ಆ್ಯಪ್ನಗರ

ಮುಂಬಯಿಯನ್ನು ಆವರಿಸಿದ ಮಂಜು

ಈ ಬಾರಿ ಚಳಿಗಾಲ ಮುಂಬಯಿ ನಿವಾಸಿಗಳಿಗೂ ತಟ್ಟಿದ ಅನುಭವವಾಗಿದೆ. ಶನಿವಾರ ಬೆಳಗ್ಗೆ ಮುಂಬಯಿಗರು ಎದ್ದೇಳುವಾಗ ದಟ್ಟ ಮಂಜು ಆವರಿಸಿಕೊಂಡಿದ್ದು, ಎಲ್ಲೆಡೆ ಇದೇ ಚರ್ಚೆಯಾಗುತ್ತಿತ್ತು.

Vijaya Karnataka Web 10 Dec 2017, 12:03 pm
ಮುಂಬಯಿ: ಈ ಬಾರಿ ಚಳಿಗಾಲ ಮುಂಬಯಿ ನಿವಾಸಿಗಳಿಗೂ ತಟ್ಟಿದ ಅನುಭವವಾಗಿದೆ. ಶನಿವಾರ ಬೆಳಗ್ಗೆ ಮುಂಬಯಿಗರು ಎದ್ದೇಳುವಾಗ ದಟ್ಟ ಮಂಜು ಆವರಿಸಿಕೊಂಡಿದ್ದು, ಎಲ್ಲೆಡೆ ಇದೇ ಚರ್ಚೆಯಾಗುತ್ತಿತ್ತು. ಮಂಜು ಆವರಿಸಿ ಕ್ಷೀಣ ಬೆಳಕಿನ ಮುಂಬಯಿ ಪೋಟೊಗಳು ಹರಿದಾಡುತ್ತಿದ್ದವು. ತೇವಾಂಶ ಕಡಿಮೆಯಿದ್ದು, ಗಾಳಿಯ ವೇಗ ಕೂಡ ಕಮ್ಮಿಯಾಗಿ ತಾಪಮಾನ ಕೂಡ ಕುಸಿಯಲಿದ್ದು ಭಾನುವಾರವೂ ಇದೇ ಪರಿಸ್ಥಿತಿ ಮುಂದುವರಿದಿದೆ.
Vijaya Karnataka Web dense haze catches mumbai by surprise keeps visibility low
ಮುಂಬಯಿಯನ್ನು ಆವರಿಸಿದ ಮಂಜು


ಒಖಿ ಚಂಡಮಾರುತದ ಕಾರಣ ಸುರಿದ ಮಳೆಯು ಮಾಲಿನ್ಯವನ್ನು ಕಳೆದ ವಾರ ತೊಡೆದು ಹಾಕಿದೆ. ಈಗ ತೇವಾಂಶ ಹೆಚ್ಚು ಇದ್ದು, ಗಾಳಿಯ ಗುಣಮಟ್ಟ, ಗರಿಷ್ಠ ತಾಪಮಾನ ಸಾಮಾನ್ಯಕ್ಕಿಂತ ಕುಸಿದಿದೆ ಎಂದು ವಾಯು ಮಾಲಿನ್ಯ ನಿರ್ವಹಣೆ ಸಂಸ್ಥೆ ತಿಳಿಸಿದೆ.

ಶನಿವಾರ ಬೆಳಗ್ಗೆ ಒಂಬತ್ತರವರೆಗೂ ಎದುರಿನ ಬಿಲ್ಡಿಂಗ್‌ ಕಾಣಿಸದಷ್ಟು ಮಂಜು ಆವರಿಸಿತ್ತು, ಇದು ಅಪರೂಪದ ಅನುಭವ ಎಂದು ಥಾಣೆಯ ನಿವಾಸಿಯೊಬ್ಬರು ಹೇಳಿದ್ದಾರೆ. ದೃಷ್ಟಿಗೋಚರ ಬೆಳಕು ಕ್ಷೀಣಿಸಿದ್ದರಿಂದ ಕೆಲವು ಭಾಗಗಳಿಗೆ ರೈಲು ಸಂಚಾರ ಕೂಡ ಸ್ಥಗಿತಗೊಂಡಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ