ಹೊಸದಿಲ್ಲಿ: ಕಿರ್ಗಿಸ್ತಾನದ ರಾಜಧಾನಿ ಬಿಷ್ಕೆಕ್ನಲ್ಲಿ ನಡೆದ ಶಾಂಘಾಯ್ ಸಹಕಾರ ಸಂಘಟನೆ ಶೃಂಗಸಭೆಯಲ್ಲಿ ಪಾಲ್ಗೊಂಡ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಿರ್ಗಿಸ್ತಾನದ ಅಧ್ಯಕ್ಷರೇ ಸ್ವತಃ ಕೊಡೆ ಹಿಡಿದು ಮಳೆಯಿಂದ ರಕ್ಷಿಸಿದ ಚಿತ್ರಗಳು ವೈರಲ್ ಆಗಿವೆ. ಪ್ರಧಾನಿ ಮೋದಿ ಅವರು ಕಿರ್ಗಿಸ್ತಾನಕ್ಕೆ ಬಂದಿಳಿಯುತ್ತಲೇ ತುಂತುರು ಮಳೆ ಸುರಿಯಲಾರಂಭಿಸಿತು. ಅವರನ್ನು ಹಾರ್ದಿಕವಾಗಿ ಸ್ವಾಗತಿಸಿದ ಅಧ್ಯಕ್ಷ ಸೂರೋನ್ಬೆ ಜೀನ್ಬೆಕೊವ್, ಭದ್ರತಾ ಸಿಬ್ಬಂದಿಯ ಬದಲು ತಾವೇ ಕೊಡೆ ಹಿಡಿದು ಪ್ರಧಾನಿ ಮೋದಿ ಅವರನ್ನು ಕರೆದೊಯ್ದರು. ಅಧ್ಯಕ್ಷರ ಈ ಆತ್ಮೀಯ ನಡೆ ಪ್ರಧಾನಿ ಮೋದಿ ಅವರ ಮೇಲೆ ಗಾಢ ಪ್ರಭಾವ ಬೀರಿತು.
ಪ್ರಧಾನಿ ಮೋದಿ ಅವರು ಕಳೆದ ಭಾನುವಾರ ಶ್ರೀಲಂಕಾಗೆ ಭೇಟಿ ನೀಡಿದಾಗಲೂ ಅಲ್ಲಿನ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರು ಕೊಲಂಬೋದಲ್ಲಿ ಪ್ರಧಾನಿಗೆ ಆತ್ಮೀಯ ಸ್ವಾಗತ ನೀಡಿದರು. ಆಗ ಬಿರು ಬಿಸಿಲಿದ್ದುದರಿಂದ ಪ್ರಧಾನಿ ಮೋದಿ ಅವರಿಗೆ ಲಂಕಾ ಅಧ್ಯಕ್ಷರು ಖುದ್ದಾಗಿ ತಾವೇ ಕೊಡೆ ಹಿಡಿದು ಕರೆದೊಯ್ದರು.
ಎರಡೂ ದೇಶಗಳ ಅಧ್ಯಕ್ಷರ ಈ ಆತ್ಮೀಯ ನಡೆಗಳು ಪ್ರಧಾನಿ ಮೋದಿ ಅವರ ಮೇಲೆ ಪ್ರಭಾವ ಬೀರಿದವು ಎಂದು ವರದಿಯಾಗಿದೆ.
ಪ್ರಧಾನಿ ಮೋದಿ ಅವರು ಕಳೆದ ಭಾನುವಾರ ಶ್ರೀಲಂಕಾಗೆ ಭೇಟಿ ನೀಡಿದಾಗಲೂ ಅಲ್ಲಿನ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರು ಕೊಲಂಬೋದಲ್ಲಿ ಪ್ರಧಾನಿಗೆ ಆತ್ಮೀಯ ಸ್ವಾಗತ ನೀಡಿದರು. ಆಗ ಬಿರು ಬಿಸಿಲಿದ್ದುದರಿಂದ ಪ್ರಧಾನಿ ಮೋದಿ ಅವರಿಗೆ ಲಂಕಾ ಅಧ್ಯಕ್ಷರು ಖುದ್ದಾಗಿ ತಾವೇ ಕೊಡೆ ಹಿಡಿದು ಕರೆದೊಯ್ದರು.
ಎರಡೂ ದೇಶಗಳ ಅಧ್ಯಕ್ಷರ ಈ ಆತ್ಮೀಯ ನಡೆಗಳು ಪ್ರಧಾನಿ ಮೋದಿ ಅವರ ಮೇಲೆ ಪ್ರಭಾವ ಬೀರಿದವು ಎಂದು ವರದಿಯಾಗಿದೆ.