ಆ್ಯಪ್ನಗರ

ಗೆದ್ದಲು ಹುಳುವಿನ ನಿವಾರಣೆಗೆ ವಿಷಕಾರಿ ಔಷಧ ಅನಿವಾರ್ಯ: ಮೋದಿ

ಕಾರ್ಖಾನೆ, ಕಚೇರಿ, ಮನೆ ಹಾಗೂ ಹಾಸಿಗೆ ಅಡಿಯಲ್ಲಿ ಹಣ ಇಟ್ಟಿದ್ದ ಜನರು ಇಂದು ಪೈಸೆಪೈಸೆಗೂ ತೆರಿಗೆ ಕಟ್ಟುವಂತಾಗಿದೆ ಎಂದು ಮೋದಿ ತಿಳಿಸಿದರು.

Vijaya Karnataka 21 Nov 2018, 8:37 am
ಝಬುವಾ (ಮಧ್ಯಪ್ರದೇಶ) : ದೇಶದ ಆಡಳಿತ ವ್ಯವಸ್ಥೆಯಲ್ಲಿ ಆಳವಾಗಿ ಬೇರೂರಿದ್ದ ಭ್ರಷ್ಟಾಚಾರ ವ್ಯವಸ್ಥೆಗೆ ಸೂಕ್ತ ಚಿಕಿತ್ಸೆ ನೀಡುವ ಸಲುವಾಗಿ ಹಾಗೂ ಕಪ್ಪು ಹಣವನ್ನು ಬ್ಯಾಂಕಿಂಗ್‌ ವ್ಯವಸ್ಥೆಗೆ ತರುವ ಉದ್ದೇಶದಿಂದ ನೋಟು ಅಮಾನ್ಯೀಕರಣ ಎಂಬ ಕಹಿ ಕಷಾಯವನ್ನು ತಾವು ಬಳಸಿದ್ದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
Vijaya Karnataka Web modi


ನ.28ರಂದು ಚುನಾವಣೆ ಎದುರಿಸಲಿರುವ ಮಧ್ಯಪ್ರದೇಶದ ಝಬುವಾದಲ್ಲಿ ಚುನಾವಣಾ ರಾರ‍ಯಲಿ ಉದ್ದೇಶಿಸಿ ಮಂಗಳವಾರ ಮಾತನಾಡಿದ ಅವರು, ''ಗೆದ್ದಲು ಹುಳುವಿನ ನಿವಾರಣೆಗೆ ನಾವು ವಿಷಕಾರಿ ಔಷಧವನ್ನು ಬಳಸುತ್ತೇವೆ. ಅದೇ ರೀತಿ ದೇಶದಲ್ಲಿ ಭ್ರಷ್ಟಾಚಾರ ನಿವಾರಣೆಗೆ ನಾನು ಕಹಿ ಔಷಧ ಬಳಸಿದೆ,'' ಎಂದರು.

''ಕಾರ್ಖಾನೆ, ಕಚೇರಿ, ಮನೆ ಹಾಗೂ ಹಾಸಿಗೆ ಅಡಿಯಲ್ಲಿ ಹಣ ಇಟ್ಟಿದ್ದ ಜನರು ಇಂದು ಪೈಸೆಪೈಸೆಗೂ ತೆರಿಗೆ ಕಟ್ಟುವಂತಾಗಿದೆ. ಈ ಹಣವನ್ನು ಜನಸಾಮಾನ್ಯರಿಗೆ ಅನುಕೂಲವಾಗುವಂತಹ ಯೋಜನೆ ಜಾರಿಗೆ ತರಲು ಉಪಯೋಗಿಸಲಾಗಿದೆ,'' ಎಂದು ಮೋದಿ ತಿಳಿಸಿದರು.

ಈ ಮಧ್ಯೆ, ಕರ್ನಾಟಕದ ಜೆಡಿಎಸ್‌-ಕಾಂಗ್ರೆಸ್‌ ಸರಕಾರದ ವಿರುದ್ಧ ಮತ್ತೊಮ್ಮೆ ಸಾಲ ಮನ್ನಾ ವಿಷಯವಾಗಿ ಮೋದಿ ವಾಗ್ದಾಳಿ ನಡೆಸಿದರು. ಕಾಂಗ್ರೆಸ್‌ ನೀಡುವ ಸಾಲ ಮನ್ನಾ ಭರವಸೆಗೆ ಮರುಳಾಗದಂತೆ ಎಚ್ಚರಿಕೆ ನೀಡಿದರು. ''ಕರ್ನಾಟಕದಲ್ಲೂ ವಿಧಾನಸಭಾ ಚುನಾವಣೆಗೆ ಮುನ್ನ ಸಾಲ ಮನ್ನಾ ಮಾಡುವುದಾಗಿ ಕಾಂಗ್ರೆಸ್‌ ಭರವಸೆ ನೀಡಿತ್ತು. ಆದರೆ, ಈಗ ಹಾಗೆ ಮಾಡುವ ಬದಲು, ರೈತರನ್ನು ಜೈಲಿಗೆ ಕಳುಹಿಸಲು ಸರಕಾರ ಮುಂದಾಗಿದೆ,'' ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ