ಆ್ಯಪ್ನಗರ

ಡಬಲ್‌ ಮ್ಯೂಟೆಂಟ್‌ನಿಂದ ಉಲ್ಬಣಿಸಿದ ಕೊರೊನಾ ಸೋಂಕು

​​ಲಸಿಕೆ ಬಂದ ಬಳಿಕ ಜನರಲ್ಲಿ ಕೊರೊನಾ ಬಗ್ಗೆ ಅಸಡ್ಡೆ ಹೆಚ್ಚಿದೆ. ಸಾಮಾಜಿಕ ಅಂತರ ಪಾಲಿಸದಿರುವುದು, ಮಾಸ್ಕ್‌ ಧರಿಸದೇ ಇರುವುದು, ಕೋವಿಡ್‌ ಸುರಕ್ಷಾ ನಿಯಮಗಳನ್ನು ಕಡೆಗಣಿಸುತ್ತಿರುವುದು ಸೋಂಕು ಹೆಚ್ಚಲು ಮತ್ತೊಂದು ಕಾರಣವಾಗಿದೆ.

Vijaya Karnataka Web 14 Apr 2021, 11:18 pm
ಹೊಸದಿಲ್ಲಿ: ಬಿಗಿ ಕ್ರಮಗಳ ನಡುವೆಯೂ ದೇಶದಲ್ಲಿಕೊರೊನಾ ಸೋಂಕು ತ್ವರಿತಗತಿಯಲ್ಲಿ ಹರಡುತ್ತಿರುವುದಕ್ಕೆ ವಿಜ್ಞಾನಿಗಳ ತಂಡ ಪ್ರಮುಖವಾಗಿ ನಾಲ್ಕು ಕಾರಣಗಳನ್ನು ಗುರುತಿಸಿದೆ.
Vijaya Karnataka Web ಕೊರೊನಾ ವೈರಸ್‌
ಕೊರೊನಾ ವೈರಸ್‌


ಕೊರೊನಾ ಎರಡನೇ ಅಲೆ ವೇಳೆ ದಕ್ಷಿಣ ಆಫ್ರಿಕಾ, ಬ್ರಿಟನ್‌, ಬ್ರೆಜಿಲ್‌ನಲ್ಲಿ ಕಂಡುಬಂದ ರೂಪಾಂತರಿ ಕೋವಿಡ್‌-19 ವೈರಸ್‌ ನಮ್ಮಲ್ಲಿ ಕಂಡುಬಂದಿರುವುದರ ಜತೆಗೆ ಭಾರತದ ಮಾದರಿಯ ಹೊಸ ರೂಪಾಂತರಿ ವೈರಸ್‌ ಮಹಾರಾಷ್ಟ್ರದಲ್ಲಿ ಕಾಣಿಸಿಕೊಂಡಿದೆ.

ಅಲ್ಲಿನ ದತ್ತಾಂಶಗಳನ್ನು ವಿಶ್ಲೇಷಣೆಗೊಳಪಡಿಸಿದ ಸಂದರ್ಭದಲ್ಲಿ ಶೇ. 20%ರಷ್ಟು ಪ್ರಕರಣಗಳಲ್ಲಿ ಇದು ಕಂಡುಬಂದಿದ್ದು, ತ್ವರಿತಗತಿಯಲ್ಲಿ ಪ್ರಸರಣಗೊಳ್ಳುವ ಗುಣ ಹೊಂದಿದೆ ಎನ್ನುತ್ತಾರೆ ವೈರಾಲಜಿಸ್ಟ್‌ ಶಾಹೀದ್‌ ಜಮೀಲ್‌. ಮಾರ್ಚ್ ಅಂತ್ಯದಲ್ಲಿ ಮಹಾರಾಷ್ಟ್ರ, ದಿಲ್ಲಿ, ಪಂಜಾಬ್‌ನ ಲ್ಯಾಬ್‌ಗಳಿಂದ ಸಂಗ್ರಹಿಸಿದ ಮಾದರಿಗಳಲ್ಲಿ ಹೊಸ ರೂಪಾಂತರಿ ವೈರಾಣುವನ್ನು ಗುರುತಿಸಲಾಗಿತ್ತು ಎಂದು ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ (ಎನ್‌ಸಿಡಿಸಿ) ಹೇಳಿತ್ತು.

ಈಗ ದೇಶದ 10 ಲ್ಯಾಬ್‌ಗಳಿಂದ ಸಂಗ್ರಹಿಸಿದ ಮಾದರಿಗಳಲ್ಲಿ'ಡಬಲ್‌ ಮ್ಯೂಟೆಂಟ್‌' ಎಂಬ ರೂಪಾಂತರಿ ಕೊರೊನಾ ವೈರಾಣುವನ್ನು ಪತ್ತೆ ಮಾಡಲಾಗಿದ್ದು, ಇದರಲ್ಲಿಈ ಹಿಂದೆ ಬ್ರಿಟನ್‌ ಹಾಗೂ ಅಮೆರಿಕದಲ್ಲಿ ಪತ್ತೆಯಾಗಿದ್ದ ಬಹು ವೇಗವಾಗಿ ಹರಡುವ ಗುಣ ಹೊಂದಿದ್ದ ಹೊಸ ವೈರಾಣುಗಳ ಸಮ್ಮಿಶ್ರಣವಿದೆ. ಹೀಗಾಗಿಯೇ ಇದಕ್ಕೆ 'ಡಬಲ್‌ ಮ್ಯೂಟೆಂಟ್‌' ಎಂದು ಕರೆಯಲಾಗುತ್ತಿದೆ. ಇದು ದೇಶದಲ್ಲಿ ಸೋಂಕು ತ್ವರಿತಗತಿಯಲ್ಲಿ ಹರಡಲು ಒಂದು ಕಾರಣವಾಗಿದೆ ಎಂದು ವಿಶ್ಲೇಷಿಸಲಾಗಿದೆ.

6 ತಿಂಗಳ ಬಳಿ ಶಕ್ತಿ ಇಳಿಕೆ

ಈಗಾಗಲೇ ಕೊರೊನಾದಿಂದ ಚೇತರಿಕೆ ಕಂಡವರಲ್ಲಿ ಆರು ತಿಂಗಳ ಬಳಿಕ ಮತ್ತೆ ರೋಗ ನಿರೋಧಕ ಶಕ್ತಿ ಕುಗ್ಗುತ್ತಿರುವುದು ಕಂಡುಬಂದಿದೆ. ಇಂತಹವರು ಮತ್ತೆ ಸೋಂಕಿನ ಅಪಾಯಕ್ಕೆ ತೆರೆದುಕೊಂಡಾಗ, ಅವರು ಸೋಂಕು ಪೀಡಿತರಾಗಿ ಆಸ್ಪತ್ರೆ ಸೇರುತ್ತಿರುವುದರಿಂದಲೂ ಪ್ರಕರಣಗಳ ಸಂಖ್ಯೆ ಏರಿಕೆ ಕಾಣುತ್ತಿದೆ. ಶೇ. 20ರಿಂದ 30ರಷ್ಟು ಪ್ರಕರಣಗಳಲ್ಲಿ ರೋಗ ನಿರೋಧಕ ಶಕ್ತಿ ಮತ್ತೆ ಕುಂದಿದೆ ಎಂದು ತಜ್ಞರು ಹೇಳಿದ್ದಾರೆ.

ಕೊರೊನಾ ಬಗ್ಗೆ ಅಸಡ್ಡೆ

ಲಸಿಕೆ ಬಂದ ಬಳಿಕ ಜನರಲ್ಲಿ ಕೊರೊನಾ ಬಗ್ಗೆ ಅಸಡ್ಡೆ ಹೆಚ್ಚಿದೆ. ಸಾಮಾಜಿಕ ಅಂತರ ಪಾಲಿಸದಿರುವುದು, ಮಾಸ್ಕ್‌ ಧರಿಸದೇ ಇರುವುದು, ಕೋವಿಡ್‌ ಸುರಕ್ಷಾ ನಿಯಮಗಳನ್ನು ಕಡೆಗಣಿಸುತ್ತಿರುವುದು ಸೋಂಕು ಹೆಚ್ಚಲು ಮತ್ತೊಂದು ಕಾರಣವಾಗಿದೆ.

ಲಸಿಕೆ ಅಭಿಯಾನ ಕುಂಠಿತ

ಕೊರೊನಾ ನಿರೋಧಕ ಲಸಿಕೆ ಅಭಿಯಾನ ನಿರೀಕ್ಷಿತ ಮಟ್ಟದಲ್ಲಿ ಇಲ್ಲ. ಲಸಿಕೆ ಬಗ್ಗೆ ಇರುವ ಭಯವನ್ನು ಸರಕಾರ ನಿವಾರಿಸಲು ಪ್ರಯತ್ನಿಸಿದ್ದರೂ ಸ್ವಯಂ ಪ್ರೇರಿತವಾಗಿ ಜನರು ಲಸಿಕೆ ಪಡೆಯಲು ಮೊದ ಮೊದಲು ಹಿಂದೇಟು ಹಾಕಿದರು. ಈಗ ಮುಂದೆ ಬರುತ್ತಿದ್ದರೂ ಅಭಿಯಾನ ಇನ್ನೂ ದೊಡ್ಡ ಪ್ರಮಾಣದಲ್ಲಿ ಚುರುಕು ಪಡೆದುಕೊಂಡಿಲ್ಲ. ಇದೂ ಸಹ ಸೋಂಕು ಏರಿಕೆಯಲ್ಲಿ ಒಂದು ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ