ಚೆನ್ನೈ: ಡಿಎಂಕೆ ಮುಖಂಡ ಕರುಣಾನಿಧಿ ಸಾವಿನ ಬೆನ್ನಲ್ಲೇ ಅವರ ಉತ್ತರಾಧಿಕಾರಿ ಮತ್ತು ತಮಿಳುನಾಡು ರಾಜಕೀಯ ಕುರಿತಂತೆ ವಿವಿಧ ಚಟುವಟಿಕೆ ಗರಿಗೆದರಿದ್ದು, ಕರುಣಾನಿಧಿ ಅವರಿಗೆ ಆಪ್ತರಾಗಿದ್ದ ಮತ್ತು ಪಕ್ಷ ನಿಷ್ಠೆ ಹೊಂದಿರುವ ಹಲವು ನಾಯಕರು ತಮ್ಮ ಜತೆ ಸಂಪರ್ಕದಲ್ಲಿದ್ದು, ತಮಗೆ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಡಿಎಂಕೆಯಿಂದ ಉಚ್ಚಾಟಿತ ನಾಯಕ, ಕರುಣಾನಿಧಿ ಪುತ್ರ ಎಂ. ಕೆ. ಅಳಗಿರಿ ಹೇಳಿದ್ದಾರೆ.
ಕುಟುಂಬ ಸದಸ್ಯರ ಜತೆ ಮರೀನಾ ಬೀಚ್ನಲ್ಲಿನ ಕರುಣಾನಿಧಿ ಸಮಾಧಿಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಳಗಿರಿ, ನಮ್ಮ ನಾಯಕ ಕರುಣಾನಿಧಿ ಅವರಿಗೆ ಗೌರವ ನಮನ ಸಲ್ಲಿಸಲು ಇಲ್ಲಿಗೆ ಬಂದಿದ್ದೇನೆ. ಅವರ ಜತೆ ನಿಷ್ಠೆಯಿಂದಿದ್ದ ಮತ್ತು ಆಪ್ತರಾಗಿದ್ದ ಡಿಎಂಕೆ ಮುಖಂಡರು ನನ್ನ ಜತೆ ಸಂಪರ್ಕದಲ್ಲಿದ್ದಾರೆ. ಮತ್ತು ಅವರು ನನಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಮುಂದೆ ಸೂಕ್ತ ಸಮಯ ಬರಲಿದೆ. ಆಗ ಎಲ್ಲವನ್ನೂ ತಿಳಿಸುತ್ತೇನೆ ಎಂದಿದ್ದಾರೆ.
ಅಳಗಿರಿ ಜತೆ ಪುತ್ರ ದುರೈ ದಯಾನಿಧಿ ಮತ್ತು ಪುತ್ರಿ ಕಯಾಳಿಜಿ ಕೂಡ ಡಿಎಂಕೆ ನಾಯಕ ಕರುಣಾನಿಧಿ ಸಮಾಧಿಗೆ ಭೇಟಿ ನೀಡಿ ಗೌರವ ಅರ್ಪಿಸಿದ್ದರು.
ಜತೆಗೆ ಡಿಎಂಕೆ ಕಾರ್ಯಕಾರಿ ಸಮಿತಿ ಸಭೆ ಕುರಿತು ತಮಗೆ ಮಾಹಿತಿಯಿಲ್ಲ, ನಾನು ಡಿಎಂಕೆ ಪಕ್ಷದಲ್ಲಿಲ್ಲ. ಹೀಗಾಗಿ ಅವರ ಕುರಿತು ಏನೂ ಕೇಳಬೇಡಿ ಎಂದು ಅಳಗಿರಿ ಹೇಳಿದ್ದಾರೆ.
ಈ ಸುದ್ದಿಯನ್ನು ತಮಿಳಿನಲ್ಲಿ ಓದಿ:
ಕುಟುಂಬ ಸದಸ್ಯರ ಜತೆ ಮರೀನಾ ಬೀಚ್ನಲ್ಲಿನ ಕರುಣಾನಿಧಿ ಸಮಾಧಿಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಳಗಿರಿ, ನಮ್ಮ ನಾಯಕ ಕರುಣಾನಿಧಿ ಅವರಿಗೆ ಗೌರವ ನಮನ ಸಲ್ಲಿಸಲು ಇಲ್ಲಿಗೆ ಬಂದಿದ್ದೇನೆ. ಅವರ ಜತೆ ನಿಷ್ಠೆಯಿಂದಿದ್ದ ಮತ್ತು ಆಪ್ತರಾಗಿದ್ದ ಡಿಎಂಕೆ ಮುಖಂಡರು ನನ್ನ ಜತೆ ಸಂಪರ್ಕದಲ್ಲಿದ್ದಾರೆ. ಮತ್ತು ಅವರು ನನಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಮುಂದೆ ಸೂಕ್ತ ಸಮಯ ಬರಲಿದೆ. ಆಗ ಎಲ್ಲವನ್ನೂ ತಿಳಿಸುತ್ತೇನೆ ಎಂದಿದ್ದಾರೆ.
ಅಳಗಿರಿ ಜತೆ ಪುತ್ರ ದುರೈ ದಯಾನಿಧಿ ಮತ್ತು ಪುತ್ರಿ ಕಯಾಳಿಜಿ ಕೂಡ ಡಿಎಂಕೆ ನಾಯಕ ಕರುಣಾನಿಧಿ ಸಮಾಧಿಗೆ ಭೇಟಿ ನೀಡಿ ಗೌರವ ಅರ್ಪಿಸಿದ್ದರು.
ಜತೆಗೆ ಡಿಎಂಕೆ ಕಾರ್ಯಕಾರಿ ಸಮಿತಿ ಸಭೆ ಕುರಿತು ತಮಗೆ ಮಾಹಿತಿಯಿಲ್ಲ, ನಾನು ಡಿಎಂಕೆ ಪಕ್ಷದಲ್ಲಿಲ್ಲ. ಹೀಗಾಗಿ ಅವರ ಕುರಿತು ಏನೂ ಕೇಳಬೇಡಿ ಎಂದು ಅಳಗಿರಿ ಹೇಳಿದ್ದಾರೆ.
ಈ ಸುದ್ದಿಯನ್ನು ತಮಿಳಿನಲ್ಲಿ ಓದಿ: