ಆ್ಯಪ್ನಗರ

ಸ್ಮಾರ್ಟ್‌ಫೋನ್ ಕೊಡಿಸದಿದ್ದಕ್ಕೆ 11 ವರ್ಷದ ಬಾಲಕ ಆತ್ಮಹತ್ಯೆ

ಪೋಷಕರು ಸ್ಮಾರ್ಟ್‌ಫೋನ್ ಕೊಡಿಸಲಿಲ್ಲವೆಂದು ನೊಂದ 11 ವರ್ಷದ ಬಾಲಕ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಭೋಪಾಲ್‌ನ ಅಶೋಕಾ ಗಾರ್ಡನ್‌ನಲ್ಲಿ ಶುಕ್ರವಾರ ನಡೆದಿದೆ.

TIMESOFINDIA.COM 27 May 2018, 3:14 pm
ಪೋಷಕರು ಸ್ಮಾರ್ಟ್‌ಫೋನ್ ಕೊಡಿಸಲಿಲ್ಲವೆಂದು ನೊಂದ 11 ವರ್ಷದ ಬಾಲಕ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಭೋಪಾಲ್‌ನ ಅಶೋಕಾ ಗಾರ್ಡನ್‌ನಲ್ಲಿ ಶುಕ್ರವಾರ ನಡೆದಿದೆ.
Vijaya Karnataka Web Suicide


8ನೇ ತರಗತಿಯಲ್ಲಿ ಓದುತ್ತಿರುವ ಮುಜಾಮ್ಮಿಲ್ ಅನ್ಸಾರಿ ಮೃತ ಬಾಲಕ.

ಬಾಲಕನ ತಂದೆ ಮುಕಿಮ್ ಅನ್ಸಾರಿ ಪಾನ್ ಶಾಪ್ ಮಾಲೀಕರಾದ್ದು ತನ್ನ ಮಕ್ಕಳಿಬ್ಬರನ್ನು ಸಹೋದರನ ಮನೆಯಲ್ಲಿಟ್ಟು ಓದಿಸುತ್ತಿದ್ದ. ರಮ್ಜಾನ್ ರಜೆಯ ನಿಮಿತ್ತ ಮುಜಾಮ್ಮಿಲ್ ಕೆಲ ದಿನಗಳ ಹಿಂದೆ ಅಣ್ಣನ ಜತೆ ಮನೆಗೆ ಬಂದಿದ್ದ. ತನಗೆ ಮೊಬೈಲ್ ಕೊಡಿಸಿರೆಂದು ಬಾಲಕ ತಂದೆ-ತಾಯಿ ಬಳಿ ಹಠ ಹಿಡಿದಿದ್ದ. ಆದರೆ ಮೊಬೈಲ್‌ನಿಂದ ಮಕ್ಕಳು ಹಾಳಾಗುತ್ತಾರೆ ಎಂದು ನಂಬಿದ್ದ ತಾಯಿ ಅದಕ್ಕೊಪ್ಪಿರಲಿಲ್ಲ.

ಅಷ್ಟೇ ಅಲ್ಲದೇ ಕುಟುಂಬ ಆರ್ಥಿಕವಾಗಿ ತೀವ್ರ ಸಂಕಷ್ಟದಲ್ಲಿದ್ದರಿಂದ 1,500 ರೂಪಾಯಿ ಮಗನ ಕೈಗಿತ್ತ ತಂದೆ ಹೊಸ ಬಟ್ಟೆ ಕೊಳ್ಳುವಂತೆ ಹೇಳಿದ್ದ. ಆದರೆ ಮುಜಾಮ್ಮಿಲ್ ಮಾತ್ರ ಮೊಬೈಲ್ ಬೇಕೇ ಬೇಕೆಂದು ಪಟ್ಟು ಹಿಡಿದಿದ್ದ.

ಶುಕ್ರವಾರ ಬೆಳಿಗ್ಗೆ ಬೇಗನೆದ್ದು ನಮಾಜ್ ಮಾಡಿದ ಬಾಲಕ ಬಳಿಕ ಆಟಾಡಲು ಹೋಗಿದ್ದಾನೆ. ಮನೆಗೆ ಮರಳಿದ ಬಳಿಕ ತಾನು ಮಲಗಲು ತೆರಳುತ್ತೇನೆಂದು ತಾಯಿ ಬಳಿ ಹೇಳಿ ಮಾಳಿಗೆ ಹತ್ತಿದ್ದಾನೆ.

ಸಂಜೆ 6.30 ರ ಸುಮಾರಿಗೆ ಮೇಲಕ್ಕೆ ಹೋದ ತಾಯಿಗೆ ಮಗ ಫ್ಯಾನ್‌ಗೆ ನೇತಾಡುತ್ತಿರುವುದು ಕಾಣಿಸಿದೆ. ತಕ್ಷಣಕ್ಕೆ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ವೈದ್ಯರು ಸಾವನ್ನಪಿರುವುದಾಗಿ ಹೇಳಿದ್ದಾರೆ.

ಸ್ಥಳದಲ್ಲಿ ಡೆತ್ ನೋಟ್ ಪತ್ತೆಯಾಗಿಲ್ಲ, ಆದರೆ ಸ್ಮಾರ್ಟ್ ಫೋನ್ ಕೊಡಿಸದಿದ್ದಕ್ಕೆ ಬಾಲಕ ಈ ದುಸ್ಸಾಹಸಕ್ಕೆ ಕೈ ಹಾಕಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಹುಡುಗ ಬಹಳ ಹಠಮಾರಿಯಾಗಿದ್ದ ಎಂದು ನೆರೆಹೊರೆಯವರು ಪೊಲೀಸ್ ವಿಚಾರಣೆ ವೇಳೆ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ