ಆ್ಯಪ್ನಗರ

ನಿರೀಕ್ಷೆ ಹುಸಿಗೊಳಿಸಲ್ಲ: ಜಮ್ಮು ಕಾಶ್ಮೀರದ ಸಂಧಾನಕಾರ ದಿನೇಶ್ವರ ಶರ್ಮ

ಕೇಂದ್ರ ಸರಕಾರದ ಈ ನಡೆ ಯಾವ ರೀತಿಯ ಪ್ರತಿಕ್ರಿಯೆ ನೀಡುತ್ತದೋ ನೋಡಬೇಕು.

Vijaya Karnataka Web 23 Oct 2017, 7:35 pm
ಹೊಸದಿಲ್ಲಿ: ಜಮ್ಮು ಕಾಶ್ಮೀರದಲ್ಲಿ ಉಂಟಾಗಿರುವ ಅಸ್ಥಿರತೆ ಹಾಗೂ ವಿವಿಧ ರಾಜಕೀಯ ಸಮಸ್ಯೆ ಪರಿಹಾರಕ್ಕಾಗಿ ಸಂಧಾನ ನಡೆಸಲು ಕೇಂದ್ರ ಸರಕಾರ ಗುಪ್ತಚರ ದಳದ ನಿವೃತ್ತ ನಿರ್ದೇಶಕ ದಿನೇಶ್ವರ್‌ ಶರ್ಮ ಅವರನ್ನು ನೇಮಿಸಿದೆ.
Vijaya Karnataka Web dineshwar sharma appointed as interlocutor for jk
ನಿರೀಕ್ಷೆ ಹುಸಿಗೊಳಿಸಲ್ಲ: ಜಮ್ಮು ಕಾಶ್ಮೀರದ ಸಂಧಾನಕಾರ ದಿನೇಶ್ವರ ಶರ್ಮ


ಕೇಂದ್ರ ಸರಕಾರದ ನೇಮಕದ ನಂತರ ಮಾತನಾಡಿದ ದಿನೇಶ್ವರ್‌, ನನ್ನ ಮೇಲೆ ಇಟ್ಟಿರುವ ವಿಶ್ವಾಸವನ್ನು ಹುಸಿಗೊಳಿಸದಿರಲು ಪ್ರಯತ್ನಿಸುತ್ತೇನೆ ಎಂದಿದ್ದಾರೆ.

ಮುಂದಿನ ಹತ್ತು ದಿನಗಳಲ್ಲಿ ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಿ ಪರಿಸ್ಥಿತಿ ಅಧ್ಯಯನ ನಡೆಸಿ ಶಾಂತಿ ಸಂಧಾನ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು ಎಂದು ಶರ್ಮ ವಿವರಿಸಿದ್ದಾರೆ.

ಇದಕ್ಕೂ ಮುನ್ನ ಗೃಹ ಸಚಿವ ರಾಜ್‌ನಾಥ್‌ ಸಿಂಗ್‌ ಮಾತನಾಡಿ, ಜಮ್ಮು ಕಾಶ್ಮೀರದಲ್ಲಿನ ಸಮಸ್ಯೆ ಬಗೆಹರಿಸಲು ನಿರಂತರ ಶಾಂತಿ ಸಂಧಾನ ಪ್ರಕ್ರಿಯೆಗಾಗಿ ಸಂಧಾನಕಾರರನ್ನು ನೇಮಿಸಲಾಗುವುದು ಎಂದರು.

ಸಂಧಾನಕಾರರು ಸಂಪುಟ ದರ್ಜೆ ಕಾರ್ಯದರ್ಶಿಯಾಗಿರುತ್ತಾರೆ. ಅವರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ಜಮ್ಮು ಕಾಶ್ಮೀರದ ಸಮಸ್ಯೆ ಬಗೆಹರಿಸಲು ಕೇಂದ್ರ ಸರಕಾರ ಬದ್ಧವಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಕೇಂದ್ರ ಸರಕಾರದ ವಿಶೇಷ ಪ್ರತಿನಿಧಿಯಾಗಿ ದಿನೇಶ್ವರ್‌ ಕಾರ್ಯ ನಿರ್ವಹಿಸಲಿದ್ದಾರೆ.

Dineshwar Sharma appointed as interlocutor for J&K

Jammu kashmir, Dineshwar Sharma, interlocutor for J&K, ಜಮ್ಮು ಕಾಶ್ಮೀರ, ದಿನೇಶ್ವರ್‌ ಶರ್ಮ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ