ಆ್ಯಪ್ನಗರ

ಊರು ಸುರಕ್ಷಿತ ಎಂದು ನಂಬಿ ಬಂದರು: ಅಲ್ಲಿ ಕೆಲಸ ಹೋಯಿತು, ಇಲ್ಲಿ ಪ್ರಾಣವೇ ಹೋಯಿತು!

28 ವರ್ಷದ ಮೊಹಮ್ಮದ್‌ ಸಲೀಲ್‌ ಮದುವೆಯಾಗಲು ಊರಿಗೆ ಹೊರಟು ಬಂದಿದ್ದರು. ಅದೇ ರೀತಿ ತುಂಬು ಗರ್ಭಿಣಿ ಹಾಗೂ ನಾಲ್ಕು ವರ್ಷದ ಮಗುವೊಂದು ದುರಂತಕ್ಕೀಡಾದ ವಿಮಾನದಲ್ಲಿದ್ದರು. ಕೊರೊನಾ ಉಂಟು ಮಾಡಿರುವ ತುರ್ತು ಪರಿಸ್ಥಿತಿಯ ನಡುವೆ ನಮ್ಮೂರೇ ಸುರಕ್ಷಿತ ಎಂದು ತಿಳಿದುಕೊಂಡು ವಿಮಾನ ಹತ್ತಿದವರು ಸಾಕಷ್ಟು ಮಂದಿ ಇದ್ದರು.

Vijaya Karnataka Web 8 Aug 2020, 7:36 am
ಕೋಯಿಕ್ಕೋಡ್‌: ದುರಂತಕ್ಕೀಡಾದ ವಿಮಾನದಲ್ಲಿದ್ದ ಪ್ರಯಾಣಿಕರಲ್ಲಿ ಅನೇಕರು ದುಬೈನಲ್ಲಿ ಕೆಲಸ ಕಳೆದುಕೊಂಡವರು. ಕೆಲವರ ವೀಸಾ ಅವಧಿ ಮುಕ್ತಾಯವಾಗಿದುದ, ಇನ್ನೊಂದಿಷ್ಟು ಮಂದಿ ತಮ್ಮೂರೇ ಸುರಕ್ಷಿತ ಎಂದು ವಿಮಾನ ಹತ್ತಿದವರು. 29 ವರ್ಷದ ಮೊಹಮ್ಮದ್‌ ಸಲೀಲ್‌ ಎಂಬುವರು ದುಬೈನಲ್ಲಿ ಕೆಲಸ ಮಾಡುತ್ತಿದ್ದ ಕಂಪನಿಯು ಆರು ತಿಂಗಳ ಕಾಲ ರಜೆ ಮೇಲೆ ತೆರಳುವಂತೆ ಸೂಚಿಸಿತ್ತು.
Vijaya Karnataka Web 77420254


ಹೀಗಾಗಿ ಅವರು ಏರ್‌ ಇಂಡಿಯಾ ಹತ್ತಿದ್ದರು. 28 ವರ್ಷದ ಮೊಹಮ್ಮದ್‌ ಸಲೀಲ್‌ ಮದುವೆಯಾಗಲು ಊರಿಗೆ ಹೊರಟು ಬಂದಿದ್ದರು. ಅದೇ ರೀತಿ ತುಂಬು ಗರ್ಭಿಣಿ ಹಾಗೂ ನಾಲ್ಕು ವರ್ಷದ ಮಗುವೊಂದು ದುರಂತಕ್ಕೀಡಾದ ವಿಮಾನದಲ್ಲಿದ್ದರು. ಕೊರೊನಾ ಉಂಟು ಮಾಡಿರುವ ತುರ್ತು ಪರಿಸ್ಥಿತಿಯ ನಡುವೆ ನಮ್ಮೂರೇ ಸುರಕ್ಷಿತ ಎಂದು ತಿಳಿದುಕೊಂಡು ವಿಮಾನ ಹತ್ತಿದವರು ಸಾಕಷ್ಟು ಮಂದಿ ಇದ್ದರು.

29 ವರ್ಷದ ಮುಫೀದಾ ಅವರು ಮಗುವಿನೊಂದಿಗೆ ತವರಿಗೆ ವಾಪಸ್‌ ಬಂದಿದ್ದರೆ, 51 ವರ್ಷದ ಪುರುಷೋತ್ತಮ ಅವರು ಕೊರೊನಾ ಭಯದಿಂದಾಗಿ ದುಬೈನಿಂದ ಹೊರಟಿದ್ದರು. 39 ಅಬ್ದುಲ್‌ ರಫೀ ದುಬೈನಲ್ಲಿಕೆಲಸ ಕಳೆದುಕೊಂಡಿದ್ದು, ಬೇರೆ ದಾರಿ ಕಾಣದೇ ಊರಿಗೆ ಹೊರಟಿದ್ದರು. ಈ ರೀತಿ ಎದುರಾದ ಸಂಕಷ್ಟಗಳಿಂದ ಪಾರಾಗಲು ಏರ್‌ ಇಂಡಿಯಾ ವಿಮಾನ ಹತ್ತಿದವರು ಗಾಯಗೊಂಡು ಆಸ್ಪತ್ರೆ ಸೇರುವಂತಾಗಿದೆ.

ಅಪಘಾತಕ್ಕೀಡಾದ ವಿಮಾನದಿಂದ ಲ್ಯಾಂಡ್‌ ಆಗಲು ಎರಡು ಬಾರಿ ಯತ್ನ, ಕೊನೆಯ ಪ್ರಯತ್ನವೂ ವಿಫಲ
ಆ್ಯಂಬುಲೆನ್ಸ್‌ಗೆ ಕಾಯಲಿಲ್ಲ!ಘಟನೆ ನಡೆಯುತ್ತಿದ್ದಂತೆ ಸ್ಥಳದಲ್ಲಿದ್ದವರು ಆ್ಯಂಬುಲೆನ್ಸ್‌ಗೆ ಕಾಯಲಿಲ್ಲ. ತಮ್ಮದೇ ಖಾಸಗಿ ವಾಹನಗಳಲ್ಲಿ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ