ಡೆಹ್ರಾಡೂನ್: ಉತ್ತರಾಖಂಡದಲ್ಲಿ ಹಿಮ ಪ್ರವಾಹದ ಬಳಿಕ ತಪೋವನ ಸುರಂಗದಲ್ಲಿ ಸಿಲುಕಿರುವ 25-35 ಜನರನ್ನು ರಕ್ಷಿಸಲು ಡ್ರೋನ್ ಹಾಗೂ ರಿಮೋಟ್ ಸೆನ್ಸಿಂಗ್ ಸಾಧನಗಳನ್ನು ಬಳಸಲಾಗುತ್ತಿದೆ. ರಕ್ಷಣಾ ತಂಡಗಳು ಬುಧವಾರ ರಕ್ಷಣಾ ಕಾರ್ಯವನ್ನು ಚುರುಕುಗೊಳಿಸಿವೆ. ಇನ್ನೂ 174 ಜನರು ನಾಪತ್ತೆಯಾಗಿದ್ದು, ಅವರೆಲ್ಲರೂ ಬದುಕುಳಿದಿರುವ ಭರವಸೆಯಲ್ಲೇ ಶೋಧ ಕಾರ್ಯಾಚರಣೆಯನ್ನು ಮುಂದುವರಿಸಲಾಗಿದೆ. ಚಮೋಲಿ ಜಿಲ್ಲೆಯ ವಿಪತ್ತು ಪೀಡಿತ ಪ್ರದೇಶಗಳಲ್ಲಿಈವರೆಗೆ ವಿವಿಧ ಸ್ಥಳಗಳಲ್ಲಿ 32 ಮೃತದೇಹಗಳು ಪತ್ತೆಯಾಗಿವೆ. ಈ ಪೈಕಿ ಎಂಟರ ಗುರುತು ಪತ್ತೆಯಾಗಿದೆ ಎಂದು ಡೆಹ್ರಾಡೂನ್ನ ರಾಜ್ಯ ತುರ್ತು ನಿಯಂತ್ರಣ ಕೇಂದ್ರ ತಿಳಿಸಿದೆ.
ತಪೋವನದಲ್ಲಿನ 1,500 ಮೀಟರ್ ಸುರಂಗದೊಳಗೆ ನೀರು ನುಗ್ಗಿ ಬಂದಾಗ ಕೆಲಸ ಮಾಡುತ್ತಿದ್ದ 25-35 ಜನರು ಸಿಲುಕಿದ್ದು, ಅವರನ್ನು ತಲುಪಲು ಟನ್ಗಳಷ್ಟು ಹೂಳು, ಕೆಸರು ಮತ್ತು ಅವಶೇಷಗಳನ್ನು ಹೊರತೆಗೆಯಬೇಕಿದೆ. ಈ ನಿಟ್ಟಿನಲ್ಲಿ ಪ್ರಯತ್ನಗಳು ಭರದಿಂದ ಸಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಕಿರಣಯುಕ್ತ ಉಪಕರಣದಿಂದ ನೀರ್ಗಲ್ಲು ಸ್ಫೋಟ?
ಚಮೋಲಿ ಜಿಲ್ಲೆಯಲ್ಲಿ ಸಂಭವಿಸಿದ ಹಿಮ ಸುನಾಮಿಯ ಹಿಂದಿನ ನಿಖರ ಕಾರಣಕ್ಕೆ ವಿಜ್ಞಾನಿಗಳ ಜಿಜ್ಞಾಸೆ ನಡುವೆಯೇ, ನಾಪತ್ತೆಯಾಗಿದ್ದ ವಿನಾಶಕಾರಿ ವಿಕಿರಣಯುಕ್ತ ಉಪಕರಣವೇ ಇದಕ್ಕೆ ಕಾರಣವಿದ್ದಿರಬಹುದು ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ.
ಸಿಕ್ಕಿಂನಲ್ಲಿರುವ ಕಾಂಚನಜುಂಗ ನಂತರ ಉತ್ತರಾಖಂಡದ ನಂದಾದೇವಿ ದೇಶದ ಎರಡನೇ ಅತ್ಯಂತ ಎತ್ತರದ ಪರ್ವತವಾಗಿದೆ. 1965ರಲ್ಲಿ ವಿಕಿರಣಯುಕ್ತ ಉಪಕರಣವನ್ನು ಪರ್ವತಕ್ಕೆ ಸಾಗಿಸಲಾಗುತ್ತಿತ್ತು. ಆದರೆ, ಆ ಸಂದರ್ಭದಲ್ಲಿ ಹಿಮ ಬಿರುಗಾಳಿ ಉಂಟಾಗಿ ಉಪಕರಣವನ್ನು ಪರ್ವತದಲ್ಲೇ ಬಿಟ್ಟು ಅಧಿಕಾರಿಗಳು ವಾಪಸ್ ತೆರಳಿದ್ದರು. ಒಂದು ವರ್ಷ ಬಳಿಕ ಮತ್ತೆ ಆ ಸ್ಥಳಕ್ಕೆ ತೆರಳಿದಾಗ ಉಪಕರಣ ಪತ್ತೆಯಾಗಿರಲಿಲ್ಲ. ಸಾಕಷ್ಟು ಬಾರಿ ಶೋಧಿಸಿದರೂ ಸಿಕ್ಕಿರಲಿಲ್ಲ. ಇದೀಗ ಭೀಕರ ಪ್ರವಾಹಕ್ಕೆ ಆ ಉಪಕರಣವೇ ಕಾರಣ ಇರಬಹುದು ಎಂದು ಸ್ಥಳೀಯರು ಹೇಳುತ್ತಿದ್ದಾರೆ.
ಚಮೋಲಿ ಜಿಲ್ಲೆಯ ರೈನಿ ಗ್ರಾಮದಲ್ಲಿ ಭಾನುವಾರ ನಿರ್ಗಲ್ಲು ಸ್ಫೋಟದ ಬಳಿಕ ಪರ್ವತದಿಂದ ಧೂಳು, ಹಿಮದ ಜತೆಗೆ ತೀವ್ರ ಘಾಟಿನ ಗಾಳಿಯೂ ಬೀಸುತ್ತಿತ್ತು. ಅದನ್ನು ಉಸಿರಾಡಲು ಆಗುತ್ತಿರಲಿಲ್ಲ. ಬರೀ ಹಿಮ ಹಾಗೂ ಧೂಳಿನಿಂದ ಅಂತಹ ವಾಸನೆ ಬರುವುದಿಲ್ಲ. ಹೀಗಾಗಿ ವಿಕಿರಣಯುಕ್ತ ಉಪಕರಣವೇ ಈ ಘಟನೆ ಹಿಂದಿನ ಕಾರಣವಿದ್ದಿರಬಹುದು ಎಂದು ತಿಳಿಸಿದ್ದಾರೆ.
ಇಸ್ರೊದಿಂದ ಉಪಗ್ರಹ ಚಿತ್ರ ಬಿಡುಗಡೆ
ಹಿಮ ಪ್ರವಾಹದಿಂದ ಚಮೋಲಿ ಜಿಲ್ಲೆಯಲ್ಲಿ ಉಂಟಾದ ಹಾನಿಯ ಚಿತ್ರಣವನ್ನು ಕಟ್ಟಿಕೊಡುವ ಉಪಗ್ರಹ ಫೋಟೊಗಳನ್ನು ಇಸ್ರೊ ಬಿಡುಗಡೆ ಮಾಡಿದೆ. ಹಿಮ ಪ್ರವಾಹಕ್ಕೆ ಮುನ್ನ ರಿಷಿಗಂಗಾ, ದೋಲಿಗಂಗಾ ಮತ್ತು ಅಲಕಾನಂದ ನದಿ ಪ್ರದೇಶದ ಚಿತ್ರಣ ಹಾಗೂ ಪ್ರವಾಹದ ಬಳಿಕ ಅಲ್ಲಿನ ಚಿತ್ರಣದ ಎರಡು ಫೋಟೊಗಳನ್ನು ಇಸ್ರೊ ಬಿಡುಗಡೆ ಮಾಡಿದ್ದು, ಪ್ರವಾಹದ ಬಳಿಕ ಚಿತ್ರಗಳಲ್ಲಿನದಿ ಪಾತ್ರದಲ್ಲಿ ಅಪಾರ ಮಣ್ಣು-ಕಲ್ಲುಗಳು,ರಾಡಿ ತುಂಬಿರುವುದು ಕಂಡು ಬಂದಿದೆ. ಅಲ್ಲದೆ, ನದಿ ಪಾತ್ರದಲ್ಲಿದ್ದ ಕಟ್ಟಡಗಳು, ವಿದ್ಯುತ್ ಘಟಕಗಳು ಮಾಯವಾಗಿರುವುದನ್ನು ಚಿತ್ರದಲ್ಲಿ ನೋಡಬಹುದು.
ಸಂಬಂಧಿಕರ ಪ್ರತಿಭಟನೆ
ಪ್ರವಾಹದ ವೇಳೆ ನಾಪತ್ತೆಯಾಗಿರುವ ರಿಷಿಗಂಗಾ ವಿದ್ಯುತ್ ಘಟಕದ 40 ಕಾರ್ಮಿಕರ ಸಂಬಂಧಿಕರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಬುಧವಾರ ರಕ್ಷಣಾ ಕಾರ್ಯ ನಡೆಯುತ್ತಿರುವ ಸ್ಥಳದಲ್ಲಿಪ್ರತಿಭಟನೆ ನಡೆಸಿದರು. ಪ್ರವಾಹ ಬಂದ ಕೂಡಲೇ ಸೂಕ್ತ ರೀತಿಯಲ್ಲಿ ರಕ್ಷಣಾ ಕಾರ್ಯ ನಡೆಸಿಲ್ಲವೆಂದು ಆರೋಪಿಸಿ ಅಧಿಕಾರಿಗಳೊಂದಿಗೆ ವಾಗ್ವಾದಕ್ಕಿಳಿದರು. ಇದರಿಂದ ಸುಮಾರು 2 ಗಂಟೆಗೂ ಹೆಚ್ಚುಕಾಲ ರಕ್ಷಣಾ ಕಾರ್ಯಾಚರಣೆಗೆ ಅಡಚಣೆಯಾಯಿತು.
ತಪೋವನದಲ್ಲಿನ 1,500 ಮೀಟರ್ ಸುರಂಗದೊಳಗೆ ನೀರು ನುಗ್ಗಿ ಬಂದಾಗ ಕೆಲಸ ಮಾಡುತ್ತಿದ್ದ 25-35 ಜನರು ಸಿಲುಕಿದ್ದು, ಅವರನ್ನು ತಲುಪಲು ಟನ್ಗಳಷ್ಟು ಹೂಳು, ಕೆಸರು ಮತ್ತು ಅವಶೇಷಗಳನ್ನು ಹೊರತೆಗೆಯಬೇಕಿದೆ. ಈ ನಿಟ್ಟಿನಲ್ಲಿ ಪ್ರಯತ್ನಗಳು ಭರದಿಂದ ಸಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಕಿರಣಯುಕ್ತ ಉಪಕರಣದಿಂದ ನೀರ್ಗಲ್ಲು ಸ್ಫೋಟ?
ಚಮೋಲಿ ಜಿಲ್ಲೆಯಲ್ಲಿ ಸಂಭವಿಸಿದ ಹಿಮ ಸುನಾಮಿಯ ಹಿಂದಿನ ನಿಖರ ಕಾರಣಕ್ಕೆ ವಿಜ್ಞಾನಿಗಳ ಜಿಜ್ಞಾಸೆ ನಡುವೆಯೇ, ನಾಪತ್ತೆಯಾಗಿದ್ದ ವಿನಾಶಕಾರಿ ವಿಕಿರಣಯುಕ್ತ ಉಪಕರಣವೇ ಇದಕ್ಕೆ ಕಾರಣವಿದ್ದಿರಬಹುದು ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ.
ಸಿಕ್ಕಿಂನಲ್ಲಿರುವ ಕಾಂಚನಜುಂಗ ನಂತರ ಉತ್ತರಾಖಂಡದ ನಂದಾದೇವಿ ದೇಶದ ಎರಡನೇ ಅತ್ಯಂತ ಎತ್ತರದ ಪರ್ವತವಾಗಿದೆ. 1965ರಲ್ಲಿ ವಿಕಿರಣಯುಕ್ತ ಉಪಕರಣವನ್ನು ಪರ್ವತಕ್ಕೆ ಸಾಗಿಸಲಾಗುತ್ತಿತ್ತು. ಆದರೆ, ಆ ಸಂದರ್ಭದಲ್ಲಿ ಹಿಮ ಬಿರುಗಾಳಿ ಉಂಟಾಗಿ ಉಪಕರಣವನ್ನು ಪರ್ವತದಲ್ಲೇ ಬಿಟ್ಟು ಅಧಿಕಾರಿಗಳು ವಾಪಸ್ ತೆರಳಿದ್ದರು. ಒಂದು ವರ್ಷ ಬಳಿಕ ಮತ್ತೆ ಆ ಸ್ಥಳಕ್ಕೆ ತೆರಳಿದಾಗ ಉಪಕರಣ ಪತ್ತೆಯಾಗಿರಲಿಲ್ಲ. ಸಾಕಷ್ಟು ಬಾರಿ ಶೋಧಿಸಿದರೂ ಸಿಕ್ಕಿರಲಿಲ್ಲ. ಇದೀಗ ಭೀಕರ ಪ್ರವಾಹಕ್ಕೆ ಆ ಉಪಕರಣವೇ ಕಾರಣ ಇರಬಹುದು ಎಂದು ಸ್ಥಳೀಯರು ಹೇಳುತ್ತಿದ್ದಾರೆ.
ಚಮೋಲಿ ಜಿಲ್ಲೆಯ ರೈನಿ ಗ್ರಾಮದಲ್ಲಿ ಭಾನುವಾರ ನಿರ್ಗಲ್ಲು ಸ್ಫೋಟದ ಬಳಿಕ ಪರ್ವತದಿಂದ ಧೂಳು, ಹಿಮದ ಜತೆಗೆ ತೀವ್ರ ಘಾಟಿನ ಗಾಳಿಯೂ ಬೀಸುತ್ತಿತ್ತು. ಅದನ್ನು ಉಸಿರಾಡಲು ಆಗುತ್ತಿರಲಿಲ್ಲ. ಬರೀ ಹಿಮ ಹಾಗೂ ಧೂಳಿನಿಂದ ಅಂತಹ ವಾಸನೆ ಬರುವುದಿಲ್ಲ. ಹೀಗಾಗಿ ವಿಕಿರಣಯುಕ್ತ ಉಪಕರಣವೇ ಈ ಘಟನೆ ಹಿಂದಿನ ಕಾರಣವಿದ್ದಿರಬಹುದು ಎಂದು ತಿಳಿಸಿದ್ದಾರೆ.
ಇಸ್ರೊದಿಂದ ಉಪಗ್ರಹ ಚಿತ್ರ ಬಿಡುಗಡೆ
ಹಿಮ ಪ್ರವಾಹದಿಂದ ಚಮೋಲಿ ಜಿಲ್ಲೆಯಲ್ಲಿ ಉಂಟಾದ ಹಾನಿಯ ಚಿತ್ರಣವನ್ನು ಕಟ್ಟಿಕೊಡುವ ಉಪಗ್ರಹ ಫೋಟೊಗಳನ್ನು ಇಸ್ರೊ ಬಿಡುಗಡೆ ಮಾಡಿದೆ. ಹಿಮ ಪ್ರವಾಹಕ್ಕೆ ಮುನ್ನ ರಿಷಿಗಂಗಾ, ದೋಲಿಗಂಗಾ ಮತ್ತು ಅಲಕಾನಂದ ನದಿ ಪ್ರದೇಶದ ಚಿತ್ರಣ ಹಾಗೂ ಪ್ರವಾಹದ ಬಳಿಕ ಅಲ್ಲಿನ ಚಿತ್ರಣದ ಎರಡು ಫೋಟೊಗಳನ್ನು ಇಸ್ರೊ ಬಿಡುಗಡೆ ಮಾಡಿದ್ದು, ಪ್ರವಾಹದ ಬಳಿಕ ಚಿತ್ರಗಳಲ್ಲಿನದಿ ಪಾತ್ರದಲ್ಲಿ ಅಪಾರ ಮಣ್ಣು-ಕಲ್ಲುಗಳು,ರಾಡಿ ತುಂಬಿರುವುದು ಕಂಡು ಬಂದಿದೆ. ಅಲ್ಲದೆ, ನದಿ ಪಾತ್ರದಲ್ಲಿದ್ದ ಕಟ್ಟಡಗಳು, ವಿದ್ಯುತ್ ಘಟಕಗಳು ಮಾಯವಾಗಿರುವುದನ್ನು ಚಿತ್ರದಲ್ಲಿ ನೋಡಬಹುದು.
ಸಂಬಂಧಿಕರ ಪ್ರತಿಭಟನೆ
ಪ್ರವಾಹದ ವೇಳೆ ನಾಪತ್ತೆಯಾಗಿರುವ ರಿಷಿಗಂಗಾ ವಿದ್ಯುತ್ ಘಟಕದ 40 ಕಾರ್ಮಿಕರ ಸಂಬಂಧಿಕರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಬುಧವಾರ ರಕ್ಷಣಾ ಕಾರ್ಯ ನಡೆಯುತ್ತಿರುವ ಸ್ಥಳದಲ್ಲಿಪ್ರತಿಭಟನೆ ನಡೆಸಿದರು. ಪ್ರವಾಹ ಬಂದ ಕೂಡಲೇ ಸೂಕ್ತ ರೀತಿಯಲ್ಲಿ ರಕ್ಷಣಾ ಕಾರ್ಯ ನಡೆಸಿಲ್ಲವೆಂದು ಆರೋಪಿಸಿ ಅಧಿಕಾರಿಗಳೊಂದಿಗೆ ವಾಗ್ವಾದಕ್ಕಿಳಿದರು. ಇದರಿಂದ ಸುಮಾರು 2 ಗಂಟೆಗೂ ಹೆಚ್ಚುಕಾಲ ರಕ್ಷಣಾ ಕಾರ್ಯಾಚರಣೆಗೆ ಅಡಚಣೆಯಾಯಿತು.