ಆ್ಯಪ್ನಗರ

ಬಂಗಾಳವನ್ನು ಗುಜರಾತ್ ಮಾಡಬೇಡಿ: ಬಿಜೆಪಿಗೆ ಮಮತಾ ಎಚ್ಚರಿಕೆ

ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯ ವದಂತಿ ಹರಡಿರುವ ನಡುವೆಯೇ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ''ಬಂಗಾಳವನ್ನು ಮತ್ತೊಂದು ಗುಜರಾತ್‌ ಆಗಿ ಪರಿವರ್ತಿಸುವ ಸಂಚು ನಡೆದಿದೆ. ಇದಕ್ಕೆ ಅವಕಾಶ ನೀಡುವುದಿಲ್ಲ" ಎಂದು ಹೇಳಿದ್ದಾರೆ.

PTI 12 Jun 2019, 9:15 am
ಕೋಲ್ಕೊತಾ: ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯ ವದಂತಿ ಹರಡಿರುವ ನಡುವೆಯೇ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ''ಬಂಗಾಳವನ್ನು ಮತ್ತೊಂದು ಗುಜರಾತ್‌ ಆಗಿ ಪರಿವರ್ತಿಸುವ ಸಂಚು ನಡೆದಿದೆ. ವ್ಯವಸ್ಥಿತ ರೀತಿಯಲ್ಲಿ ಹಿಂಸಾಚಾರ ಹುಟ್ಟು ಹಾಕಲಾಗುತ್ತಿದೆ. ಅದಕ್ಕೆ ಅವಕಾಶ ನೀಡುವುದಿಲ್ಲ,'' ಎಂದು ಗುಡುಗಿದ್ದಾರೆ.
Vijaya Karnataka Web Kolkata: West Bengal Chief Minister Mamata Banerjee addresses during the inaugur...


ಬಿಜೆಪಿ ರಾಯಲಿ ವೇಳೆ ಧ್ವಂಸಗೊಂಡಿದ್ದ 19ನೇ ಶತಮಾನದ ಕ್ರಾಂತಿಕಾರಿ ಚಿಂತಕ ಈಶ್ವರ್‌ ಚಂದ್ರ ವಿದ್ಯಾಸಾಗರ್‌ ಅವರ ಪುತ್ಥಳಿಯನ್ನು ಅದು ಇದ್ದ ಜಾಗದಲ್ಲಿಯೇ ಮಂಗಳವಾರ ಮರು ಪ್ರತಿಷ್ಠಾಪನೆ ಮಾಡಿ ಮಾತನಾಡಿದ ಅವರು, ''ಬಂಗಾಳದವು ಆಟದ ಗೊಂಬೆಯಲ್ಲ. ಯಾರದರೂ ಇಲ್ಲಿ ಆಟವಾಡಲು ಯತ್ನಿಸಿದರೆ ಸುಮ್ಮನೆ ಬಿಡಲ್ಲ,'' ಎಂದು ಬಿಜೆಪಿಗೆ ನೇರ ಎಚ್ಚರಿಕೆ ನೀಡಿದರು. ಲೋಕಸಭೆ ಚುನಾವಣೆ ನಂತರ ರಾಜ್ಯದಲ್ಲಿ ಸಂಭವಿಸಿದ ರಾಜಕೀಯ ಘರ್ಷಣೆಗಳಲ್ಲಿ ಹತ್ತು ಮಂದಿ ಸತ್ತಿದ್ದಾರೆ. ಅದರಲ್ಲಿ ಎಂಟು ಮಂದಿ ಟಿಎಂಸಿ ಕಾರ್ಯಕರ್ತರು. ಉಳಿದ ಇಬ್ಬರು ಬಿಜೆಪಿ ಬೆಂಬಲಿಗರು ಎಂದು ಮಮತಾ ಹೇಳಿದರು.

ಇನ್ನೂ ಇಬ್ಬರ ಬಲಿ: ಏತನ್ಮಧ್ಯೆ, ದಕ್ಷಿಣ 24 ಪರಗಣ ಜಿಲ್ಲೆಯ ಕಂಕಿನರಾ ಪ್ರದೇಶದ ಗ್ರಾಮವೊಂದರ ಮನೆ ಮೇಲೆ ಸೋಮವಾರ ರಾತ್ರಿ ಬಾಂಬ್‌ ದಾಳಿ ನಡೆಸಿದ ದುಷ್ಕರ್ಮಿಗಳು ಇಬ್ಬರನ್ನು ಕೊಂದು ಹಾಕಿದ್ದಾರೆ. ಮೃತರನ್ನು ಮೊಹಮ್ಮದ್‌ ಮುಖ್ತರ್‌ ಮತ್ತು ಮೊಹಮ್ಮದ್‌ ಹಲೀಮ್‌ ಎಂದು ಗುರುತಿಸಲಾಗಿದೆ. ಇವರಿಬ್ಬರೂ ತಮ್ಮ ಪಕ್ಷದ ಕಾರ್ಯಕರ್ತರು ಎಂದು ಟಿಎಂಸಿ ಮುಖಂಡರು ಹೇಳಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ