ಆ್ಯಪ್ನಗರ

ಪುಲ್ವಾಮ ಉಗ್ರದಾಳಿ: ಗುರುವಾರ ಏನೇನಾಯ್ತು?

ಉಗ್ರರು ದಾಳಿಗೆ ಮಹಿಂದ್ರಾ ಸ್ಕಾರ್ಪಿಯೋ ವಾಹನವನ್ನು ಬಳಸಿದ್ದು, 350 ಕೆ.ಜಿ. ಸ್ಫೋಟಕವನ್ನು ತುಂಬಿದ್ದ ಜೀಪನ್ನು ಸಿಆರ್‌ಪಿಎಫ್‌ ವಾಹನಕ್ಕೆ ಗುದ್ದುವ ಮೂಲಕ ಸ್ಫೋಟ ನಡೆಸಲಾಗಿದೆ.

Vijaya Karnataka Web 14 Feb 2019, 10:26 pm
ಹೊಸದಿಲ್ಲಿ:ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಗುರುವಾರ ಜೈಶ್ ಮೊಹಮ್ಮದ್ ಉಗ್ರರು ನಡೆಸಿದ ಆತ್ಮಹತ್ಯಾ ದಾಳಿಯಲ್ಲಿ 40ಕ್ಕೂ ಹೆಚ್ಚು ಸಿಆರ್‌ಪಿಎಫ್‌ ಯೋಧರು ಹುತಾತ್ಮರಾಗಿದ್ದಾರೆ. ಇತ್ತೀಚಿನ ವರ್ಷಗಳಲ್ಲೇ ಅತ್ಯಂತ ಭೀಕರ ಉಗ್ರದಾಳಿ ಇದಾಗಿದೆ.
Vijaya Karnataka Web Attck.


ಗುರುವಾರ ಏನೇನಾಯ್ತು?
ಹೇಗೆ? ಸ್ಫೋಟಕ ತುಂಬಿದ ಜೀಪ್‌ನಿಂದ ಸಿಆರ್‌ಪಿಎಫ್‌ ವಾಹನಕ್ಕೆ ಡಿಕ್ಕಿ,

ಯಾವಾಗ? ಗುರುವಾರ ಮಧ್ಯಾಹ್ನ 3.15ಕ್ಕೆ,

ಎಲ್ಲಿ? ಜಮ್ಮು-ಶ್ರೀನಗರ ಹೆದ್ದಾರಿಯ ಅವಂತಿಪೊರ್‌ನಲ್ಲಿ,

ಯಾರು?
ಜೈಷೆ ಮೊಹಮ್ಮದ್‌ ಉಗ್ರ ಸಂಘಟನೆ

350 ಕೆ.ಜಿ.:
ದಾಳಿಗೆ ಬಳಸಲಾದ ಸ್ಫೋಟಕದ ಪ್ರಮಾಣ

70: ಶ್ರೀನಗರದತ್ತ ಹೊರಟಿದ್ದ ಒಟ್ಟು ಸಿಆರ್‌ಪಿಎಫ್‌ ವಾಹನಗಳ ಸಂಖ್ಯೆ

2,500: 78 ವಾಹನಗಳಲ್ಲಿದ್ದ ಒಟ್ಟು ಸಿಆರ್‌ಪಿಎಫ್‌ ಯೋಧರ ಸಂಖ್ಯೆ

40: ದಾಳಿಗೆ ತುತ್ತಾದ ವಾಹನದಲ್ಲಿದ್ದ ಯೋಧರ ಸಂಖ್ಯೆ

76ನೇ ಬೆಟಾಲಿಯನ್‌:
ದಾಳಿಗೆ ತುತ್ತಾದ ಯೋಧರ ಸೇವಾ ವಿಭಾಗ

30 ಕಿ.ಮೀ.
: ಶ್ರೀನಗರದಿಂದ ಘಟನೆ ನಡೆದ ಸ್ಥಳ ಇರುವ ದೂರ

ಎರಡು ದಿನದಿಂದ ಬಂದ್‌ ಆಗಿದ್ದ ಹೆದ್ದಾರಿ
ತೀವ್ರ ಹಿಮಪಾತದ ಹಿನ್ನೆಲೆಯಲ್ಲಿ ಜಮ್ಮು-ಶ್ರನಗರ ಹೆದ್ದಾರಿಯಲ್ಲಿ ಮಂಗಳವಾರದಿಂದಲೂ ಸಂಚಾರ ಸಂಪೂರ್ಣ ಸ್ಥಗಿತಗೊಳಿಸಲಾಗಿತ್ತು. ಗುರುವಾರವಷ್ಟೇ ಸಂಚಾರ ಆರಂಭವಾದ ಹಿನ್ನೆಲೆಯಲ್ಲಿ ಸಿಆರ್‌ಪಿಎಫ್‌ ತುಕಡಿಗಳಿದ್ದ ಎಲ್ಲಾ ವಾಹನಗಳು ಒಟ್ಟಿಗೆ ಶ್ರೀನಗರದತ್ತ ಹೊರಟಿದ್ದವು.

350 ಕೆ.ಜಿ. ಸ್ಫೋಟಕ ತುಂಬಿದ ಜೀಪ್‌ ಬಳಕೆ
ಉಗ್ರರು ದಾಳಿಗೆ ಮಹಿಂದ್ರಾ ಸ್ಕಾರ್ಪಿಯೋ ವಾಹನವನ್ನು ಬಳಸಿದ್ದು, 350 ಕೆ.ಜಿ. ಸ್ಫೋಟಕವನ್ನು ತುಂಬಿದ್ದ ಜೀಪನ್ನು ಸಿಆರ್‌ಪಿಎಫ್‌ ವಾಹನಕ್ಕೆ ಗುದ್ದುವ ಮೂಲಕ ಸ್ಫೋಟ ನಡೆಸಲಾಗಿದೆ.

ಗುರುತೇ ಸಿಗದಂತಾದ ವಾಹನ
ಸ್ಫೊಟದ ತೀವ್ರತೆ ಎಷ್ಟು ತೀವ್ರವಾಗಿತ್ತೆಂದರೆ, ದಾಳಿಗೆ ತುತ್ತಾದ ವಾಹನವು ಸಂಪೂರ್ಣ ಸಿಡಿದು, ಸುಟ್ಟು ಕರಕಲಾಗಿದ್ದು ಲೋಹದ ಮುದ್ದೆಯಂತಾಗಿದೆ. ಗುರುತೇ ಸಿಗದ ಮಟ್ಟಕ್ಕೆ ವಿರೂಪಗೊಂಡಿದೆ. ವಾಹನದ ಹಲವು ಭಾಗಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಪಕ್ಕದಲ್ಲೇ ಇದ್ದ ಮತ್ತೊಂದು ವಾಹನವೂ ಜಖಂಗೊಂಡಿದೆಯಾದರೂ, ಅದರಲ್ಲಿದ್ದ ಯಾರಿಗೂ ಯವುದೇ ಹಾನಿಯಾಗಿಲ್ಲ.

ದಾಳಿಕೋರ ಯಾರು?
ದಾಳಿಕೋರನನ್ನು ಜೈಷೆ ಸಂಘಟನೆಯ ಸ್ಥಳೀಯ ಉಗ್ರ ಆದಿಲ್‌ ಅಹ್ಮದ್‌ ಎಂದು ಗುರುತಿಸಲಾಗಿದೆ. ಪುಲ್ವಾಮಾ ಜಿಲ್ಲೆಯ ಕಾಕಪೋರಾ ಮೂಲದ ಈತ 2018ರಲ್ಲಿ ಜೈಷೆ ಸಂಘಟನೆ ಸೇರಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಫೋಟದ ಬಳಿಕ ಗುಂಡು, ಗ್ರನೇಡ್‌ ದಾಳಿ?
ವಾಹನ ಸ್ಫೋಟದ ಬಳಿಕ ಉಗ್ರರು ಭದ್ರತಾ ಪಡೆಯ ಮೇಲೆ ಗುಂಡು ಮತ್ತು ಗ್ರನೇಡ್‌ ದಾಳಿಯನ್ನೂ ನಡೆಸಿದ್ದಾರೆ. ಸ್ಫೊಟದ ಬೆನ್ನಲ್ಲೇ ಗುಂಡಿನ ಮೊರೆತ ಮತ್ತು ಗ್ರನೇಡ್‌ ಸ್ಫೋಟದ ಸದ್ದು ಕೇಳಿಸಿತು ಎಂದು ಪೊಲೀಸರು ತಿಳಿಸಿದ್ದಾರೆ.

ಜಮ್ಮು-ಕಾಶ್ಮೀರದಲ್ಲಿ ನಡೆದ ಪ್ರಮುಖ ಉಗ್ರ ದಾಳಿಗಳು

ಸಿಆರ್‌ಪಿಎಫ್ ಯೋಧರ ಬಲಿದಾನ: ಸಾಮಾಜಿಕ ತಾಣದಲ್ಲಿ ಸಂಭ್ರಮಿಸಿದ ಪಾಪಿಗಳು

ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕರ ಅಟ್ಟಹಾಸ: 42 ಸಿಆರ್‌ಪಿಎಫ್ ಯೋಧರ ಬಲಿದಾನ

ಯೋಧರ ಬಲಿದಾನ ವ್ಯರ್ಥವಾಗಲು ಬಿಡುವುದಿಲ್ಲ: ಪ್ರಧಾನಿ ಮೋದಿ

ಉಗ್ರರ ಮೇಲೆ ಮತ್ತೊಂದು ಸರ್ಜಿಕಲ್‌ ದಾಳಿ?

ಸ್ವರ್ಗಕ್ಕೆ ಹೋಗುವೆ ಎಂದ ಪಾಪಿ! ದಾಳಿ ಹಿಂದಿನ ಸೂತ್ರಧಾರ ಇವನೇ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ