ಆ್ಯಪ್ನಗರ

ಕೇರಳ ಪ್ರವಾಹದಿಂದ ತುಂಬು ಗರ್ಭಿಣಿ ರಕ್ಷಿಸಿದ ಯೋಧನಿಗೆ ಶೌರ್ಯ ಪ್ರಶಸ್ತಿ

ಕೇರಳ ಪ್ರವಾಹದ ಸಂದರ್ಭ ರಕ್ಷಣಾ ಕಾರ್ಯಾಚರಣೆ ವೇಳೆ ತುಂಬು ಗರ್ಭಿಣಿಯನ್ನು ಹೆಲಿಕಾಪ್ಟರ್‌ ಮೂಲಕ ರಕ್ಷಣೆ ಮಾಡಿದ ಕಮಾಂಡರ್‌ ವಿಜಯ್‌ ವರ್ಮಾ ಭಾರತೀಯ ನೌಕಾ ಸೇನೆ ನೀಡುವ ಶೌರ್ಯ ಪ್ರಶಸ್ತಿ ನೌ ಸೇನಾ ಪದಕಕ್ಕೆ ಭಾಜನರಾಗಿದ್ದಾರೆ. ಅಂದು ಇಬ್ಬರು ಗರ್ಭಿಣಿ ಸೇರಿದಂತೆ 12 ಮಂದಿಯನ್ನು ರಕ್ಷಿಸಿದ್ದರು.

Vijaya Karnataka Web 26 Jan 2019, 3:42 pm
ತಿರುವನಂತಪುರ: ಕೇರಳ ಪ್ರವಾಹ ಸಂದರ್ಭ ಅಪಾಯಕ್ಕೆ ಸಿಲುಕಿದ್ದ ತುಂಬು ಗರ್ಭಿಣಿಯನ್ನು ಹೆಲಿಕಾಪ್ಟರ್‌ ಮೂಲಕ ರಕ್ಷಿಸಿದ ಕಮಾಂಡರ್‌ ವಿಜಯ್‌ ವರ್ಮಾ ಭಾರತೀಯ ನೌಕಾ ಸೇನೆ ನೀಡುವ ಶೌರ್ಯ ಪ್ರಶಸ್ತಿ ನೌ ಸೇನಾ ಪದಕಕ್ಕೆ ಭಾಜನರಾಗಿದ್ದಾರೆ.
Vijaya Karnataka Web Vijay Varma


ಅಲುವಾ ಸಮೀಪದ ಚೆಂಗಮಾಂಡ್‌ ಎಂಬಲ್ಲಿ ಪ್ರವಾಹದಿಂದ ಅಪಾಯದ ಅಂಚಿನಲ್ಲಿದ್ದ 25 ವರ್ಷದ ಗರ್ಭಿಣಿ ಸಜಿತಾ ಜಬಿಲ್‌ ಎಂಬುವವರನ್ನು ವಿಜಯ್‌ ವರ್ಮಾ ನೇತೃತ್ವದ ತಂಡ ರಕ್ಷಣೆ ಮಾಡಿತ್ತು. ಹೆಲಿಕಾಪ್ಟರ್‌ ಮೂಲಕ ಗರ್ಭಿಣಿಯನ್ನು ನೆಲದಿಂದ ಮೇಲೆತ್ತಿ ನೌಕಾ ಪಡೆಯ ವೈದ್ಯಕೀಯ ಕೇಂದ್ರಕ್ಕೆ ಸುರಕ್ಷಿತವಾಗಿ ಸಾಗಿಸಲಾಗಿತ್ತು. ವೈದ್ಯಕೀಯ ಕೇಂದ್ರ ತಲುಪಿದ ಗಂಟೆಯೊಳಗೆ ಸಜಿತಾ ಗಂಡು ಮಗುವಿಗೆ ಜನ್ಮ ನೀಡಿದ್ದರು.


ಸಿನಿಮೀಯ ರೀತಿಯಲ್ಲಿ ಗರ್ಭಿಣಿಯನ್ನು ರಕ್ಷಿಸಿದ ರೋಚಕ ಕಾರ್ಯಚರಣೆಯ ವೀಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿತ್ತು. ವಿಜಯ್‌ ವರ್ಮಾ ನೇತೃತ್ವದ ತಂಡ ಸಜಿತಾ ಸೇರಿದಂತೆ ಮತ್ತೊಬ್ಬಳು ಗರ್ಭಿಣಿ ಮತ್ತು 10 ಮಂದಿಯನ್ನು ಪ್ರವಾಹ ಸ್ಥಳದಿಂದ ರಕ್ಷಣೆ ಮಾಡಿದ್ದರು.


ಭಾರತೀಯ ನೌಕಾ ಪಡೆಯಲ್ಲಿ ಪೈಲಟ್‌ ಇನ್‌ ಕಮಾಂಡ್‌ ಆಗಿ ಕಾರ್ಯನಿರ್ವಹಿಸುತ್ತಿದ್ದ ವಿಜಯ್‌ ವರ್ಮಾ ಅವರ ಸಾಹಸವನ್ನು ಗುರುತಿಸಿ ಐಎನ್‌ಎಸ್‌ ಗರುಡದ ಸ್ಟಾಫ್‌ ಕ್ಯೂ1 ಆಗಿ ಬಡ್ತಿ ಜತೆಗೆ ನೌ ಸೇನಾ ಪದಕವನ್ನು ನೀಡಿ ಗೌರವಿಸಲಾಗಿದೆ.

ಗರ್ಭಿಣಿಯನ್ನು ರಕ್ಷಣೆ ಮಾಡಿದ ಸ್ಥಳದಲ್ಲಿ ದೊಡ್ಡ ಅಕ್ಷರಗಳಲ್ಲಿ Thanks ಎಂದು ಬರೆಯುವ ಮೂಲಕ ರಕ್ಷಣಾ ಯೋಧರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ