ಆ್ಯಪ್ನಗರ

Doctor Murder: ಅಮ್ಮ, ನಾನು ನನ್ನ ಪ್ರೀತಿಯನ್ನು ಕೊಂದೆ!

ಆರೋಪಿಯನ್ನು ಡಾ. ಚಂದ್ರ ಪ್ರಕಾಶ್ ವರ್ಮಾ (27) ಎಂದು ಗುರುತಿಸಲಾಗಿದ್ದು, ಆತ್ಮಹತ್ಯೆಗೆ ಯತ್ನಿಸುತ್ತಿದ್ದಾಗ ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Navbharat Times 4 May 2019, 11:30 am
ಹೊಸದಿಲ್ಲಿ: ಕೇಂದ್ರ ದಿಲ್ಲಿಯಲ್ಲಿ ನಡೆದ ಡಾಕ್ಟರ್ ಗರೀಮಾ ಮಿಶ್ರಾ ಹತ್ಯೆ ಪ್ರಕರಣದಲ್ಲಿ ಅವರ ಸಹೋದ್ಯೋಗಿ ವೈದ್ಯನನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
Vijaya Karnataka Web Murder


ಆರೋಪಿಯನ್ನು ಡಾ. ಚಂದ್ರ ಪ್ರಕಾಶ್ ವರ್ಮಾ (27) ಎಂದು ಗುರುತಿಸಲಾಗಿದ್ದು, ಆತ್ಮಹತ್ಯೆಗೆ ಯತ್ನಿಸುತ್ತಿದ್ದಾಗ ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಗರೀಮಾ ವಾಸವಾಗಿದ್ದ ಫ್ಲ್ಯಾಟ್‌ನಲ್ಲಿ ವಾಸವಾಗಿದ್ದೆ. ನಾನಾಕೆಯನ್ನು ಪ್ರೀತಿಸುತ್ತಿದ್ದೆ, ಆದರಾಕೆ ಒಪ್ಪಿಕೊಳ್ಳಲಿಲ್ಲ. ಸದಾ ಅಂತರ ಕಾಯ್ದುಕೊಳ್ಳುತ್ತಿದ್ದಳು. ತರಬೇತಿ ಬಳಿಕ ಆಕೆ ಗೋರಖ್‌ಪುರದಲ್ಲಿನ ತನ್ನ ನಿವಾಸಕ್ಕೆ ವಾಪಸ್ಸಾಗಲು ಯೋಚಿಸಿದಳು. ಇದರಿಂದ ಕೋಪಗೊಂಡ ಆತ ಆಕೆಯನ್ನು ಕೊಂದಿದ್ದಾನೆ.

ಮಂಗಳವಾರ ದೆಹಲಿಯ ರಂಜೀತ್‍ನಗರದಲ್ಲಿರುವ ತನ್ನ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಳು. ಗರೀಮಾ ಶವದ ಪಕ್ಕದಲ್ಲಿ ರಕ್ತದ ಕಲೆಯಿದ್ದ ಮುರಿದು ಬಿದ್ದ ಚಾಕು ಪತ್ತೆಯಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.

ಬಳಿಕ ಖಿನ್ನತೆಗೆ ಜಾರಿದ ಆತ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ. ಆದರೆ ಮಾಹಿತಿ ಪಡೆದ ಪೊಲೀಸರು ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನಾನು ಪ್ರೀತಿಯನ್ನು ಕೊಂದೆ


ಒನ್ ಸೈಡ್ ಲವ್‌ನಲ್ಲಿ ಪ್ರಕಾಶ್ ಹುಚ್ಚನಂತಾಗಿದ್ದರೆ, ಗರೀಮಾ ತನ್ನ ವೃತ್ತಿ ಜೀವನದ ಕಡೆ ಗಮನ ಕೇಂದ್ರೀಕರಿಸಿದ್ದಳು. ಹೀಗಾಗಿ ತನ್ನ ಸಹೋದ್ಯೋಗಿಯನ್ನಾಕೆ ನಿರ್ಲಕ್ಷಿಸಿದ್ದಳು. ಆಕೆಯನ್ನು ಕಳೆದುಕೊಳ್ಳುತ್ತೇನೆನೋ ಎಂದು ಪ್ರಕಾಶ್ ಆತಂಕಕ್ಕೆ ಬಿದ್ದಿದ್ದ. ಹೀಗಾಗಿ ಕೊಲೆ ಮಾಡಲು ನಿರ್ಧರಿಸಿದ.

ಮಂಗಳವಾರ ರಾತ್ರಿ ಆಕೆಯ ಕತ್ತು ಸೀಳಿ ಕೊಲೆ ಮಾಡಿದ್ದ ಪ್ರಕಾಶ್ ಬಳಿಕ ಪಶ್ಚಾತಾಪ ಪಟ್ಟಿದ್ದ. ಅಮ್ಮನಿಗೆ ಮೊಬೈಲ್ ಕರೆ ಮಾಡಿ ನಾನು ಬಹಳ ದೊಡ್ಡ ತಪ್ಪು ಮಾಡಿಬಿಟ್ಟೆ. ನನ್ನ ಪ್ರೀತಿಯನ್ನು ಕೊಂದೆ ಎಂದು ಹೇಳಿದ್ದ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ