ಆ್ಯಪ್ನಗರ

370ನೇ ವಿಧಿ ರೂಪಿಸಿದ್ದ ಅಯ್ಯಂಗಾರ್‌

ಸಂವಿಧಾನ ಕರಡು ಸಮಿತಿಯ 7 ಸದಸ್ಯರ ತಂಡದಲ್ಲಿದ್ದ ಅಯ್ಯಂಗಾರ್‌ ಅವರು, ನಂತರ ಜಮ್ಮು-ಕಾಶ್ಮೀರಕ್ಕೆ ಪ್ರತ್ಯೇಕತೆಯ ಸ್ಥಾನಮಾನ ಕಲ್ಪಿಸಿದ 370ನೇ ವಿಧಿಯನ್ನು ರೂಪಿಸಿದರು.

Agencies 6 Aug 2019, 5:00 am
ಹೊಸದಿಲ್ಲಿ: ಕಾಶ್ಮೀರ ವಿಷಯದಲ್ಲಿ ಪ್ರಥಮ ಪ್ರಧಾನಿ ಪಂಡಿತ್‌ ಜವಾಹರ್‌ ಲಾಲ್‌ ನೆಹರು ತೆಗೆದುಕೊಂಡ ತೀರ್ಮಾನ 'ಐತಿಹಾಸಿಕ ಪ್ರಮಾದ' ಎಂದು ಬಿಜೆಪಿ ಟೀಕಿಸುತ್ತ ಬಂದಿದೆ. ಆದರೆ ಆ ಐತಿಹಾಸಿಕ ಪ್ರಮಾದಕ್ಕೆ ಆಸ್ಪದ ಮಾಡಿಕೊಟ್ಟ ಸಂವಿಧಾನದ 370 ವಿಧಿಯ ಕರಡನ್ನು ರೂಪಿಸಿದ್ದ ತಮಿಳುನಾಡಿನ ಪಂಡಿತನ ಬಗ್ಗೆ ಬಹುತೇಕ ಜನರಿಗೆ ಗೊತ್ತಿಲ್ಲ. ಹೌದು, ಈ ವಿವಾದಾತ್ಮಕ ವಿಧಿ ರೂಪಿಸಿದ ಗಣ್ಯನ ಹೆಸರು ಸರ್‌ ನರಸಿಂಹ ಅಯ್ಯಂಗಾರ್‌ ಗೋಪಾಲಸ್ವಾಮಿ ಅಯ್ಯಂಗಾರ್‌.
Vijaya Karnataka Web do you know about the tamil nadu man who drafted article 370
370ನೇ ವಿಧಿ ರೂಪಿಸಿದ್ದ ಅಯ್ಯಂಗಾರ್‌


ಅಂದಿನ ಮದ್ರಾಸ್‌ ಪ್ರೆಸಿಡೆನ್ಸಿಗೆ ಸೇರಿದ್ದ ತಂಜಾವೂರು ಜಿಲ್ಲೆ (ಈಗ ತಮಿಳುನಾಡು)ಯಲ್ಲಿ ಜನಿಸಿದ ನರಸಿಂಹ ಅಯ್ಯಂಗಾರ್‌, 1905ರಲ್ಲಿ ಮದ್ರಾಸ್‌ ಸಿವಿಲ್‌ ಸರ್ವಿಸ್‌ಗೆ ಸೇರಿ 1919ರವರೆಗೆ ಡೆಪ್ಯುಟಿ ಕಲೆಕ್ಟರ್‌ ಆಗಿ ಸೇವೆ ಸಲ್ಲಿಸಿದರು. ರಾಜಕೀಯದಲ್ಲಿ ಸಕ್ರಿಯ ಪಾತ್ರ ನಿರ್ವಹಿಸುವುದಕ್ಕೂ ಮೊದಲು ಅವರು ಮಹತ್ವದ ಅನೇಕ ಹುದ್ದೆಗಳನ್ನು ನಿರ್ವಹಿಸಿದ್ದರು.

1937ರಿಂದ 1943ರವರೆಗೆ ಅವರು ಜಮ್ಮು-ಕಾಶ್ಮೀರದ ಪ್ರಧಾನಮಂತ್ರಿಯಾಗಿ ಸೇವೆ ಸಲ್ಲಿಸಿದರು. ಬಳಿಕ ನೆಹರು ಸಂಪುಟದಲ್ಲಿ ಹಲವು ಪ್ರಮುಖ ಖಾತೆಗಳನ್ನು ನಿರ್ವಹಿಸಿದರು. ಸಂವಿಧಾನ ಕರಡು ಸಮಿತಿಯ 7 ಸದಸ್ಯರ ತಂಡದಲ್ಲಿದ್ದ ಅಯ್ಯಂಗಾರ್‌ ಅವರು, ನಂತರ ಜಮ್ಮು-ಕಾಶ್ಮೀರಕ್ಕೆ ಪ್ರತ್ಯೇಕತೆಯ ಸ್ಥಾನಮಾನ ಕಲ್ಪಿಸಿದ 370ನೇ ವಿಧಿಯನ್ನು ರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ