ಆ್ಯಪ್ನಗರ

ಅಕ್ರಮ ಹಣ ವರ್ಗಾವಣೆ: 8 ಗಂಟೆಗೂ ಹೆಚ್ಚು ಕಾಲ ಡಿಕೆ ಸುರೇಶ್‌ ವಿಚಾರಣೆ ಮಾಡಿದ ಇಡಿ ಅಧಿಕಾರಿಗಳು

ಕನಕಪುರದ ಬಂಡೆಯಂತೆ ಇದ್ದ ಡಿಕೆಸು ಸಹೋದರರಿಗೆ ಈಗ ಕಾನೂನು ಕಂಟಕ ಎದುರಾಗಿದೆ. ಡಿಕೆ ಶಿವಕುಮಾರ್‌ ನ್ಯಾಯಾಂಗ ಬಂಧನದಲ್ಲಿದ್ದರೆ. ಡಿಕೆ ಸುರೇಶ್‌ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದಾರೆ.

Vijaya Karnataka Web 11 Oct 2019, 8:36 pm
ಹೊಸದಿಲ್ಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕದ ಕಾಂಗ್ರೆಸ್‌ನ ಏಕೈಕ ಸಂಸದ ಡಿಕೆ ಸುರೇಶ್ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ವಿಚಾರಣೆಗೊಳಪಡಿಸಿದರು.
Vijaya Karnataka Web ಡಿಕೆ ಸುರೇಶ್‌
ಡಿಕೆ ಸುರೇಶ್‌


ಡಿಕೆ ಸುರೇಶ್‌ ಅವರನ್ನು ನಾಲ್ಕನೇ ದಿನ ವಿಚಾರಣೆಗೊಳಪಡಿಸಲಾಗಿದೆ. ಹೊಸದಿಲ್ಲಿಯ ಲೋಕನಾಯಭವನದಲ್ಲಿ ಜಾರಿ ನಿರ್ದೇಶನಾಲಯದ ಕಚೇರಿಯಲ್ಲಿ ಗುರುವಾರ ಬೆಳಗ್ಗೆ 11 ಗಂಟೆಯಿಂದ ಡಿಕೆ ಸುರೇಶ್ ಅವರನ್ನು ವಿಚಾರಣೆಗೊಳಪಡಿಸಲಾಗಿದೆ.

ಕಳೆದ ವಾರ ಎರಡು ದಿನ, ಬುಧವಾರ (ಅಕ್ಟೋಬರ್‌ 9, 2019) ಹಾಗೂ ಗುರುವಾರ ಸತತ ಎರಡು ದಿನಗಳ ಕಾಲ ಡಿಕೆ ಸುರೇಶ್‌ರನ್ನು ಅಧಿಕಾರಿಗಳು ವಿಚಾರಣೆಗೊಳಪಡಿಸಿದರು.

ಹೊಸದಿಲ್ಲಿಯ ಸಫ್ತರ್ ಜಂಗ್ ಫ್ಲಾಟ್ ನಲ್ಲಿ ಸಿಕ್ಕಿದ ನಗದು ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ಟೋಬರ್ 07 ರ ಒಳಗಾಗಿ ಇಡಿ ವಿಚಾರಣೆಗೆ ಹಾಜರಾಗುವಂತೆ ಡಿಕೆಶಿ ಸಹೋದರ ಹಾಗೂ ಸಂಸದ ಡಿ.ಕೆ. ಸುರೇಶ್ ಅವರಿಗೆ ಜಾರಿ ನಿರ್ದೇಶನಾಲಯ ನೋಟಿಸ್ ಜಾರಿ ಮಾಡಿತ್ತು. ಹೀಗಾಗಿ ಡಿಕೆ ಸುರೇಶ್ ವಿಚಾರಣೆ ನಡೆಸಲಾಗಿದೆ.

ಅಕ್ರಮ ಆಸ್ತಿ ಸಂಪಾದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಕೆ ಶಿವಕುಮಾರ್ ನ್ಯಾಯಾಂಗ ಬಂಧನದಲ್ಲಿ ಇದ್ದಾರೆ. ಅಕ್ಟೋಬರ್ 14ರ ವರೆಗೆ ಅವರು ತಿಹಾರ್ ಜೈಲಿನಲ್ಲೇ ಇರಬೇಕಾಗಿದೆ.

ಚುನಾವಣೆ ಸಂದರ್ಭ ಸಲ್ಲಿಸಿದ್ದ ಅಫಿಡವಿಟ್‌ನಲ್ಲಿ 388 ಕೋಟಿ ಬೆಲೆ ಬಾಳುವ ಒಟ್ಟು 27 ಆಸ್ತಿ ಇದೆ ಎಂದು ಡಿಕೆ ಸುರೇಶ್‌ ಮಾಹಿತಿ ನೀಡಿದ್ದರು.

ಹೊಸದಿಲ್ಲಿಯ ಡಿಕೆ ಶಿವಕುಮಾರ್ ನಿವಾಸದಲ್ಲಿ ಸಿಕ್ಕಿದ 21 ಲಕ್ಷ ರೂಪಾಯಿಯಲ್ಲಿ 17 ಲಕ್ಷ ರೂಪಾಯಿ ನನ್ನದು ಎಂದು ಐಟಿ ವಿಚಾರಣೆಯಲ್ಲಿ ಸುರೇಶ್ ಹೇಳಿದ್ದರು. ಇದರ ಬಗ್ಗೆಯೂ ವಿಚಾರಣೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ