ಕೋಲ್ಕೊತಾ: ಪಶ್ಚಿಮ ಬಂಗಾಳದ ಅದ್ಧೂರಿ ದುರ್ಗಾ ಪೂಜೆಗೆ ಈ ಬಾರಿ ಕೊರೊನಾ ಸೋಂಕು ಅಡ್ಡಗಾಲು ಹಾಕಿದೆ. ಸೋಂಕು ಪ್ರಸರಣದ ಅಪಾಯ ತಪ್ಪಿಸಲು ದುರ್ಗಾ ಪೂಜಾ ಪೆಂಡಾಲ್ಗಳನ್ನು ಭಕ್ತರ ಪಾಲಿಗೆ 'ಪ್ರವೇಶ ನಿರ್ಬಂಧ ವಲಯ'ಗಳೆಂದು ಘೋಷಿಸಲು ಕೋಲ್ಕೊತಾ ಹೈಕೋರ್ಟ್ ಸೋಮವಾರ ಆದೇಶ ನೀಡಿದೆ.
ದುರ್ಗಾ ಪೂಜಾ ಪೆಂಡಾಲ್ಗಳಲ್ಲಿ ಜನದಟ್ಟಣೆಗೆ ಅವಕಾಶವಿಲ್ಲ. ಕಾರ್ಯಕ್ರಮ ಸಂಘಟಕರಿಗೆ ಮಾತ್ರ ಪೆಂಡಾಲ್ ಒಳಗೆ ಅವಕಾಶ ನೀಡಬೇಕು. ಅದರಲ್ಲೂ ಬೃಹತ್ ಪೆಂಡಾಲ್ಗಳಾದರೆ 25, ಚಿಕ್ಕ ಪ್ರಮಾಣದವುಗಳಾದರೆ 15 ಜನರಿಗೆ ಮಾತ್ರ ಪ್ರವೇಶಾವಕಾಶ ಸೀಮಿತಗೊಳಿಸಬೇಕು ಎಂದು ನ್ಯಾಯಮೂರ್ತಿಗಳಾದ ಅರಿಜಿತ್ ಬ್ಯಾನರ್ಜಿ ಮತ್ತು ಸಂಜಿಬ್ ಬ್ಯಾನರ್ಜಿ ಅವರನ್ನು ಒಳಗೊಂಡ ಪೀಠ ಆದೇಶಿಸಿದೆ.
''ಎಲ್ಲಾ ಪೆಂಡಾಲ್ಗಳ ಮುಂದೆ ಐದು ಮೀಟರ್ ದೂರದಲ್ಲಿಯೇ ಬ್ಯಾರಿಕೇಡ್ಗಳನ್ನು ನಿರ್ಮಿಸಬೇಕು. ಇದು ಜನರ ಆರೋಗ್ಯ ರಕ್ಷಣೆಯ ಗಂಭೀರ ಪ್ರಶ್ನೆ. ಕೋಲ್ಕೊತಾ ನಗರದಲ್ಲಿ 3000ಕ್ಕೂ ಹೆಚ್ಚಿನ ಪೆಂಡಾಲ್ಗಳಿದ್ದು, ಎಲ್ಲಾ ಕಡೆ ಪೊಲೀಸರು ಕಾವಲು ಹಾಕುವುದು ಅಸಾಧ್ಯ. ಜನರೇ ಎಚ್ಚೆತ್ತುಕೊಳ್ಳಬೇಕು,'' ಎಂದು ಕೋರ್ಟ್ ಎಚ್ಚರಿಸಿದೆ.
ಬಿಹಾರ ಚುನಾವಣೆ: ನಾಮಪತ್ರ ಸಲ್ಲಿಸಿದ ನರೇಂದ್ರ ಮೋದಿ!
ದುರ್ಗಾ ಪೂಜೆಗೆ ಮೂರು ದಿನ ಬಾಕಿ ಉಳಿದಿರುವಾಗಲೇ ಕೋರ್ಟ್ನಿಂದ ಈ ಮಹತ್ವದ ಆದೇಶ ಹೊರಬಿದ್ದಿದೆ. ಎಂತಹದ್ದೇ ಅಡ್ಡಿ ಎದುರಾದರೂ ದುರ್ಗಾ ಪೂಜೆ ನಿಲ್ಲಿಸುವುದಿಲ್ಲಎಂದು ಕಳೆದ ತಿಂಗಳು ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದರು. ''ಕೊರೊನಾ ವೈರಸ್ ಅನ್ನು ಲಾಕ್ಡೌನ್ನಲ್ಲಿ ಇರಿಸಿ, ದುರ್ಗಾ ಪೂಜೆ ನೆರವೇರಿಸಲಾಗುವುದು. ಆದರೆ ಜನಜಂಗುಳಿಯನ್ನು ತಪ್ಪಿಸಬೇಕಿದೆ. ನಾವು ಮೈಮರೆತರೆ ಇದನ್ನೇ ಅಸ್ತ್ರ ಮಾಡಿಕೊಂಡು ಎರಗಲು ಕಾಯ್ದುಕುಳಿತ ಸ್ವಯಂ ಸೇವಕರಿದ್ದಾರೆ. ಅವರಿಗೆ ಅವಕಾಶ ನೀಡದಿರೋಣ '' ಎಂದು ಪ್ರತಿಪಕ್ಷಗಳ ವಿರುದ್ಧ ಹರಿಹಾಯ್ದಿದ್ದರು.
ದುರ್ಗಾ ಪೂಜೆಗೆ ಖರೀದಿ ಭರಾಟೆ ಶುರುವಾದ ಬೆನ್ನ ಹಿಂದೆಯೆ ಕೋಲ್ಕೊತಾದಲ್ಲಿ ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚಳ ಶುರುವಾಗಿತ್ತು. ಸಾಮಾಜಿಕ ಅಂತರದಂತಹ ಮುನ್ನೆಚ್ಚರಿಕೆ ಕ್ರಮಗಳನ್ನು ಗಾಳಿಗೆ ತೂರಿ ಜನ ಉತ್ಸವದ ಸಿದ್ಧತೆ ನಡೆಸಿದ್ದು, ತಜ್ಞರನ್ನು ಕಳವಳಕ್ಕೆ ದೂಡಿದೆ. ರಾಜ್ಯದಲ್ಲಿ ಭಾನುವಾರದ ವೇಳೆಗೆ ಸೋಂಕಿತರ ಸಂಖ್ಯೆ 3,21,036 ತಲುಪಿದೆ. ಇದುವರೆಗೆ 3,990ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.
ದುರ್ಗಾ ಪೂಜಾ ಪೆಂಡಾಲ್ಗಳಲ್ಲಿ ಜನದಟ್ಟಣೆಗೆ ಅವಕಾಶವಿಲ್ಲ. ಕಾರ್ಯಕ್ರಮ ಸಂಘಟಕರಿಗೆ ಮಾತ್ರ ಪೆಂಡಾಲ್ ಒಳಗೆ ಅವಕಾಶ ನೀಡಬೇಕು. ಅದರಲ್ಲೂ ಬೃಹತ್ ಪೆಂಡಾಲ್ಗಳಾದರೆ 25, ಚಿಕ್ಕ ಪ್ರಮಾಣದವುಗಳಾದರೆ 15 ಜನರಿಗೆ ಮಾತ್ರ ಪ್ರವೇಶಾವಕಾಶ ಸೀಮಿತಗೊಳಿಸಬೇಕು ಎಂದು ನ್ಯಾಯಮೂರ್ತಿಗಳಾದ ಅರಿಜಿತ್ ಬ್ಯಾನರ್ಜಿ ಮತ್ತು ಸಂಜಿಬ್ ಬ್ಯಾನರ್ಜಿ ಅವರನ್ನು ಒಳಗೊಂಡ ಪೀಠ ಆದೇಶಿಸಿದೆ.
''ಎಲ್ಲಾ ಪೆಂಡಾಲ್ಗಳ ಮುಂದೆ ಐದು ಮೀಟರ್ ದೂರದಲ್ಲಿಯೇ ಬ್ಯಾರಿಕೇಡ್ಗಳನ್ನು ನಿರ್ಮಿಸಬೇಕು. ಇದು ಜನರ ಆರೋಗ್ಯ ರಕ್ಷಣೆಯ ಗಂಭೀರ ಪ್ರಶ್ನೆ. ಕೋಲ್ಕೊತಾ ನಗರದಲ್ಲಿ 3000ಕ್ಕೂ ಹೆಚ್ಚಿನ ಪೆಂಡಾಲ್ಗಳಿದ್ದು, ಎಲ್ಲಾ ಕಡೆ ಪೊಲೀಸರು ಕಾವಲು ಹಾಕುವುದು ಅಸಾಧ್ಯ. ಜನರೇ ಎಚ್ಚೆತ್ತುಕೊಳ್ಳಬೇಕು,'' ಎಂದು ಕೋರ್ಟ್ ಎಚ್ಚರಿಸಿದೆ.
ಬಿಹಾರ ಚುನಾವಣೆ: ನಾಮಪತ್ರ ಸಲ್ಲಿಸಿದ ನರೇಂದ್ರ ಮೋದಿ!
ದುರ್ಗಾ ಪೂಜೆಗೆ ಮೂರು ದಿನ ಬಾಕಿ ಉಳಿದಿರುವಾಗಲೇ ಕೋರ್ಟ್ನಿಂದ ಈ ಮಹತ್ವದ ಆದೇಶ ಹೊರಬಿದ್ದಿದೆ. ಎಂತಹದ್ದೇ ಅಡ್ಡಿ ಎದುರಾದರೂ ದುರ್ಗಾ ಪೂಜೆ ನಿಲ್ಲಿಸುವುದಿಲ್ಲಎಂದು ಕಳೆದ ತಿಂಗಳು ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದರು. ''ಕೊರೊನಾ ವೈರಸ್ ಅನ್ನು ಲಾಕ್ಡೌನ್ನಲ್ಲಿ ಇರಿಸಿ, ದುರ್ಗಾ ಪೂಜೆ ನೆರವೇರಿಸಲಾಗುವುದು. ಆದರೆ ಜನಜಂಗುಳಿಯನ್ನು ತಪ್ಪಿಸಬೇಕಿದೆ. ನಾವು ಮೈಮರೆತರೆ ಇದನ್ನೇ ಅಸ್ತ್ರ ಮಾಡಿಕೊಂಡು ಎರಗಲು ಕಾಯ್ದುಕುಳಿತ ಸ್ವಯಂ ಸೇವಕರಿದ್ದಾರೆ. ಅವರಿಗೆ ಅವಕಾಶ ನೀಡದಿರೋಣ '' ಎಂದು ಪ್ರತಿಪಕ್ಷಗಳ ವಿರುದ್ಧ ಹರಿಹಾಯ್ದಿದ್ದರು.
ದುರ್ಗಾ ಪೂಜೆಗೆ ಖರೀದಿ ಭರಾಟೆ ಶುರುವಾದ ಬೆನ್ನ ಹಿಂದೆಯೆ ಕೋಲ್ಕೊತಾದಲ್ಲಿ ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚಳ ಶುರುವಾಗಿತ್ತು. ಸಾಮಾಜಿಕ ಅಂತರದಂತಹ ಮುನ್ನೆಚ್ಚರಿಕೆ ಕ್ರಮಗಳನ್ನು ಗಾಳಿಗೆ ತೂರಿ ಜನ ಉತ್ಸವದ ಸಿದ್ಧತೆ ನಡೆಸಿದ್ದು, ತಜ್ಞರನ್ನು ಕಳವಳಕ್ಕೆ ದೂಡಿದೆ. ರಾಜ್ಯದಲ್ಲಿ ಭಾನುವಾರದ ವೇಳೆಗೆ ಸೋಂಕಿತರ ಸಂಖ್ಯೆ 3,21,036 ತಲುಪಿದೆ. ಇದುವರೆಗೆ 3,990ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.