ಆ್ಯಪ್ನಗರ

ಹಲ್ಲೆಕೋರರಿಗೆ ಸಾರ್ವಜನಿಕವಾಗಿ ಶಾಸ್ತಿ ಮಾಡಿದ ಮಹಿಳಾ DSP

ದರೋಡೆ ಪ್ರಕರಣದ ತನಿಖೆ ನಡೆಸುತ್ತಿದ್ದ ಸಂದರ್ಭದಲ್ಲಿ ಹಲ್ಲೆಗೆ ಮುಂದಾದ ದುಷ್ಕರ್ಮಿಗಳಿಗೆ ಅಹಮದಾಬಾದ್‌ ಮಹಿಳಾ ಉಪ ಪೊಲೀಸ್ ಅಧೀಕ್ಷಕಿ (ಡಿಎಸ್‌ಪಿ) ಮಂಜಿತಾ ವಂಜಾರ ತಕ್ಕಶಾಸ್ತಿ ಮಾಡುವ ಮೂಲಕ ದಿಟ್ಟತನವನ್ನು ಮೆರೆದಿದ್ದಾರೆ.

INDIATIMES NEWS NETWORK 22 Mar 2018, 11:25 am
ಅಹಮದಾಬಾದ್: ದರೋಡೆ ಪ್ರಕರಣದ ತನಿಖೆ ನಡೆಸುತ್ತಿದ್ದ ಸಂದರ್ಭದಲ್ಲಿ ಹಲ್ಲೆಗೆ ಮುಂದಾದ ದುಷ್ಕರ್ಮಿಗಳಿಗೆ ಅಹಮದಾಬಾದ್‌ ಮಹಿಳಾ ಉಪ ಪೊಲೀಸ್ ಅಧೀಕ್ಷಕಿ (ಡಿಎಸ್‌ಪಿ) ಮಂಜಿತಾ ವಂಜಾರ ತಕ್ಕಶಾಸ್ತಿ ಮಾಡುವ ಮೂಲಕ ದಿಟ್ಟತನವನ್ನು ಮೆರೆದಿದ್ದಾರೆ.
Vijaya Karnataka Web deputy sp manjeeta publicly shames men who attacked her
ಹಲ್ಲೆಕೋರರಿಗೆ ಸಾರ್ವಜನಿಕವಾಗಿ ಶಾಸ್ತಿ ಮಾಡಿದ ಮಹಿಳಾ DSP


ಮೆಹ್ಸಾನಾದ ಕಾಡಿ ಪಟ್ಟಣದಲ್ಲಿ ಈ ಪ್ರಸಂಗ ನಡೆದಿದೆ.ಮಾರ್ಚ್ 13 ರಂದು ನಡೆದ ದರೋಡೆ ಪ್ರಕರಣ ಸಂಬಂಧ ಶೇಖ್ ಇಮಾಮುದ್ದೀನ್, ಮಕ್ಬುಲ್ ವೇಪಾರಿ ಹಾಗೂ ಹನಿತ್ ಖದಾರ್‌ ಎಂಬ ಆರೋಪಿಗಳನ್ನು ಕದಿ ಪೊಲೀಸರು ಬಂಧಿಸಿದ್ದಾರೆ.

ದರೋಡೆ ಪ್ರಕರಣ ಸಂಬಂಧ ಆರೋಪಿಗಳನ್ನು ಬಂಧಿಸಿ ಕರೆದೊಯ್ಯುತ್ತಿದ್ದ ಸಂದರ್ಭದಲ್ಲಿ ಸ್ಥಳೀಯರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಆದರೆ, ಇಂತಹ ಗೊಡ್ಡು ಬೆದರಿಕೆಗೆ ಜಗ್ಗದೆ ಪೊಲೀಸರು ಆರೋಪಿಗಳನ್ನು ಬಂಧಿಸಿ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ. ಘಟನೆಯಲ್ಲಿ ಮಂಜಿತಾ ಅವರ ಬಲಗೈಗೆ ಗಂಭೀರ ಗಾಯಗಳಾಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪೊಲೀಸರ ಮೇಲೆ ದಾಳಿ ನಡೆಸಲು ಮುಂದಾದ ಇಬ್ಬರು ದುಷ್ಕರ್ಮಿಗಳನ್ನು ಪೊಲೀಸರು ಬುಧವಾರ ಬಂಧಿಸಿ ಜೈಲಿಗಟ್ಟಿದ್ದಾರೆ. ಅಟ್ಟಹಾಸ ಮೆರೆದ ದುಷ್ಕರ್ಮಿಗಳ ಕೈಗೆ ಕೋಳ ತೊಡಿಸಿ ಸಾರ್ವಜನಿಕವಾಗಿಯೇ ಮೆರವಣಿಗೆ ಮಾಡುವ ಮೂಲಕ ಮಹಿಳಾ ಅಧಿಕಾರಿಗಳ ತಂಟೆಗೆ ಬಂದರೆ ಸುಮ್ಮನೆ ಬಿಡುವುದಿಲ್ಲ ಎಂಬ ಸಂದೇಶವನ್ನು ರವಾನಿಸಿದ್ದಾರೆ ಮಹಿಳಾ ಡಿಎಸ್‌ಪಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ