ಆ್ಯಪ್ನಗರ

ಪತ್ರಕರ್ತ ರಾಮ್‌ಚಂದರ್‌ ಕೊಲೆ ಪ್ರಕರಣ: ಡೇರಾ ಸಚ್ಚಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ಜೀವಾವಧಿ ಶಿಕ್ಷೆ

ಪೂರಾ ಸಚ್ಚಾ ದೈನಿಕದ ಸಂಪಾದಕರಾಗಿದ್ದ ರಾಮಚಂದರ್‌ ಅವರು ಗುರ್ಮೀತ್‌ ಅವರ ಲೈಂಗಿಕ ಹಗರಣಗಳ ಕುರಿತು ಸರಣಿ ಲೇಖನ ಬರೆದಿದ್ದರು. ನಂತರ 2002ರಲ್ಲಿ ಸಿರ್ಸಾ ಎಂಬಲ್ಲಿ ರಾಮಚಂದರ್‌ ಅವರನ್ನು ಹತ್ಯೆ ಮಾಡಲಾಗಿತ್ತು.

Vijaya Karnataka Web 17 Jan 2019, 7:30 pm
ಚಂಡೀಗಢ: ಪತ್ರಕರ್ತನ ಕೊಲೆ ಪ್ರಕರಣದಲ್ಲಿ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಂಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
Vijaya Karnataka Web ಗುರ್ಮೀತ್ ರಾಮ್‌ ರಹೀಮ್‌
ಗುರ್ಮೀತ್ ರಾಮ್‌ ರಹೀಮ್‌


ಹರಿಯಾಣದ ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.

ಪತ್ರಕರ್ತ ರಾಮಚಂದರ್‌ ಛತ್ರಪತಿ ಕೊಲೆ ಪ್ರಕರಣದಲ್ಲಿ ಗುರ್ಮೀತ್‌ ಅಲ್ಲದೇ ಇತರೆ ಮೂವರಿಗೂ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

ಕೃಶನ್ ಲಾಲ್, ಕುಲ್‌ದೀಪ್ ಸಿಂಗ್ ಮತ್ತು ನಿರ್ಮಲ್ ಸಿಂಗ್‌ ಇತರ ಮೂವರು ಶಿಕ್ಷೆಗೊಳಗಾದವರು.

ವೀಡಿಯೋ ಕಾನ್ಫರೆನ್ಸ್‌ ಮೂಲಕ ಶಿಕ್ಷೆ ಪ್ರಮಾಣ ಪ್ರಕಟಿಸಲಾಗಿದ್ದು, ದೋಷಿಗಳಿಗೆ ತಲಾ 50 ಸಾವಿರ ರೂ. ದಂಡ ಕೂಡ ವಿಧಿಸಲಾಗಿದೆ.

ಪೂರಾ ಸಚ್ಚಾ ದೈನಿಕದ ಸಂಪಾದಕರಾಗಿದ್ದ ರಾಮಚಂದರ್‌ ಅವರು ಗುರ್ಮೀತ್‌ ಅವರ ಲೈಂಗಿಕ ಹಗರಣಗಳ ಕುರಿತು ಸರಣಿ ಲೇಖನ ಬರೆದಿದ್ದರು.

ನಂತರ 2002ರಲ್ಲಿ ಸಿರ್ಸಾ ಎಂಬಲ್ಲಿ ರಾಮಚಂದರ್‌ ಅವರನ್ನು ಹತ್ಯೆ ಮಾಡಲಾಗಿತ್ತು.

ಈಗಾಗಲೇ ಲೈಂಗಿಕ ಕಿರುಕುಳ, ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ 2017ರಲ್ಲಿ ರಲ್ಲಿ ಗುರ್ಮೀತ್‌ 20 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದರು.

ಆ ಸಂದರ್ಭದಲ್ಲಿ ಪಂಚಕುಲಾದಲ್ಲಿ ನಡೆದ ಭಾರಿ ಹಿಂಸಾಚಾರದಲ್ಲಿ ಹಲವಾರು ಮಂದಿ ಮೃತಪಟ್ಟಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ