ಆ್ಯಪ್ನಗರ

ದಿನವೆಲ್ಲ ಮನೆಗೆಲಸ ; ರಾತ್ರಿ ಸರಗಳ್ಳಿ

ಕಿಲಾಡಿ ಕಳ್ಳಿಯನ್ನು ರೇಷ್ಮಾ ಪ್ರವೀಣ್ ಎಂದು ಗುರುತಿಸಲಾಗಿದ್ದು, ಮುಂಜಾನೆ ಎದ್ದಾಕೆ ಬೇರೆ ಬೇರೆ ಮನೆಗಳಲ್ಲಿ ಕೆಲಸವನ್ನು ಶುರು ಮಾಡಿಕೊಳ್ಳುತ್ತಿದ್ದಳು. ಕೆಲಸವೆಲ್ಲ ಮುಗಿದ ಮೇಲೆ ಆಕೆ ಕಳ್ಳತನಕ್ಕೆ ಯೋಜನೆ ರೂಪಿಸುತ್ತಿದ್ದಳು. ಮುಖವನ್ನು ಸ್ಕಾರ್ಫ್‌ನಿಂದ ಮುಚ್ಚಿಕೊಂಡು ಮತ್ತು ತನ್ನ ಸಹಚರನ ಬೈಕ್‌ನಲ್ಲಿ ಕುಳಿತು ರಸ್ತೆಗಿಳಿಯುತ್ತಿದ್ದಳು.

Times Now 19 Apr 2019, 10:10 am
ಹೊಸದಿಲ್ಲಿ: ಪೂರ್ವ ದಿಲ್ಲಿಯ ಆನಂದ ವಿಹಾರ ಪ್ರದೇಶದಲ್ಲಿ ಅಪರಾಧ ಜಗತ್ತನ್ನೇ ಹೌಹಾರಿಸುವ ಸುದ್ದಿಯೊಂದು ಬೆಳಕಿಗೆ ಬಂದಿದೆ. ಮಹಿಳೆಯೊಬ್ಬಳು ಬೆಳಗಿನ ಸಮಯ ಬೇರೆ ಬೇರೆ ಮನೆಗಳಲ್ಲಿ ಕೆಲಸ ಮಾಡಿಕೊಂಡಿರುತ್ತಾಳೆ ಮತ್ತು ರಾತ್ರಿ ಸಮಯದಲ್ಲಿ ಕಳ್ಳತನಕ್ಕಿಳಿಯುತ್ತಾಳೆ ಎಂದು ದೂರು ಕೇಳಿ ಬಂದಿತ್ತು. ಪೊಲೀಸರು ಕೂಡ ಆಕೆಗಾಗಿ ಶೋಧ ನಡೆಸಿದ್ದರು. ಮತ್ತೀಗ ಆಕೆ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದು, ಆ ಪ್ರದೇಶದ ನಿವಾಸಿಗಳು ನಿರಾಳರಾಗಿದ್ದಾರೆ.
Vijaya Karnataka Web Arrest


ಕಿಲಾಡಿ ಕಳ್ಳಿಯನ್ನು ರೇಷ್ಮಾ ಪ್ರವೀಣ್ ಎಂದು ಗುರುತಿಸಲಾಗಿದ್ದು, ಮುಂಜಾನೆ ಎದ್ದಾಕೆ ಬೇರೆ ಬೇರೆ ಮನೆಗಳಲ್ಲಿ ಕೆಲಸವನ್ನು ಶುರು ಮಾಡಿಕೊಳ್ಳುತ್ತಿದ್ದಳು. ಕೆಲಸವೆಲ್ಲ ಮುಗಿದ ಮೇಲೆ ಆಕೆ ಕಳ್ಳತನಕ್ಕೆ ಯೋಜನೆ ರೂಪಿಸುತ್ತಿದ್ದಳು. ಮುಖವನ್ನು ಸ್ಕಾರ್ಫ್‌ನಿಂದ ಮುಚ್ಚಿಕೊಂಡು ಮತ್ತು ತನ್ನ ಸಹಚರನ ಬೈಕ್‌ನಲ್ಲಿ ಕುಳಿತು ರಸ್ತೆಗಿಳಿಯುತ್ತಿದ್ದಳು.

ರಾತ್ರಿಯಾಗುತ್ತಿದ್ದಂತೆ ಆಕೆ ಕಳ್ಳತನಕ್ಕಿಳಿಯುತ್ತಿದ್ದಳು. ಆಕೆಯ ಟಾರ್ಗೆಟ್ ಕೂಡ ಮಹಿಳೆಯರೇ ಆಗಿರುತ್ತಿದ್ದರು. ದಿನದ ಹೊತ್ತು ಬೀದಿಯಲ್ಲಿ ಸುತ್ತಾಡಿ ಎಲ್ಲವನ್ನು ಗಮನಿಸಿಕೊಂಡಿರುತ್ತಿದ್ದಳು. ರಾತ್ರಿ ಹೊತ್ತು ಮಹಿಳೆಯರ ಪರ್ಸ್ ಮತ್ತು ಕೊರಳಿನ ಬಂಗಾರದ ಚೈನನ್ನು ಎಗರಿಸುತ್ತಿದ್ದಳು.

ಕೆಲವು ತಿಂಗಳಿಂದ ಇದು ನಡೆದೇ ಇತ್ತು. ಆದರೆ ಆಕೆ ಕೆಲಸ ಮಾಡುತ್ತಿದ್ದ ಮನೆ ಮಾಲೀಕರಿಗೆ ಬಿಡಿ, ಆಕೆಯ ಮನೆಯವರಿಗೆ ಕೂಡ ರೇಷ್ಮಾಳ ಇನ್ನೊಂದು ಮುಖದ ಪರಿಚಯವಿರಲಿಲ್ಲ.

ಸೋಮವಾರ ಪೊಲೀಸರು ಆಕೆಯ ಪರದೆಯನ್ನು ಕಳಚಿ ಬಿಟ್ಟರು. ವ್ಯಕ್ತಿಯೊಬ್ಬನನ್ನು ಲೂಟಿ ಮಾಡಲು ಯತ್ನಿಸುತ್ತಿದ್ದ ಆಕೆಯನ್ನು ಮತ್ತು ಸಹಚರ ಗುಡ್ಡುವನ್ನು ಬಂಧಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ