ಆ್ಯಪ್ನಗರ

ನಾನು ಎಲ್ಲರಿಗಿಂತ ಉತ್ತಮ ಹಿಂದೂ: ದಿಗ್ವಿಜಯ್ ಸಿಂಗ್

ಹಿಂದುತ್ವ ಎಂಬ ಪದ ಶಬ್ಧಕೋಶದಲ್ಲೂ ಇಲ್ಲ, ನೀವ್ಯಾಕೆ ಅದನ್ನು ಬಳಸುತ್ತಿದ್ದೀರಿ ಎಂದವರು ಪ್ರಶ್ನಿಸಿದ್ದರು. ಜತೆಗೆ ಹಿಂದೂ, ಮುಸ್ಲಿಂ, ಸಿಖ್, ಕ್ರಿಶ್ಚಿಯನ್ನರು ಸಹೋದರರರು, ಧರ್ಮವನ್ನು ಮಾರಾಟ ಮಾಡುವವರ ಬಲೆಗೆ ಬೀಳಬೇಡಿ ಎಂದು ಮತದಾರರಲ್ಲಿ ಮನವಿ ಮಾಡಿಕೊಂಡಿದ್ದರು.

TIMESOFINDIA.COM 28 Apr 2019, 4:12 pm
ಭೋಪಾಲ್: ಹಿಂದೂ ಭಯೋತ್ಪಾದನೆ ಬಳಸಿದ್ದಕ್ಕೆ , ಬಿಜೆಪಿ ನಾಯಕರಿಂದ ಆಗಾಗ ವಾಗ್ದಾಳಿಗೆ ಗುರಿಯಾಗುವ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ತನ್ನಷ್ಟು ಉತ್ತಮ ಹಿಂದೂ ಯಾರೂ ಇಲ್ಲ ಎಂದು ಪ್ರತಿಪಾದಿಸಿದ್ದಾರೆ.
Vijaya Karnataka Web Digvijaya Singh


ಭೋಪಾಲದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು, ನನ್ನ ವಿರುದ್ಧ ಭ್ರಷ್ಟಾಚಾರದ ಆರೋಪಗಳಿಲ್ಲವಾದ್ದರಿಂದ ವಾಗ್ದಾಳಿ ನಡೆಸಲು ಬಿಜೆಪಿಯವರಿಗೆ ಏನಾದರೂ ವಿಷಯ ಬೇಕಿದೆ. ಹೀಗಾಗಿ ನನಗೆ ಹಿಂದೂ ವಿರೋಧಿ ಎಂಬ ಹಣೆ ಪಟ್ಟಿ ಕಟ್ಟಲು , ನಾನು ಹಿಂದೂವಲ್ಲ, ಉಗ್ರ ಎಂದೆಲ್ಲ ಬಿಂಬಿಸಲು ಯತ್ನಿಸುತ್ತಿದ್ದಾರೆ. ಆದರೆ ನಾನು ಹಿಂದೂ, ನಿಮಗಿಂತ ಉತ್ತಮ ಹಿಂದೂ , ಅದನ್ನು ಸಾಬೀತು ಪಡಿಸಲು ನಿಮ್ಮ ಮಾನ್ಯತೆ ಅಗತ್ಯವಿಲ್ಲ ಎಂದವರು ಬಿಜೆಪಿಯನ್ನುದ್ದೇಶಿಸಿ ಹೇಳಿದ್ದಾರೆ.

ಹಿಂದುತ್ವ ಎಂಬ ಪದ ಶಬ್ಧಕೋಶದಲ್ಲೂ ಇಲ್ಲ, ನೀವ್ಯಾಕೆ ಅದನ್ನು ಬಳಸುತ್ತಿದ್ದೀರಿ ಎಂದವರು ಪ್ರಶ್ನಿಸಿದ್ದರು. ಜತೆಗೆ ಹಿಂದೂ, ಮುಸ್ಲಿಂ, ಸಿಖ್, ಕ್ರಿಶ್ಚಿಯನ್ನರು ಸಹೋದರರರು, ಧರ್ಮವನ್ನು ಮಾರಾಟ ಮಾಡುವವರ ಬಲೆಗೆ ಬೀಳಬೇಡಿ ಎಂದು ಮತದಾರರಲ್ಲಿ ಮನವಿ ಮಾಡಿಕೊಂಡಿದ್ದರು.

ಅಪಾಯದಲ್ಲಿರುವ ನಾವೆಲ್ಲ ಒಗ್ಗೂಡಬೇಕಿದೆ ಎಂದವರು ಹಿಂದೂಗಳಿಗೆ ಕರೆ ನೀಡುತ್ತಿದ್ದಾರೆ. ಮುಸ್ಲಿಮರು ಬರೋಬ್ಬರಿ 500 ವರ್ಷಗಳ ಕಾಲ ನಮ್ಮ ದೇಶವನ್ನಾಳಿದ್ದಾರೆ. ಆದರೆ ಯಾವುದೇ ಧರ್ಮಕ್ಕೆ ಹಾನಿಯನ್ನುಂಟು ಮಾಡಿಲ್ಲ. ಧರ್ಮ ಮಾರುವ ಇಂತಹ ಜನರ ಬಗ್ಗೆ ಜಾಗೃತೆಯಿಂದಿರಿ ಎಂದವರು ಹೇಳಿದ್ದರು.

ದಿಗ್ವಿಜಯ್ ಸಿಂಗ್ ಭೋಪಾಲ್‌ನಿಂದ ಕಣಕ್ಕಿಳಿಯುತ್ತಿದ್ದು, ಅವರ ವಿರುದ್ಧ ಬಿಜೆಪಿಯ ಸಾಧ್ವಿ ಪ್ರಜ್ಞಾ ಸಿಂಗ್ ಸ್ಪರ್ಧಿಸುತ್ತಿದ್ದಾರೆ.

ಭೋಪಾಲದಲ್ಲಿ ಮೇ 12ರಂದು ಚುನಾವಣೆ ನಡೆಯಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ