ಆ್ಯಪ್ನಗರ

ಪೊಲೀಸರ ಕೈಯಿಂದ ಬ್ರೆಥಲೈಸರ್ ಕಸಿದುಕೊಂಡು ಪರಾರಿಯಾದ ಕುಡುಕ

ಕುಡಿದು ವಾಹನ ಚಲಾಯಿಸುತ್ತಿದ್ದ ವಿದ್ಯಾರ್ಥಿಯೊಬ್ಬ ಪರೀಕ್ಷಿಸಲು ತಡೆದಿದ್ದ ಪೊಲೀಸರ ಕೈಯಲ್ಲಿದ್ದ ಬ್ರೆಥಲೈಸರ್(ಮದ್ಯಪಾನ ಮಾಡಿದ್ದಾರಾ ಅನ್ನೋದನ್ನು ಶ್ವಾಸ ಪರೀಕ್ಷೆ ಮೂಲಕ ಪರೀಕ್ಷಿಸುವ ಸಾಧನ)ನ್ನೇ ಎತ್ತಿಕೊಂಡು ಪರಾರಿಯಾದ ಹಾಸ್ಯಮಯ ಪ್ರಕರಣ ಅಭಿರಾಮಪುರಂನಲ್ಲಿ ನಡೆದಿದೆ.

TIMESOFINDIA.COM 17 Sep 2018, 2:54 pm
ಚೆನ್ನೈ: ಕುಡಿದು ವಾಹನ ಚಲಾಯಿಸುತ್ತಿದ್ದ ವಿದ್ಯಾರ್ಥಿಯೊಬ್ಬ ಪರೀಕ್ಷಿಸಲು ತಡೆದಿದ್ದ ಪೊಲೀಸರ ಕೈಯಲ್ಲಿದ್ದ ಬ್ರೆಥಲೈಸರ್(ಮದ್ಯಪಾನ ಮಾಡಿದ್ದಾರಾ ಅನ್ನೋದನ್ನು ಶ್ವಾಸ ಪರೀಕ್ಷೆ ಮೂಲಕ ಪರೀಕ್ಷಿಸುವ ಸಾಧನ)ನ್ನೇ ಎತ್ತಿಕೊಂಡು ಪರಾರಿಯಾದ ಹಾಸ್ಯಮಯ ಪ್ರಕರಣ ಅಭಿರಾಮಪುರಂನಲ್ಲಿ ನಡೆದಿದೆ.
Vijaya Karnataka Web breathalyzer


ಮುಖ್ಯ ಪೇದೆ ಬಾಲನ್, ಇನ್ಸಪೆಕ್ಟರ್ ಮತ್ತು ಸಬ್ ಇನ್ಸಪೆಕ್ಟರ್ ಗ್ರೀನ್ ವೇ ರೋಡ್ ಜಂಕ್ಷನ್‌ನಲ್ಲಿ ಎಂದಿನಂತೆ ವಾಹನಗಳನ್ನು ತಡೆದು ಚಾಲಕರ ರಕ್ತದಲ್ಲಿ ಆಲ್ಕೋಹಾಲ್ ಕಂಟೆಂಟ್ ಇದೆಯೆ ಎಂಬುದನ್ನು ಪರೀಕ್ಷಿಸುತ್ತಿದ್ದರು. ವಾಹನಗಳನ್ನು ತಡೆಯಲು ಬ್ಯಾರಿಕೇಡ್‌ಗಳನ್ನು ಇಡಲಾಗಿತ್ತು. ರಾತ್ರಿ 9.5ರ ಸುಮಾರಿಗೆ ಕೆಂಪು ವೋಕ್ಸ್ವ್ಯಾಗನ್ (TN-07 CC 5792) ಕಾರೊಂದು ಅಲ್ಲಿಗೆ ಆಗಮಿಸಿತು. ಮದ್ಯ ಸೇವಿಸಿದ್ದಾನೆಯೆ ಎಂದು ಪರೀಕ್ಷಿಸಲು ಕಾರಿನ ಕಿಟಕಿ ಗಾಜನ್ನು ಕೆಳಗಿಳಿಸುವಂತೆ ಬಾಲನ್ ಚಾಲಕನಿಗೆ ಸೂಚಿಸಿದರು. ಕಿಟಕಿ ಸರಿಸಿದ ವೇಲಚೇರಿ ನಿವಾಸಿ ಡಿ ಭೂಷಣ್ ತಾನು ಕುಡಿದಿಲ್ಲ ಎಂದು ಹೇಳುತ್ತ ಬ್ರೆಥಲೈಸರ್ ಊದಲು ನಿರಾಕರಿಸಿದ್ದಾನೆ. ಆದರೆ ಪೊಲೀಸರು ಆತನನ್ನು ಬಿಡಲೊಪ್ಪಲಿಲ್ಲ. ಊದುವುದರ ಮೂಲಕ ಕುಡಿದಿಲ್ಲವೆಂದು ಸಾಬೀತುಪಡಿಸುವಂತೆ ಹೇಳಿದ್ದಾರೆ.

ಪರೀಕ್ಷೆಯ ಬಳಿಕ ಆತನ ರಕ್ತದಲ್ಲಿ ಮಿತಿಗಿಂತ ಹೆಚ್ಚು ಮದ್ಯದ ಅಂಶವಿರುವುದು ಪತ್ತೆಯಾಗಿದೆ. ಇದರಿಂದ ಗಲಿಬಿಲಿಗೊಂಡ ಭೂಷಣ್ ಪೊಲೀಸರ ಕೈಯಿಂದ ಬ್ರೆಥಲೈಸರ್‌ನ್ನು ಕಿತ್ತುಕೊಂಡು ಕಾರು ಚಲಾಯಿಸಿಕೊಂಡು ಪರಾರಿಯಾಗಿದ್ದಾನೆ.

ತಕ್ಷಣ ಮುಂದಿನ ಜಂಕ್ಷನ್‌ನಲ್ಲಿ ಕರ್ತವ್ಯನಿರತರಾಗಿದ್ದ ಪೊಲೀಸರಿಗೆ ಮಾಹಿತಿ ನೀಡಿ ಆತನನ್ನು ಮತ್ತೆ ತಡೆದು ಬ್ರೆಥಲೈಸರ್ ಪರೀಕ್ಷೆಗೊಳಪಡಿಸಲಾಯಿತು.

ಆತನಿಗೆ ಕುಡಿದು ವಾಹನ ಚಲಾಯಿಸಿದ್ದಕ್ಕೆ 2,500 ರೂಪಾಯಿ ದಂಡವನ್ನು ವಿಧಿಸಲಾಗಿದ್ದು, ಬ್ರೆಥಲೈಸರ್ ಕಳವು ಮತ್ತು ಸರಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದ ಮೇಲೆ ಪ್ರಕರಣ ಕೂಡ ದಾಖಲಾಗಿದೆ.

ಆತ ಅಣ್ಣಾ ವಿಶ್ವವಿದ್ಯಾಲಯದ ವಿದ್ಯಾರ್ಥಿ ಎಂಬುದು ತನಿಖೆಯಲ್ಲಿ ಬಹಿರಂಗಗೊಂಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ