ಆ್ಯಪ್ನಗರ

ರಾಮ ಮಂದಿರಕ್ಕೆ ಬೆಳ್ಳಿ ಇಟ್ಟಿಗೆ ದೇಣಿಗೆ ಸ್ವೀಕಾರ ತಾತ್ಕಾಲಿಕ ಸ್ಥಗಿತ, ಕಾರಣವೇನು?

'ದೇಶಾದ್ಯಂತ ಮಂದಿರಕ್ಕೆ ದೇಣಿಗೆ ಸಂಗ್ರಹ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ. ಈಗಾಗಲೇ ದಾನಿಗಳಿಂದ 400 ಕೆ.ಜಿ.ಯಷ್ಟು ಬೆಳ್ಳಿ ಇಟ್ಟಿಗೆಗಳು ಬಂದಿದ್ದು, ಅವುಗಳನ್ನು ಟ್ರಸ್ಟ್‌ ಖಾತೆಗಳನ್ನು ಹೊಂದಿರುವ ಬ್ಯಾಂಕ್‌ಗಳ ಲಾಕರ್‌ಗಳಲ್ಲಿ ಭದ್ರವಾಗಿರಿಸಲಾಗಿದೆ. ಇದೇ ವೇಗದಲ್ಲಿಇನ್ನಷ್ಟು ಬೆಳ್ಳಿ ಇಟ್ಟಿಗೆಗಳು ಬಂದಲ್ಲಿ, ಅವುಗಳ ಸುರಕ್ಷತೆ ವಿಚಾರದಲ್ಲಿಸಮಸ್ಯೆ ತಲೆತೋರಲಿದೆ ಎಂದು ಟ್ರಸ್ಟ್‌ ಸದಸ್ಯ ಅನಿಲ್‌ ಮಿಶ್ರಾ ಮನವಿ ಮಾಡಿದ್ದಾರೆ.

Vijaya Karnataka Web 18 Feb 2021, 6:48 am
ಹೊಸದಿಲ್ಲಿ: ಭಕ್ತರು ನೀಡಿರುವ ಬೆಳ್ಳಿ ಇಟ್ಟಿಗೆಗಳನ್ನು ಇಟ್ಟುಕೊಳ್ಳಲು ಬ್ಯಾಂಕ್‌ ಲಾಕರ್‌ಗಳೆಲ್ಲವೂ ಭರ್ತಿಯಾಗಿರುವುದರಿಂದ ಸದ್ಯಕ್ಕೆ ಯಾರೂ ಬೆಳ್ಳಿ ಇಟ್ಟಿಗೆಗಳನ್ನು ದೇಣಿಗೆಯಾಗಿ ನೀಡಬಾರದು ಎಂದು ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ ದಾನಿಗಳಲ್ಲಿ ಮನವಿ ಮಾಡಿಕೊಂಡಿದೆ.
Vijaya Karnataka Web Ram Mandir construction in Ayodhya
Representative Image.


''ದೇಶಾದ್ಯಂತ ಮಂದಿರಕ್ಕೆ ದೇಣಿಗೆ ಸಂಗ್ರಹ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ. ಈಗಾಗಲೇ ದಾನಿಗಳಿಂದ 400 ಕೆ.ಜಿ.ಯಷ್ಟು ಬೆಳ್ಳಿ ಇಟ್ಟಿಗೆಗಳು ಬಂದಿದ್ದು, ಅವುಗಳನ್ನು ಟ್ರಸ್ಟ್‌ ಖಾತೆಗಳನ್ನು ಹೊಂದಿರುವ ಬ್ಯಾಂಕ್‌ಗಳ ಲಾಕರ್‌ಗಳಲ್ಲಿ ಭದ್ರವಾಗಿರಿಸಲಾಗಿದೆ. ಇದೇ ವೇಗದಲ್ಲಿಇನ್ನಷ್ಟು ಬೆಳ್ಳಿ ಇಟ್ಟಿಗೆಗಳು ಬಂದಲ್ಲಿ, ಅವುಗಳ ಸುರಕ್ಷತೆ ವಿಚಾರದಲ್ಲಿಸಮಸ್ಯೆ ತಲೆತೋರಲಿದೆ.

ಹೀಗಾಗಿ ಬೆಳ್ಳಿ ಇಟ್ಟಿಗೆಗಳನ್ನು ದೇಣಿಗೆಯಾಗಿ ನೀಡಬೇಡಿ,'' ಎಂದು ಟ್ರಸ್ಟ್‌ ಸದಸ್ಯ ಅನಿಲ್‌ ಮಿಶ್ರಾ ಮನವಿ ಮಾಡಿದ್ದಾರೆ. ''ರಾಮ ಮಂದಿರ ನಿರ್ಮಾಣ ವಿಚಾರದಲ್ಲಿ ಜನರ ಭಾವನೆಗಳು ನಮಗೆ ಅರ್ಥವಾಗುತ್ತವೆ. ಇದುವರೆಗೂ 1,600 ಕೋಟಿ ರೂ. ನಗದು ದೇಣಿಗೆ ಬಂದಿದೆ. ಬೆಳ್ಳಿ ಇಟ್ಟಿಗೆಗಳ ಅಗತ್ಯ ಬಿದ್ದಲ್ಲಿ ನಾವೇ ಮನವಿ ಮಾಡುತ್ತೇವೆ, ಆಗ ದೇಣಿಗೆ ನೀಡಿ,'' ಎಂದು ಅವರು ಕೋರಿದ್ದಾರೆ.

ದೇಶದ 'ಮ್ಯಾಪಿಂಗ್‌ ನೀತಿ'ಯಲ್ಲಿ ಬದಲಾವಣೆ, ಈಗಿನ ವ್ಯವಸ್ಥೆ ಹೇಗಿತ್ತು?

ದೇಶಾದ್ಯಂತ ದೇಣಿಗೆ ಸಂಗ್ರಹ ಅಭಿಯಾನದಲ್ಲಿ 1.50 ಲಕ್ಷಕ್ಕೂ ಅಧಿಕ ಗುಂಪುಗಳು ಸಕ್ರಿಯವಾಗಿವೆ. ಮುಂದಿನ 39 ತಿಂಗಳಲ್ಲಿ ಮಂದಿರ ನಿರ್ಮಿಸುವ ಗುರಿ ಇರಿಸಿಕೊಳ್ಳಲಾಗಿದೆ. ಜನರು ಕೂಡ ಭಾರೀ ರೀತಿಯಲ್ಲಿ ದೇಣಿಗೆ ನೀಡುತ್ತಿಉದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ