ಆ್ಯಪ್ನಗರ

‘ಒಂದು ದೇಶ ಒಂದು ಪಡಿತರ ಚೀಟಿಗೆ’ ಡಿಎಂಕೆ ವಿರೋಧ

ದೇಶಾದ್ಯಂತ ಒಂದೇ ರೀತಿಯ ಪಡಿತರ ಚೀಟಿ ವ್ಯವಸ್ಥೆ ಜಾರಿಗೆ ಮುಂದಾಗಿರುವ ಕೇಂದ್ರ ಸರಕಾರದ ನಡೆಗೆ ಡಿಎಂಕೆ ವಿರೋಧ ವ್ಯಕ್ತಪಡಿಸಿದೆ.

PTI 1 Jul 2019, 5:00 am
ಚೆನ್ನೈ: ದೇಶಾದ್ಯಂತ ಒಂದೇ ರೀತಿಯ ಪಡಿತರ ಚೀಟಿ ವ್ಯವಸ್ಥೆ ಜಾರಿಗೆ ಮುಂದಾಗಿರುವ ಕೇಂದ್ರ ಸರಕಾರದ ನಡೆಗೆ ದ್ರಾವಿಡ ಮುನ್ನೇತ್ರ ಕಳಗಂ(ಡಿಎಂಕೆ) ವಿರೋಧ ವ್ಯಕ್ತಪಡಿಸಿದೆ.
Vijaya Karnataka Web dmk opposes centres one nation one ration card scheme
‘ಒಂದು ದೇಶ ಒಂದು ಪಡಿತರ ಚೀಟಿಗೆ’ ಡಿಎಂಕೆ ವಿರೋಧ

ಆಹಾರದ ನಾಗರಿಕ ಸರಬರಾಜು ಮತ್ತು ಪೂರೈಕೆ ಮಾಡುವುದು ರಾಜ್ಯ ಸರಕಾರಗಳ ಮೂಲಭೂತ ಹಕ್ಕು. ಇದನ್ನು ಕಿತ್ತುಕೊಂಡರೆ ಮುಂದಾಗುವ ಪರಿಣಾಮಗಳ ಬಗ್ಗೆ ಕೇಂದ್ರ ಸಚಿವರಿಗೆ ಅಂದಾಜು ಇಲ್ಲ. ಎಲ್ಲ ರಾಜ್ಯಗಳಲ್ಲೂ ಕೇಂದ್ರ ಸರಕಾರ ತನ್ನ ಅಧಿಪತ್ಯ ಸಾಧಿಸಲು ಹೊರಟಿದೆ. ಒಕ್ಕೂಟ ವ್ಯವಸ್ಥೆಯನ್ನು ಬುಡಸಮೇತ ಕಿತ್ತೊಗೆಯುವುದು ನರೇಂದ್ರ ಮೋದಿ ನೇತೃತ್ವದ ಸರಕಾರದ ಉದ್ದೇಶ ಎಂದು ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್‌ ಕಿಡಿಕಾರಿದ್ದಾರೆ.
ಮತ್ತೊಂದೆಡೆ, ಎಎಂಎಂಕೆ ನಾಯಕ ಟಿಟಿವಿ ದಿನಕರನ್‌ ಕೂಡ ಕೇಂದ್ರ ಸರಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಆಹಾರ ಭದ್ರತಾ ಕಾಯ್ದೆ ಈಗಾಗಲೇ ತಮಿಳುನಾಡಿಗೆ ಹೊರೆಯಾಗಿ ಮಾರ್ಪಟ್ಟಿದೆ. ವಲಸಿಗರಿಗೆ ಅಥವಾ ಹೊರರಾಜ್ಯಕ್ಕಾಗಿ ನಾವು ಬೆಳೆದ ಬೆಳೆಯ ಸ್ವಲ್ಪ ಭಾಗ ಮೀಸಲಿಟ್ಟರೆ, ಸ್ಥಳೀಯರು ಆಹಾರಕ್ಕಾಗಿ ಪರದಾಡಬೇಕಾಗುತ್ತದೆ. ಒಂದೇ ರೀತಿಯ ಪಡಿತರ ಚೀಟಿ ವ್ಯವಸ್ಥೆಯಿಂದ ರಾಜ್ಯಾದ್ಯಂತ ಆಹಾರ ಸರಬರಾಜು ವ್ಯವಸ್ಥೆ ಕುಸಿತ ಕಾಣಲಿದೆ ಎಂದಿದ್ದಾರೆ.
ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಸ್ಥಳಾಂತರಗೊಂಡರೆ ಪಡಿತರ ಪಡೆಯುವುದರಿಂದ ವಂಚಿತರಾಗುವುದನ್ನು ತಡೆಯಲು ಮತ್ತು ನಕಲಿ ಪಡಿತರ ಚೀಟಿಗಳ ಹಾವಳಿಯನ್ನು ತಡೆಗಟ್ಟಲು ಒಂದು ದೇಶ, ಒಂದು ಪಡಿತರ ವ್ಯವಸ್ಥೆಗೆ ಕೇಂದ್ರ ಮುಂದಾಗಿದೆ ಎಂದು ಆಹಾರ ಸಚಿವ ರಾಮ್‌ ವಿಲಾಸ್‌ಪಾಸ್ವಾನ್‌ ಶನಿವಾರ ಹೇಳಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ