ಆ್ಯಪ್ನಗರ

ಇಡಿ ಸಂಕಷ್ಟದಿಂದ ಪಾರಾಗಲು ಡಿಕೆಶಿಗೆ ಕಬ್ಬಾಳಮ್ಮ ಕುಂಕುಮ ಹಚ್ಚಿದ ಕಾರ್ಯಕರ್ತರು

ಸಾತನೂರು ಸಮೀಪದ ಕಬ್ಬಾಳಮ್ಮ ಡಿಕೆ ಶಿವಕುಮಾರ್‌ ಕುಟುಂಬದ ಮನೆ ದೇವರು. ಡಿಕೆಶಿ ಕುಟುಂಬ ಸದಸ್ಯರು ಈ ದೇಗುಲದಲ್ಲಿ ವಿಶೇಷ ಪೂಜೆ, ಸಲ್ಲಿಸುತ್ತಾರೆ. ಹಲವಾರು ವರ್ಷಗಳಿಂದಲೂ ಡಿಕೆಶಿ ಈ ದೇವಿಯ ಪೂಜೆಯಲ್ಲಿ ತೊಡಗಿದ್ದಾರೆ.

Vijaya Karnataka Web 3 Sep 2019, 5:07 pm
ಹೊಸದಿಲ್ಲಿ: ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ವಿಚಾರಣೆಗೊಳಗಾಗಿರುವ ಮಾಜಿ ಸಚಿವ ಡಿಕೆ ಶಿವಕುಮಾರ್‌ ಪರವಾಗಿ ಈಗ ಇಡೀ ಕಾಂಗ್ರೆಸ್‌ ಹಾಗೂ ಕನಕಪುರ ಕಾರ್ಯಕರ್ತರು ನಿಂತಿದ್ದಾರೆ.
Vijaya Karnataka Web ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್


ನಮ್ಮ 'ಕಲ್ಲು ಬಂಡೆ'ಯನ್ನು ರಕ್ಷಿಸುವಂತೆ ಕನಕಪುರದ ಸಾತನೂರು ತಾಲೂಕಿನ ಪ್ರಖ್ಯಾತ ಕಬ್ಬಾಲಮ್ಮ ದೇವಿಯ ಮೊರೆ ಹೋಗಿದ್ದಾರೆ ಕನಕಪುರ ಕಾಂಗ್ರೆಸ್‌ ಕಾರ್ಯಕರ್ತರು, ಡಿಕೆಶಿಯ ಬೆಂಬಲಿಗರು.

ಹೊಸದಿಲ್ಲಿಯ ಮನೆಯಲ್ಲಿ ದೊರೆತ 8.9 ಕೋಟಿ ರೂ. ಈಗ ಡಿಕೆಶಿ ಅವರನ್ನು ಜಾರಿ ನಿರ್ದೇನಾಳಯದ ಸುಳಿಗೆ ಸಿಲುಕಿಸಿದೆ. ಕಳೆದ ನಾಲ್ಕು ದಿನಗಳಿಂದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಡಿಕೆಶಿಗೆ ಡ್ರಿಲ್‌ ಮಾಡಿದ್ದಾರೆ.

ಐಟಿ ಇಲಾಖೆ ನ್ಯಾಯಮಂಡಳಿ ನಿವೃತ್ತ ಉಪಾಧ್ಯಕ್ಷರ ಸಲಹೆ ಪಡೆದ ಡಿಕೆ ಶಿವಕುಮಾರ್


ಬೆಳಗ್ಗೆಯಿಂದ ಸಂಜೆಯವರೆಗೂ ಡಿಕೆ ಶಿವಕುಮಾರ್‌ ವಿಚಾರಣೆ ನಡೆಯುತ್ತಿದೆ. ಗಣೇಶ ಹಬ್ಬದ ದಿನವೂ ಡಿಕೆಶಿಗೆ ಅಧಿಕಾರಿಗಳು ಪ್ರಶ್ನೆಗಳ ಸುರಿಮಳೆಗರೆದಿದ್ದಾರೆ.

ಇಂಥ ಸಂಕಷ್ಟದಲ್ಲಿ ಸಿಲುಕಿರುವ ಡಿಕೆ ಶಿವಕುಮಾರ್‌ ಅವರನ್ನು ಪಾರು ಮಾಡುವಂತೆ ಕಾರ್ಯಕರ್ತರು, ಬೆಂಬಲಿಗರು, ಕುಟುಂಬ ಸದಸ್ಯರು ಕಬ್ಬಾಳಮ್ಮ ಮೊರೆ ಹೋಗಿದ್ದಾರೆ.

ಸಾತನೂರು ಸಮೀಪದ ಕಬ್ಬಾಳಮ್ಮ ಡಿಕೆಶಿ ಕುಟುಂಬದ ಮನೆ ದೇವರು. ಡಿಕೆಶಿ ಈ ದೇಗುಲಕ್ಕೆ ಹೆಚ್ಚು ಬಾರಿ ಭೇಟಿ ನೀಡುತ್ತಾರೆ. ಪ್ರತಿ ಬಾರಿ ನಾಮಪತ್ರ ಸಲ್ಲಿಸುವಾಗಲೂ ಡಿಕೆಶಿ ಈ ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ನಂತರವೇ ನಾಮಪತ್ರ ಸಲ್ಲಿಸುವುದು. ಇದೇ ಸಂಪ್ರದಾಯವನ್ನು ಡಿಕೆಶಿ ಹಲವಾರು ವರ್ಷಗಳಿಂದಲೂ ಪಾಲಿಸಿಕೊಂಡು ಬರುತ್ತಿದ್ದಾರೆ.

ಎರಡು ವರ್ಷಗಳಿಂದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮೂರು ದಿನಗಳ ದಾಳಿ ನಡೆಸಿದ ನಂತರ ಡಿಕೆ ಶಿವಕುಮಾರ್ ಮೊದಲಿಗೆ ಭೇಟಿ ನೀಡಿದ್ದೇ ಕಬ್ಬಾಳಮ್ಮ ದೇಗುಲಕ್ಕೆ.

ಆಕೆಯನ್ನು ನಂಬಿದರೆ ಕೈ ಹಿಡಿಯುತ್ತಾಳೆ. ನನಗೆ ಸದಾ ರಕ್ಷಣಾ ಒದಗಿಸಿದ್ದಾಳೆ ಎಂದು ಡಿಕೆಶಿ ಸದಾ ಹೇಳುತ್ತಿದ್ದರು.

ಅದರಂತೆ ಈಗ ಸಂಕಷ್ಟಕ್ಕೆ ಸಿಲುಕಿರುವ ಡಿಕೆಶಿಯನ್ನು ಪಾರು ಮಾಡುವಂತೆ ಕುಟುಂಬ ಸದಸ್ಯರು, ಕಾರ್ಯಕರ್ತರು, ಬೆಂಬಲಿಗರು ಕಬ್ಬಾಳಮ್ಮ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ನಂತರ ದೇವಿಯ ಕುಂಕುಮವನ್ನು ಆಪ್ತರು ಹೊಸದಿಲ್ಲಿಗೆ ಕೊಂಡೊಯ್ದುರು. ಅಲ್ಲಿ ಡಿಕೆ ಶಿವಕುಮಾರ್‌ ಅವರನ್ನು ಭೇಟಿ ನೀಡಿದ ಹಣೆಗೆ ಕುಂಕುಮ ಹಚ್ಚಿದ್ದಾರೆ.

ಈ ಎಲ್ಲ ಬೆಳವಣಿಗೆಗಳ ನಡುವೆಯೂ ಮಂಗಳವಾರ ಕೂಡ ಡಿಕೆ ಶಿವಕುಮಾರ್‌ ವಿಚಾರಣೆ ಮುಂದುವರಿದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ