ಆ್ಯಪ್ನಗರ

ಹಿಮಾಚಲ ಪ್ರದೇಶ: ಚಾರಣದ ವೇಳೆ ಕಾಣೆಯಾದವನ್ನು ಹುಡುಕಿಯೇ ಬಿಟ್ಟರು!

ದಿಲ್ಲಿಯಿಂದ ಕಂಗ್ರಾ ಪ್ರದೇಶದಲ್ಲಿರುವ ಮ್ಯಕ್ಯೋದ್ಗಂಜ್‌ಗೆ ಚಾರಣ ಹೋಗಿದ್ದ 20 ವರ್ಷದ ಯುವಕ, 5 ದಿನಗಳ ಕಾಲ ಕಾಡಲ್ಲೇ ಉಳಿದಿದ್ದು, ಸಣ್ಣ ಪುಟ್ಟ ಗಾಯಗಳೊಂದಿಗೆ ಬಚಾವಾಗಿದ್ದಾನೆ.

TIMESOFINDIA.COM 26 Mar 2019, 3:39 pm
ಧರ್ಮಶಾಲಾ: ಚಾರಣದ ವೇಳೆ ಹಿಮಾಚಲ ಪ್ರದೇಶದ ಮ್ಯಕ್ಯೋದ್ಗಂಜ್‌ನಲ್ಲಿ ಕಾಣೆಯಾಗಿದ್ದ ದಿಲ್ಲಿ ಯುವಕ ಸುರಕ್ಷಿತವಾಗಿ ಪತ್ತೆಯಾಗಿದ್ದಾನೆ.
Vijaya Karnataka Web Delhi youth


ದಿಲ್ಲಿಯಿಂದ ಕಂಗ್ರಾ ಪ್ರದೇಶದಲ್ಲಿರುವ ಮ್ಯಕ್ಯೋದ್ಗಂಜ್‌ಗೆ ಚಾರಣ ಹೋಗಿದ್ದ 20 ವರ್ಷದ ಯುವಕ, 8 ದಿನಗಳ ಕಾಲ ಕಾಡಲ್ಲೇ ಉಳಿದಿದ್ದು, ಸಣ್ಣ ಪುಟ್ಟ ಗಾಯಗಳೊಂದಿಗೆ ಬಚಾವಾಗಿದ್ದಾನೆ.

40 ಮಂದಿ ಕಾಲೇಜು ವಿದ್ಯಾರ್ಥಿಗಳ ತಂಡ ಚಾರಣಕ್ಕೆ ಹೋಗಿದ್ದ ವೇಳೆ ಹಿಮಾಂಶು ಅಹುಜಾ ಎಂಬ ವಿದ್ಯಾರ್ಥಿ ಕಾಣೆಯಾಗಿದ್ದ.
ಕಾಲೇಜಿನಿಂದಲೇ ಚಾರಣ ಏರ್ಪಡಿಸಿದ್ದ ಕಾರಣ, ಅಧ್ಯಾಪಕರೂ ಜತೆಗಿದ್ದರು. ಭಾಗ್ಸು ಜಲಪಾತದ ಬಳಿಗೆ ತೆರಳಿದ್ದ ವಿದ್ಯಾರ್ಥಿಗಳ ತಂಡದಲ್ಲಿ ಹಿಮಾಂಶು ಜತೆ ಕೆಲವರು ಜಗಳವಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ವೇಳೆ ಹಿಮಾಂಶು ತನ್ನ ಗುಂಪಿನಿಂದ ಬೇರ್ಪಟ್ಟಿದ್ದ. ಈ ವೇಳೆ ದಾರಿ ತಪ್ಪಿದೆ ಎಂದು ತಿಳಿದು ಬಂದಿದೆ.

ಹಿಮಾಂಶು ಕಾಣೆಯಾಗಿರುವ ಕುರಿತು ಪೊಲೀಸ್‌ ದೂರು ನೀಡಲಾಗಿದೆ. ಅಧ್ಯಾಪಕರ ದೂರಿನ ಮೇರೆಗೆ, ಸ್ಥಳೀಯ ಚಾರಣಿಗರ ಸಹಾಯದಿಂದ ಹಿಮಾಂಶುವನ್ನು ಹುಡುಕಲಾಗಿದೆ.

8 ದಿನಗಳ ಕಾಲ ಪೊಲೀಸರು ಹಾಗೂ ಸೇನಾಪಡೆ ಯೋಧರು ಹಿಮಾಂಶುಗಾಗಿ ಹುಡುಕಾಟಿದ್ದರೂ ಯಾವುದೇ ಪ್ರಯೋಜನ ಆಗಿರಲಿಲ್ಲ. ಈ ವೇಳೆ ಸ್ಥಳೀಯ ಚಾರಣಿಗ ರಂಜೀತ್‌ ಸಿಂಗ್‌ ಎಂಬಾತ ತನ್ನ ಒಡನಾಡಿಗಳೊಂದಿಗೆ ಹಿಮಾಂಶುವನ್ನು ಹುಡುಕುವಲ್ಲಿ ಯಶಶ್ವಿಯಾಗಿದ್ದಾರೆ.
ಹಿಮಾಂಶು ಒಂದು ಮರದ ಕೆಳಗೆ ಇದ್ದರು. ಅಲ್ಲೇ ಹತ್ತಿರ ಸಣ್ಣದೊಂದು ಗುಹೆ ಇದ್ದು, ಇಲ್ಲಿ ನೀರಿದೆ. ಈ ಪ್ರದೇಶದಲ್ಲಿ ದಿನಗಟ್ಟಲೆ ಬದುಕುವುದು ಕಷ್ಟಕರ. ಉತ್ತಮ ಚಾರಣದ ಉಡುಪುಗಳನ್ನು ಹಾಕಿಕೊಂಡಿದ್ದರಿಂದ ಸಣ್ಣಪುಟ್ಟ ಗಾಯಗಳೊಂದಿಗೆ ಹಿಮಾಂಶು ಸಿಕ್ಕಿದ್ದಾನೆ ಎಂದು ರಂಜೀತ್‌ ಸಿಂಗ್‌ ಹೇಳಿದ್ದಾನೆ.

ಕಂಗ್ರಾ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಅತ್ಯಂತ ಕೆಟ್ಟ ವಾತಾವರಣ, ಹಿಮಪಾತ ಹಾಗೂ ಚಳಿಗಾಳಿ ಬೀಸುತ್ತಿತ್ತು. ಈ ಎಲ್ಲ ಪ್ರತೀಕೂಲ ಹವಾಮಾನದ ನಡುವೆಯೂ ಹಿಮಾಂಶು ಸುರಕ್ಷಿತವಾಗಿ ಸಿಕ್ಕಿರುವುದು ಅದೃಷ್ಟ ಎಂದು ಪೊಲೀಸರು ಹೇಳಿದ್ದಾರೆ.
ಪುತ್ರ ಕಾಣೆಯಾದ ಕುರಿತು ಆತಂಕದಲ್ಲಿದ್ದ ಪೋಷಕರು, ಹಿಮಾಂಶುವನ್ನು ಹುಡುಕಿ ಕೊಟ್ಟವರಿಗೆ ಬಹುಮಾನವನ್ನೂ ಘೋಷಣೆ ಮಾಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ