ಆ್ಯಪ್ನಗರ

ಎರಡನೇ ಬಾರಿಯು ಸಿಎಲ್‌ಪಿ ಮೀಟಿಂಗ್‌ಗೆ ಸಚಿನ್‌ ಪೈಲಟ್‌ ಗೈರು; ಬಂಡಾಯಕ್ಕೆ ಕಾಂಗ್ರೆಸ್‌ನಿಂದ ಶಿಸ್ತುಕ್ರಮ!

ಉಪ ಮುಖ್ಯಮಂತ್ರಿ ಸಚಿನ್‌ ಪೈಲಟ್‌ ಎರಡನೇ ಬಾರಿಗೆ ಆಯೋಜನೆಗೊಂಡ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಗೈರಾಗಿದ್ದಾರೆ. ಈ ಮೂಲಕ ತನ್ನ ಬಂಡಾಯದ ಕಾವನ್ನ ಇನ್ನಷ್ಟು ಹೆಚ್ಚಿಸಿದ್ದಾರೆ. ಬಂಡಾಯ ಶಮನ ಸದ್ಯಕ್ಕೆ ದೂರವಾದ ಮಾತು ಎನ್ನುವ ಸಂದೇಶ ರವಾನಿಸಿದ್ದಾರೆ.

Vijaya Karnataka Web 14 Jul 2020, 12:43 pm
ಜೈಪುರ್: ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ವಿರುದ್ಧ ಬಂಡಾಯದ ಬಾವುಟ ಹಾರಿಸಿರುವ ಉಪ ಮುಖ್ಯಮಂತ್ರಿ ಸಚಿನ್‌ ಪೈಲಟ್‌ ಎರಡನೇ ಬಾರಿಗೆ ಆಯೋಜನೆಗೊಂಡ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಗೈರಾಗಿದ್ದಾರೆ. ಈ ಮೂಲಕ ತನ್ನ ಬಂಡಾಯದ ಕಾವನ್ನ ಇನ್ನಷ್ಟು ಹೆಚ್ಚಿಸಿದ್ದಾರೆ.
Vijaya Karnataka Web 76926784


ಜು. 13ರ ಸೋಮವಾರ ಒಂದು ಸುತ್ತಿನ ಸಿಎಲ್‌ಪಿ ಸಭೆ ನಡೆದಿತ್ತು, ಸಭೆ ಬಳಿಕ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ಗೆ ಬೆಂಬಲ ಸೂಚಿಸಿದ್ದ ಶಾಸಕರನ್ನ ರೆಸಾರ್ಟ್‌ಗೆ ಶಿಫ್ಟ್‌ ಮಾಡಲಾಗಿತ್ತು. ಅಲ್ಲದೇ ಸಚಿನ್ ಪೈಲಟ್ ಅವರ ಮನವೊಲಿಸಲು ನಿನ್ನೆ ಪ್ರದೇಶ ಕಾಂಗ್ರೆಸ್ ಸಮಿತಿ ಕಚೇರಿಯಿಂದ ತೆಗೆದು ಹಾಕಲಾಗಿದ್ದ ಅವರ ಪೋಸ್ಟರ್‌ಗಳನ್ನು ಮತ್ತೆ ಅಳವಡಿಸಿ, ಅವರನ್ನ ಸಿಎಲ್‌ಪಿ ಸಭೆಗೆ ಹಾಜರಾಗುವಂತೆ ಆಹ್ವಾನ ನೀಡಲಾಗಿತ್ತು.

ಆದರೆ ಯಾವುದೇ ಆಹ್ವಾನಕ್ಕೆ ಬಗ್ಗದೆ ಸಚಿನ್‌ ಪೈಲಟ್‌ ಸಿಎಲ್‌ಪಿ ಸಭೆಗೆ ಗೈರಾಗುವ ಮೂಲಕ ಪಟ್ಟು ಸಡಿಲಿಸುವ ಮಾತೇ ಇಲ್ಲ ಎನ್ನುವ ನೇರ ಸಂದೇಶ ಗೆಹ್ಲೋಟ್‌ ಗ್ಯಾಂಗ್‌ಗೆ ರವಾನಿಸಿದ್ದಾರೆ. ಇದು ರಾಜಸ್ತಾನ ಕಾಂಗ್ರೆಸ್‌ನ ಕೋಪಕ್ಕೆ ಕಾರಣವಾಗಿದ್ದು, ಪೈಲೆಟ್‌ ವಿರುದ್ಧ ಶಿಸ್ತು ಕ್ರಮಕ್ಕೆ ಮುಂದಾಗಿದೆ ಎಂದು ತಿಳಿದುಬಂದಿದೆ. ಸದ್ಯ ಸಚಿನ್‌ ಪೈಲಟ್ ತನ್ನ ಬೆಂಬಲಿಗರೊಂದಿಗೆ ಮನೆಸಾರ್‌ ಹೋಟೆಲ್‌ನಲ್ಲಿದ್ದು, ಸಭೆಗೆ ಆಗಮಿಸುವುದಿಲ್ಲ ಎಂದು ತಿಳಿಸಿದ್ದಾಗಿ ಮೂಲಗಳು ತಿಳಿಸಿವೆ.

ರಾಜಸ್ಥಾನ ಕಾಂಗ್ರೆಸ್‌ನಿಂದ ಮತ್ತೊಂದು ಸಭೆ: ಪೈಲಟ್ ಪೋಸ್ಟರ್ ಹಾಕಿ ಮನವೋಲಿಕೆಗೆ ಯತ್ನ!
ಬಿಜೆಪಿಗೆ ಸೇರಲ್ಲ!
ಮೂಲಗಳ ಪ್ರಕಾರ ಸಚಿನ್‌ ಪೈಲಟ್‌ ಹಾಗೂ ಅವರ ಬೆಂಬಲಿಗರು ಬಿಜೆಪಿಗೆ ಸೇರಲ್ಲ ಎಂದು ತಿಳಿದುಬಂದಿದೆ. ಬೆಂಬಲಿಗರಿಗೆ ಸಚಿನ್‌ ಪೈಲೆಟ್‌ ಮುಖ್ಯಮಂತ್ರಿಯಾಗಬೇಕು ಎನ್ನುವ ಆಶಯ ಇದೆಯಂತೆ. ಈ ಹಿನ್ನೆಲೆ ತಾವು ಹೋಟೆಲ್‌ನಲ್ಲಿ ಬೀಡುಬಿಟ್ಟಿರುವುದಾಗಿ ತಿಳಿಸಿದ್ದಾರೆ. ಈ ರೀತಿಯ ಬಂಡಾಯದ ಮೂಲಕ ಹೈಕಮಾಂಡ್‌ಗೆ ಒತ್ತಡ ಹಾಕುವ ತಂತ್ರ ಎನ್ನುವ ಮಾತುಗಳು ಕೇಳಿಬರುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ