ಹೊಸದಿಲ್ಲಿ: ವರ್ಣ ದ್ವೇಷ ಕುರಿತ ಬಿಜೆಪಿ ನಾಯಕ ತರುಣ್ ವಿಜಯ್ ಹೇಳಿಕೆ ಕಿಡಿ ಹೊತ್ತಿಸಿರುವ ಸಂದರ್ಭದಲ್ಲಿ, ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಸಹ ಟ್ವೀಟರ್ನಲ್ಲಿ 'ಕಪ್ಪು' ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
'ನಾವು ಕಪ್ಪು ಜನರ ಜತೆ ಬದುಕಿದ್ದೇವೆ ಎಂದು ತರುಣ್ ಹೇಳಿದ್ದಾರೆ. 'ನಾವು' ಎಂದರೆ ಯಾರು ? ಬಿಜೆಪಿ/ಆರೆಸ್ಸೆಸ್ನವರು ಮಾತ್ರ ಭಾರತೀಯರು ಎಂಬುದು ಅವರ ಮಾತಿನ ಅರ್ಥವೇ ?'' ಎಂದು ಚಿದಂಬರಂ ಪ್ರಶ್ನಿಸಿದ್ದಾರೆ.
When Tarun Vijay said "we live with blacks", I ask him who is "we"? Was he referring to BJP/RSS members as the only Indians? — P. Chidambaram (@PChidambaram_IN) April 8, 2017
ಆಫ್ರಿಕನ್ ವಿದ್ಯಾರ್ಥಿಗಳ ಮೇಲಿನ ದಾಳಿಗೆ ಸಂಬಂಧಿಸಿದಂತೆ ನಡೆದ ಚರ್ಚೆ ವೇಳೆ, ಭಾರತದ ಸೌಹಾರ್ದತೆಯ ನಿಲುವು ಸಮರ್ಥಿಸಿಕೊಳ್ಳುವ ಭರದಲ್ಲಿ ತರುಣ್, 'ನಾವು ಜನಾಂಗೀಯ ದ್ವೇಷಿಗಳು ಎನ್ನುವುದಾದರೆ, ನಾವು ಹೇಗೆ ಇಡೀ ದಕ್ಷಿಣ ಭಾರತದೊಂದಿಗೆ ಇರಲು ಸಾಧ್ಯವಾಗುತ್ತಿತ್ತು? ತಮಿಳುನಾಡು, ಕೇರಳದ ಬಗ್ಗೆ ತಿಳಿದಿದೆಯೇ, ಕರ್ನಾಟಕ ಮತ್ತು ಆಂಧ್ರಪ್ರದೇಶ ಬಲ್ಲಿರಾ... ಅಲ್ಲಿನ ಜನರೆಲ್ಲರೂ ಕಪ್ಪು. ನಮ್ಮ ಸುತ್ತಲೂ ಕಪ್ಪು ಜನರಿದ್ದಾರೆ,' ಎಂಬ ಮಾತು ವಿವಾದಕ್ಕೀಡಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ತರುಣ್ ಹೇಳಿಕೆಗೆ ತೀವ್ರ ಪ್ರತಿಕ್ರಿಯೆಗಳು ದಾಖಲಾದ ನಂತರ. ಆರ್ಎಸ್ಎಸ್ನ ಪಾಂಚಜನ್ಯ ಪತ್ರಿಕೆ ಟ್ವೀಟ್ ಮೂಲಕ ಕ್ಷಮೆಯಾಚಿಸಿತ್ತು.
I can die but how can I ridicule my own culture,my own people and my own nation?Think before you misinterpret my badly framed sentence. Yes https://t.co/fyxJQuP3mI — Tarun Vijay (@Tarunvijay) April 7, 2017 ಟೀಕಾಕಾರರಿಗೆ ನನ್ನ ಮಾತು ಸರಿಯಾಗಿ ಅರ್ಥವಾಗಿಲ್ಲ ಎಂದು ತರುಣ್ ಸಹ ವಿಷಾದ ವ್ಯಕ್ತಪಡಿಸಿದ್ದರು. ‘ಈ ಬಗ್ಗೆ ನನಗೆ ತೀವ್ರ ಬೇಸರವಾಗಿದೆ. ನಾನು ಹೇಳಿದ್ದನ್ನು ತಪ್ಪಾಗಿ ಅರ್ಥೈಸಲಾಗಿದೆ. ಆದರೂ, ನನ್ನ ಮಾತುಗಳಿಂದ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ,’ ಎಂದಿದ್ದರು.
'ನಾವು ಕಪ್ಪು ಜನರ ಜತೆ ಬದುಕಿದ್ದೇವೆ ಎಂದು ತರುಣ್ ಹೇಳಿದ್ದಾರೆ. 'ನಾವು' ಎಂದರೆ ಯಾರು ? ಬಿಜೆಪಿ/ಆರೆಸ್ಸೆಸ್ನವರು ಮಾತ್ರ ಭಾರತೀಯರು ಎಂಬುದು ಅವರ ಮಾತಿನ ಅರ್ಥವೇ ?'' ಎಂದು ಚಿದಂಬರಂ ಪ್ರಶ್ನಿಸಿದ್ದಾರೆ.
When Tarun Vijay said "we live with blacks", I ask him who is "we"? Was he referring to BJP/RSS members as the only Indians? — P. Chidambaram (@PChidambaram_IN) April 8, 2017
ಆಫ್ರಿಕನ್ ವಿದ್ಯಾರ್ಥಿಗಳ ಮೇಲಿನ ದಾಳಿಗೆ ಸಂಬಂಧಿಸಿದಂತೆ ನಡೆದ ಚರ್ಚೆ ವೇಳೆ, ಭಾರತದ ಸೌಹಾರ್ದತೆಯ ನಿಲುವು ಸಮರ್ಥಿಸಿಕೊಳ್ಳುವ ಭರದಲ್ಲಿ ತರುಣ್, 'ನಾವು ಜನಾಂಗೀಯ ದ್ವೇಷಿಗಳು ಎನ್ನುವುದಾದರೆ, ನಾವು ಹೇಗೆ ಇಡೀ ದಕ್ಷಿಣ ಭಾರತದೊಂದಿಗೆ ಇರಲು ಸಾಧ್ಯವಾಗುತ್ತಿತ್ತು? ತಮಿಳುನಾಡು, ಕೇರಳದ ಬಗ್ಗೆ ತಿಳಿದಿದೆಯೇ, ಕರ್ನಾಟಕ ಮತ್ತು ಆಂಧ್ರಪ್ರದೇಶ ಬಲ್ಲಿರಾ... ಅಲ್ಲಿನ ಜನರೆಲ್ಲರೂ ಕಪ್ಪು. ನಮ್ಮ ಸುತ್ತಲೂ ಕಪ್ಪು ಜನರಿದ್ದಾರೆ,' ಎಂಬ ಮಾತು ವಿವಾದಕ್ಕೀಡಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ತರುಣ್ ಹೇಳಿಕೆಗೆ ತೀವ್ರ ಪ್ರತಿಕ್ರಿಯೆಗಳು ದಾಖಲಾದ ನಂತರ. ಆರ್ಎಸ್ಎಸ್ನ ಪಾಂಚಜನ್ಯ ಪತ್ರಿಕೆ ಟ್ವೀಟ್ ಮೂಲಕ ಕ್ಷಮೆಯಾಚಿಸಿತ್ತು.
I can die but how can I ridicule my own culture,my own people and my own nation?Think before you misinterpret my badly framed sentence. Yes https://t.co/fyxJQuP3mI — Tarun Vijay (@Tarunvijay) April 7, 2017 ಟೀಕಾಕಾರರಿಗೆ ನನ್ನ ಮಾತು ಸರಿಯಾಗಿ ಅರ್ಥವಾಗಿಲ್ಲ ಎಂದು ತರುಣ್ ಸಹ ವಿಷಾದ ವ್ಯಕ್ತಪಡಿಸಿದ್ದರು. ‘ಈ ಬಗ್ಗೆ ನನಗೆ ತೀವ್ರ ಬೇಸರವಾಗಿದೆ. ನಾನು ಹೇಳಿದ್ದನ್ನು ತಪ್ಪಾಗಿ ಅರ್ಥೈಸಲಾಗಿದೆ. ಆದರೂ, ನನ್ನ ಮಾತುಗಳಿಂದ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ,’ ಎಂದಿದ್ದರು.