ಆ್ಯಪ್ನಗರ

ಮೊಬೈಲ್ ಕೊಡಿಸದ್ದಕ್ಕೆ ಜನ್ಮದಿನದಂದೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ

ಜನ್ಮದಿನಕ್ಕೆ ಅಪ್ಪ ಮೊಬೈಲ್‌ನ್ನು ಉಡುಗೊರೆಯಾಗಿ ಕೊಡಲಿಲ್ಲವೆಂದು 18 ವರ್ಷದ ಪುತ್ರಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾದ ದಾರುಣ ಘಟನೆ ಕೊಲತ್ತೂರಿನಲ್ಲಿ ಗುರುವಾರ ನಡೆದಿದೆ.

TIMESOFINDIA.COM 8 Sep 2018, 11:20 am
ಚೆನ್ನೈ: ಜನ್ಮದಿನಕ್ಕೆ ಅಪ್ಪ ಮೊಬೈಲ್‌ನ್ನು ಉಡುಗೊರೆಯಾಗಿ ಕೊಡಲಿಲ್ಲವೆಂದು 18 ವರ್ಷದ ಪುತ್ರಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾದ ದಾರುಣ ಘಟನೆ ಕೊಲತ್ತೂರಿನಲ್ಲಿ ಗುರುವಾರ ನಡೆದಿದೆ.
Vijaya Karnataka Web Death


ಮೃತ ಮಾಲತಿ, ಮಾಸನ್ ಎಂಬುವರ ಮಗಳಾಗಿದ್ದು ಸ್ನೇಹಿತರು, ಸಂಬಂಧಿಕರು ಮತ್ತು ಕುಟುಂಬದೊಂದಿಗೆ ಗುರುವಾರ ರಾತ್ರಿ ಕೇಕ್ ಕತ್ತರಿಸಿ ಜನ್ಮದಿನವನ್ನಾಚರಿಸಿಕೊಂಡಿದ್ದಳು. ತನ್ನ ಸ್ನೇಹಿತರೆಲ್ಲ ಅಲ್ಲಿಂದ ತೆರಳಿದ ಮೇಲೆ ನೀವು ಈ ಹಿಂದೆ ವಾಗ್ದಾನ ಮಾಡಿದಂತೆ ನನಗಾಗಿ ಮೊಬೈಲ್ ತಂದಿಲ್ಲವೇ ಎಂದು ಕೇಳಿದ್ದಾಳೆ. ಸಾಕಷ್ಟು ಹಣವಿಲ್ಲದಿದ್ದರಿಂದ ತರಲಾಗಲಿಲ್ಲ, ಮುಂದಿನ ತಿಂಗಳು ಕೊಡಿಸುತ್ತೇನೆ ಎಂದು ತಂದೆ ಸಮಾಧಾನಪಡಿಸಲೆತ್ನಿಸಿದ್ದಾರೆ. ಆದರೆ ಅವರ ಮಾತಿಗೆ ಗಮನ ಕೊಡದ ಮಾಲತಿ ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡು ಬೆಂಕಿ ಹಚ್ಚಿಕೊಂಡಿದ್ದಾಳೆ. ಬಾಗಿಲು ಒಡೆದ ಕುಟುಂಬದವರು ಆಕೆಯನ್ನು ಆಸ್ಪತ್ರೆಗೆ ಕೊಂಡೊಯ್ದರು ಪ್ರಯೋಜನವಾಗಲಿಲ್ಲ. ಆಕೆಯ ದೇಹ ಸಂಪೂರ್ಣವಾಗಿ ಸುಟ್ಟು ಹೋಗಿದ್ದರಿಂದ ವೈದ್ಯರು ಕೈ ಚೆಲ್ಲಿದ್ದಾರೆ.

ತನ್ನ ಸ್ನೇಹಿತರು ಮೊಬೈಲ್ ಬಳಸುತ್ತಿದ್ದರಿಂದ ಪ್ರಭಾವಿತಳಾಗಿದ್ದ ಮಾಲತಿ ತನಗೂ ಮೊಬೈಲ್ ಕೊಡಿಸುವಂತೆ ತಂದೆಯಲ್ಲಿ ಕೇಳಿದ್ದಳು. ಆದರೆ ಆಕೆ ಮೊಬೈಲ್ ಬಳಸುವುದು ತಂದೆಗೆ ಇಷ್ಟವಿರಲಿಲ್ಲವಾದ್ದರಿಂದ ಏನಾದರು ನೆಪ ಹೇಳಿ ತಳ್ಳಿ ಹಾಕುತ್ತಲೇ ಬಂದಿದ್ದರು ಎಂದು ತಿಳಿದುಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ