್ಲಿ ಅದನ್ನು ತುಂಬಿ ಚರಂಡಿಗೆ ಎಸೆದಿದ್ದಾನೆ.

ಬಾಲಕಿಯ ಮೃತ ದೇಹ ಮೇ 4 ರಂದು ಪತ್ತೆಯಾಗಿದ್ದು ತನಿಖೆ ನಡೆಸಿದ ಪೊಲೀಸರು ಸತ್ಯಾಂಶವನ್ನು ಬಯಲಿಗೆಳೆದಿದ್ದಾರೆ.

ಕೃತ್ಯದ ನಂತರ ಮನೆಗೆ ಬಾಗಿಲು ಹಾಕಿ ತನ್ನ ಗುಮ್ಲಾ ಜಿಲ್ಲೆಯ ತನ್ನ ಗ್ರಾಮದಲ್ಲಿ ತಲೆ ಮರೆಸಿಕೊಂಡಿದ್ದ ಕರ್ಕೇತಾನನ್ನು ಪೊಲೀಸರು ಬಂಧಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ