ಆ್ಯಪ್ನಗರ

ಮೊದಲು ಪ್ರಧಾನಿ ಹೊಟ್ಟೆಯಿಂದ ಮಾತ್ರ ಪ್ರಧಾನಿ ಹುಟ್ಟುತ್ತಿದ್ದರು; ನಾವದನ್ನು ಬದಲಾಯಿಸಿದ್ದೇವೆ: ನಿತಿನ್ ಗಡ್ಕರಿ

ಈ ಹಿಂದೆ ದೇಶವನ್ನಾಳಿದವರು ತಮ್ಮ ಕುಟುಂಬವನ್ನು ಉದ್ಧಾರ ಮಾಡಿದರು ಎಂದು ಅವರು ಪರೋಕ್ಷವಾಗಿ ನೆಹರು- ಗಾಂಧಿ ಕುಟುಂಬದ ವಿರುದ್ಧ ಹರಿಹಾಯ್ದರು.

Navbharat Times 28 Oct 2018, 4:01 pm
ಹೈದರಾಬಾದ್: ವಂಶವಾಹಿ ರಾಜಕಾರಣವನ್ನು ಮುಂದಿಟ್ಟುಕೊಂಡು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು, ಕಾಂಗ್ರೆಸ್ ಸೇರಿದಂತೆ ಇತರ ರಾಜಕೀಯ ಪಕ್ಷಗಳ ವಿರುದ್ಧ ಹರಿಹಾಯ್ದಿದ್ದು, ಮೊದಲು ಪ್ರಧಾನಿ ಹೊಟ್ಟೆಯಿಂದಲೇ ಪ್ರಧಾನಿ ಹುಟ್ಟುತ್ತಿದ್ದರು, ನಾವದನ್ನು ಬದಲಾಯಿಸಿದ್ದೇವೆ ಎಂದಿದ್ದಾರೆ.
Vijaya Karnataka Web Nitin Gadkari


ಹೈದರಾಬಾದಿನಲ್ಲಿ ಬಿಜೆಪಿ ಯುವ ಮೋರ್ಚಾ ಸಮಾವೇಶವನ್ನು ಉದ್ದೇಶಿಸಿ ಮಾತನ್ನಾಡುತ್ತಿದ್ದ ಅವರು, ಪ್ರಧಾನಿ ಹೊಟ್ಟೆಯಿಂದ ಪ್ರಧಾನಿ ಹುಟ್ಟಿದ, ಮುಖ್ಯಮಂತ್ರಿ ಹೊಟ್ಟೆಯಿಂದ ಮುಖ್ಯಮಂತ್ರಿ ಹುಟ್ಟಿದ, ಸಂಸದನ ಹೊಟ್ಟೆಯಿಂದ ಸಂಸದ ಹುಟ್ಟಿದ. ಪ್ರಜಾಪ್ರಭುತ್ವ ಇಲ್ಲವಾಗುವ ಹಂತಕ್ಕೆ ತಲುಪಿತ್ತು. ಆದರೆ ನಾವದನ್ನು ಬದಲಾಯಿಸಿದೆವು, ವಂಶ ರಾಜಕಾರಣಕ್ಕೆ ಅಂತ್ಯ ಕೊಟ್ಟೆವು ಎಂದರು.

ಬಿಜೆಪಿ ಯಾವುದೋ ಒಂದು ಪರಿವಾರಕ್ಕ ಸೇರಿದ ಪಕ್ಷವಲ್ಲ. ಜಾತಿ, ಧರ್ಮ, ಭಾಷೆಯ ಆಧಾರದ ಮೇಲೆ ರಾಜಕಾರಣ ನಡೆಸುವ ಪಕ್ಷವಲ್ಲ, ಅಟಲ್ ಬಿಹಾರಿ ವಾಜಪೇಯಿ ಅವರು ನಮ್ಮ ವರಿಷ್ಠ ನಾಯಕರಾಗಿದ್ದರು. ಆದರೆ ಅವರ ಅಥವಾ ಎಲ್.ಕೆ ಅಡ್ವಾಣಿ ಅವರ ಹೆಸರಿಂದ ನಮ್ಮ ಪಕ್ಷವನ್ನು ಗುರುತಿಸಿಲ್ಲ ಎಂದು ಅವರು ಹೇಳಿದರು.

ಈ ಹಿಂದೆ ದೇಶವನ್ನಾಳಿದವರು ತಮ್ಮ ಕುಟುಂಬವನ್ನು ಉದ್ಧಾರ ಮಾಡಿದರು ಎಂದು ಅವರು ಪರೋಕ್ಷವಾಗಿ ನೆಹರು- ಗಾಂಧಿ ಕುಟುಂಬದ ವಿರುದ್ಧ ಹರಿಹಾಯ್ದರು.

ಪ್ರಸ್ತುತ ನರೇಂದ್ರ ಮೋದಿ ನಮ್ಮ ಪ್ರಧಾನಿಯಾಗಿದ್ದು ಮತ್ತು ಅಮಿತ್ ಶಾ ಬಿಜೆಪಿ ಅಧ್ಯಕ್ಷರಾಗಿದ್ದಾರೆ. ನೇತೃತ್ವ ಬದಲಾಗುತ್ತಲೇ ಇರುತ್ತದೆ. ನಮ್ಮ ಪಕ್ಷ ಯಾವುದೇ ವ್ಯಕ್ತಿಯ ಹೆಸರಲ್ಲಿ ನಡೆಸಲ್ಪಡುವುದಿಲ್ಲ, ಬದಲಾಗಿ ಪಕ್ಷದ ಸಿದ್ಧಾಂತ ಮತ್ತು ಉದ್ದೇಶದ ಆಧಾರದ ಮೇಲೆ ನಡೆಯುತ್ತದೆ ಎಂದು ಅವರು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ