ಲಖನೌ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿ ಮಣಿಸಲು ಬಹುಜನ ಸಮಾಜ ಪಾರ್ಟಿ ಜತೆಗಿನ ಮೈತ್ರಿಯೊಂದೇ ಸಾಕು ಎಂದು ಅಭಿಪ್ರಾಯಪಟ್ಟಿರುವ ಸಮಾಜವಾದಿ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಕಿರಣ್ಮಯ್ ನಂದಾ ಅವರು, ಕಾಂಗ್ರೆಸ್ನಂತಹ ಬಲಹೀನ ಶಕ್ತಿಗಳ ಜತೆ ಹೊಂದಾಣಿಕೆ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ''ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಬಲಹೀನ ಪಕ್ಷ. ಹೀಗಾಗಿ ಬಿಎಸ್ಪಿ-ಎಸ್ಪಿ ಮೈತ್ರಿಕೂಟದಲ್ಲಿ ಕಾಂಗ್ರೆಸ್ ಅನ್ನು ಸೇರ್ಪಡೆ ಮಾಡಿಕೊಳ್ಳುವ ಅಥವಾ ಹೊರಗಿಡುವ ಮಾತೇ ಅಪ್ರಸ್ತುತ,'' ಎಂದು ಅವರು ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ''ಬಿಎಸ್ಪಿ-ಎಸ್ಪಿ ಅಭ್ಯರ್ಥಿಗಳ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದರೂ ಮತ ಗಳಿಕೆಯಲ್ಲಿ ವ್ಯತ್ಯಾಸವಾಗದು ಎಂಬುದು ಹಿಂದಿನ ಅನುಭವಗಳಿಂದ ನಮಗೆ ಅರ್ಥವಾಗಿದೆ. ಅಷ್ಟಕ್ಕೂ ಕಾಂಗ್ರೆಸ್ ತನಗೆ ಅಗತ್ಯವಿದ್ದಾಗ ಬೇರೆ ಪಕ್ಷಗಳನ್ನು ಓಲೈಸಲು ಮುಂದಾಗುತ್ತದೆ, ಲಾಭವಾದ ನಂತರ ಇತರ ಪಕ್ಷಗಳನ್ನು ಕಡೆಗಣಿಸುತ್ತದೆ. ಮಧ್ಯಪ್ರದೇಶ ಮತ್ತು ರಾಜಸ್ಥಾನ ವಿಧಾನಸಭೆ ಚುನಾವಣೆ ಬಳಿಕ ಅದು ಮತ್ತೆ ಸಾಬೀತಾಗಿದೆ,'' ಎಂದೂ ನಂದಾ ಟೀಕಿಸಿದ್ದಾರೆ.
ಕಾಂಗ್ರೆಸ್ನಂತಹ ಬಲಹೀನ ಪಕ್ಷದ ಮೈತ್ರಿ ಅನಗತ್ಯ
ಬಿಎಸ್ಪಿ-ಎಸ್ಪಿ ಅಭ್ಯರ್ಥಿಗಳ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದರೂ ಮತ ಗಳಿಕೆಯಲ್ಲಿ ವ್ಯತ್ಯಾಸವಾಗದು ಎಂಬುದು ಹಿಂದಿನ ಅನುಭವಗಳಿಂದ ನಮಗೆ ಅರ್ಥವಾಗಿದೆ. ಅಷ್ಟಕ್ಕೂ ಕಾಂಗ್ರೆಸ್ ತನಗೆ ಅಗತ್ಯವಿದ್ದಾಗ ಬೇರೆ ಪಕ್ಷಗಳನ್ನು ಓಲೈಸಲು ಮುಂದಾಗುತ್ತದೆ, ಲಾಭವಾದ ನಂತರ ಇತರ ಪಕ್ಷಗಳನ್ನು ಕಡೆಗಣಿಸುತ್ತದೆ. ಮಧ್ಯಪ್ರದೇಶ ಮತ್ತು ರಾಜಸ್ಥಾನ ವಿಧಾನಸಭೆ ಚುನಾವಣೆ ಬಳಿಕ ಅದು ಮತ್ತೆ ಸಾಬೀತಾಗಿದೆ ಎಂದೂ ಸಮಾಜವಾದಿ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಕಿರಣ್ಮಯ್ ನಂದಾ ಟೀಕಿಸಿದ್ದಾರೆ.
Vijaya Karnataka 7 Jan 2019, 5:00 am