ಆ್ಯಪ್ನಗರ

ನಿರ್ಮಲಾ ವಿರುದ್ಧದ ಹೇಳಿಕೆ ಸಮರ್ಥಿಸಿಕೊಂಡ ರಾಹುಲ್‌

ಪ್ರಧಾನಿಯವರನ್ನು ಟೀಕಿಸುವ ಭರದಲ್ಲಿ ಲಿಂಗ ಭೇದಭಾವ ಮಾಡಿದಂತಾಗಲಿಲ್ಲವೇ ಎಂದು ಪ್ರಶ್ನಿಸಿದಾಗ, ''ನಿಮ್ಮ ಲಿಂಗ ತಾರತಮ್ಯ ಧೋರಣೆಯನ್ನು ನನ್ನ ಮೇಲೆ ಹೇರಬೇಡಿ. ರಕ್ಷಣಾ ಸಚಿವರ ಬದಲಾಗಿ ಪ್ರಧಾನಿಯವರೇ ಉತ್ತರ ನೀಡಬೇಕಿತ್ತು. ಆದರೆ ಅವರಿಗೆ ಆ ಎದೆಗಾರಿಕೆ ಇಲ್ಲ,'' ಎಂದು ರಾಹುಲ್‌ ಗಾಂಧಿ ಹೇಳಿದರು.

Vijaya Karnataka 14 Jan 2019, 5:00 am
ದುಬೈ: ರಫೇಲ್‌ ಹಗರಣಕ್ಕೆ ಸಂಬಂಧಿಸಿ ಪ್ರಧಾನಿ ನರೇಂದ್ರ ಮೋದಿ ಮತ್ತು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ವಿರುದ್ಧ ಮಾಡಿರುವ ಆರೋಪಕ್ಕೆ ಈಗಲೂ ಬದ್ಧ ಎಂದಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು, ''ಒಬ್ಬ ಪುರುಷ ರಕ್ಷಣಾ ಸಚಿವರಾಗಿದ್ದರೂ ಇದೇ ಟೀಕೆ ಮಾಡುತ್ತಿದ್ದೆ,'' ಎಂದು ಸಮರ್ಥಿಸಿಕೊಂಡಿದ್ದಾರೆ.
Vijaya Karnataka Web raaga


ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ''ರಫೇಲ್‌ ಒಪ್ಪಂದದ ಕುರಿತು ನಾವು ಎತ್ತಿದ ಸಂದೇಹಗಳಿಗೆ ಸಂಸತ್ತಿನಲ್ಲಿ ಖುದ್ದಾಗಿ ಉತ್ತರ ನೀಡುವ ಬದಲಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಪಲಾಯನ ವಾದ ಮಾಡಿದ್ದಾರೆ. ಪ್ರಧಾನಿ ಅವರು ಅನಿಲ್‌ ಅಂಬಾನಿ ಸಂಸ್ಥೆಗೆ 30,000 ಕೋಟಿ ರೂ. ಮೊತ್ತದ ಗುತ್ತಿಗೆ ಕೊಡಿಸಿದ್ದಾರೆ ಎಂಬುದು ನನ್ನ ಆರೋಪವಾಗಿತ್ತು. ಲೋಕಸಭೆಯಲ್ಲಿ ಸ್ವತಃ ಉತ್ತರ ನೀಡುವ ಬದಲು ಪ್ರಧಾನಿ ಬೇರೊಬ್ಬ ವ್ಯಕ್ತಿಯನ್ನು ಕಳಿಸಿದರು ಮತ್ತು ಆ ವ್ಯಕ್ತಿ ಮಹಿಳೆಯಾಗಿದ್ದರು. ಒಂದೊಮ್ಮೆ ಆ ವ್ಯಕ್ತಿ ಪುರುಷನಾಗಿದ್ದರೂ ನಾನು ಅದೇ ರೀತಿಯ ಟೀಕೆ ಮಾಡುತ್ತಿದೆ,'' ಎಂದು ಹೇಳಿದರು.

ಪ್ರಧಾನಿಯವರನ್ನು ಟೀಕಿಸುವ ಭರದಲ್ಲಿ ಲಿಂಗ ಭೇದಭಾವ ಮಾಡಿದಂತಾಗಲಿಲ್ಲವೇ ಎಂದು ಪ್ರಶ್ನಿಸಿದಾಗ, ''ನಿಮ್ಮ ಲಿಂಗ ತಾರತಮ್ಯ ಧೋರಣೆಯನ್ನು ನನ್ನ ಮೇಲೆ ಹೇರಬೇಡಿ. ರಕ್ಷಣಾ ಸಚಿವರ ಬದಲಾಗಿ ಪ್ರಧಾನಿಯವರೇ ಉತ್ತರ ನೀಡಬೇಕಿತ್ತು. ಆದರೆ ಅವರಿಗೆ ಆ ಎದೆಗಾರಿಕೆ ಇಲ್ಲ,'' ಎಂದು ರಾಹುಲ್‌ ಗಾಂಧಿ ಹೇಳಿದರು.

ಮೂರು ದಿನಗಳ ದುಬೈ ಪ್ರವಾಸದಲ್ಲಿ ರಾಹುಲ್‌ ಗಾಂಧಿ ಅವರು ತಾವು ಭಾಗವಹಿಸಿದ ಪ್ರತಿ ಕಾರ್ಯಕ್ರಮದಲ್ಲಿಯೂ ಪ್ರಧಾನಿ ಹಾಗೂ ಬಿಜೆಪಿ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.

.......

ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ವಿದೇಶಿ ನೆಲಗಳಲ್ಲಿ ನಿಂತು ಮಾತನಾಡುವಾಗ ದೇಶದ ಘನತೆಯನ್ನು ಮರೆಯುತ್ತಿದ್ದಾರೆ.

- ಶಹನವಾಜ್‌ ಹುಸೇನ್‌, ಬಿಜೆಪಿ ವಕ್ತಾರ

.....

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ