ಆ್ಯಪ್ನಗರ

ರನ್‌ವೇ ದೀಪಕ್ಕೆ ಹಾನಿ, ಸ್ಪೈಸ್‌ಜೆಟ್‌ನ ಇಬ್ಬರು ಪೈಲಟ್‌ಗಳ ಪರವಾನಗಿ ರದ್ದು

ಜುಲೈ 2ರಂದು ಘಟನೆ ನಡೆದಿದ್ದು, ಪುಣೆಯಿಂದ ಬರುತ್ತಿದ್ದ ಸ್ಪೈಸ್‌ಜೆಟ್‌ ವಿಮಾನ ರನ್‌ವೇ ತುದಿಯಲ್ಲಿನ ದೀಪಗಳಿಗೆ ತಾಕಿತ್ತು.

PTI 17 Jul 2019, 5:00 am
ಹೊಸದಿಲ್ಲಿ: ಭೂಸ್ಪರ್ಶ ವೇಳೆ ಕೋಲ್ಕೊತಾ ವಿಮಾನ ನಿಲ್ದಾಣದ ರನ್‌ವೇನಲ್ಲಿನ ದೀಪಗಳನ್ನು ಹಾನಿಗೊಳಿಸಿದ ಕಾರಣಕ್ಕಾಗಿ ಸ್ಪೈಸ್‌ಜೆಟ್‌ ವಿಮಾನದ ಇಬ್ಬರು ಪೈಲಟ್‌ಗಳ ಪರವಾನಗಿಯನ್ನು ನಾಗರಿಕ ವಿಮಾನಯಾನ ನಿರ್ದೇಶನಾಲಯ ಆರು ತಿಂಗಳ ಅವಧಿಗೆ ರದ್ದುಗೊಳಿಸಿದೆ.
Vijaya Karnataka Web dgca suspends flying licences of spicejet pilots for violations
ರನ್‌ವೇ ದೀಪಕ್ಕೆ ಹಾನಿ, ಸ್ಪೈಸ್‌ಜೆಟ್‌ನ ಇಬ್ಬರು ಪೈಲಟ್‌ಗಳ ಪರವಾನಗಿ ರದ್ದು


ಜುಲೈ 2ರಂದು ಘಟನೆ ನಡೆದಿದ್ದು, ಪುಣೆಯಿಂದ ಬರುತ್ತಿದ್ದ ಸ್ಪೈಸ್‌ಜೆಟ್‌ ವಿಮಾನ ರನ್‌ವೇ ತುದಿಯಲ್ಲಿನ ದೀಪಗಳಿಗೆ ತಾಕಿತ್ತು. ಪರಿಣಾಮ ದೀಪಗಳು ಜಖಂಗೊಂಡಿದ್ದವು. ವಿಮಾನದ ಪೈಟಲ್‌ಗಳಾದ ಆರತಿ ಗುಣಶೇಖರನ್‌ ಹಾಗೂ ಸೌರಭ್‌ ಗುಲಿಯಾ ಅವರ ಫ್ಲೈಯಿಂಗ್‌ ಲೈಸೆನ್ಸ್‌ ರದ್ದುಗೊಳಿಸಲಾಗಿದೆ ಎಂದು ನಿರ್ದೇಶನಾಲಯದ ಪ್ರಕಟಣೆ ತಿಳಿಸಿದೆ.

ಘಟನೆ ಬಳಿಕ ನಿರ್ದೇಶನಾಲಯದಿಂದ ಪೈಲಟ್‌ಗಳಿಗೆ ಶೋಕಾಸ್‌ ನೀಡಲಾಗಿತ್ತು. ಆಂತರಿಕ ತನಿಖೆ ಕೂಡ ನಡೆಸಲಾಗಿತ್ತು. ಭೂಸ್ಪರ್ಶ ವೇಳೆ ರನ್‌ವೇಯ ನಿಗದಿತ ಸ್ಥಳವನ್ನು ಮೀರಿದ್ದ ವಿಮಾನ ಬಳಿಕ ಬಲಕ್ಕೆ ಹೊರಳಿತ್ತು ಎಂದು ತನಿಖೆಯಿಂದ ಬಹಿರಂಗವಾಗಿತ್ತು. ನೋಟಿಸ್‌ಗೆ ಪೈಲಟ್‌ಗಳು ನೀಡಿದ ಉತ್ತರ ತೃಪ್ತಿದಾಯಕವಾಗಿಲ್ಲದ ಕಾರಣ ಪರವಾನಗಿ ರದ್ದುಗೊಳಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇತ್ತೀಚೆಗೆ ಹಲವು ವಿಮಾನಗಳು ಕೂದಲೆಳೆ ಅಂತರದಲ್ಲಿ ಅಪಘಾತದಿಂದ ಪಾರಾದ ಹಿನ್ನೆಲೆಯಲ್ಲಿ ಪ್ರಯಾಣಿಕರ ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡುವಂತೆ ಡಿಜಿಸಿಎ ವಿಮಾನಯಾನ ಸಂಸ್ಥೆಗಳಿಗೆ ನಿರ್ದೇಶನ ನೀಡಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ