ಆ್ಯಪ್ನಗರ

ಈ ಶುಕ್ರವಾರ ರಾತ್ರಿ ಹೋಟೆಲ್‌ ಬಂದ್‌?

ಹೋಟೆಲ್‌ ಆಹಾರವನ್ನು ನೆಚ್ಚಿಕೊಂಡಿರುವವರ ಗಮನಕ್ಕೆ ಈ ತಿಂಗಳ ಕೊನೆ ದಿನ ನಗರದಲ್ಲಿ ಹೋಟೆಲ್‌ಗಳು ಬಂದ್‌ ಆಗುವ ಸಾಧ್ಯತೆ ಇದೆ.

ಟೈಮ್ಸ್ ಆಫ್ ಇಂಡಿಯಾ 28 Jun 2017, 3:42 pm
ಮುಂಬಯಿ: ಹೋಟೆಲ್‌ ಊಟ, ತಿಂಡಿಯನ್ನು ನೆಚ್ಚಿಕೊಂಡಿರುವವರ ಗಮನಕ್ಕೆ... ಈ ತಿಂಗಳ ಕೊನೆ ದಿನ ನಗರದ ಹೋಟೆಲ್‌ಗಳು ಬಂದ್‌ ಆಗುವ ಸಾಧ್ಯತೆ ಇದೆ.
Vijaya Karnataka Web eateries to shut early on 30th to avoid midnight tryst with gst
ಈ ಶುಕ್ರವಾರ ರಾತ್ರಿ ಹೋಟೆಲ್‌ ಬಂದ್‌?


ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಇದೇ ಜುಲೈ 1ರಿಂದ ಜಾರಿಯಾಗಲಿದ್ದು, ಈ ಹಿನ್ನೆಲೆಯಲ್ಲಿ ಜೂನ್‌ 30ರ ಮಧ್ಯರಾತ್ರಿಯಿಂದಲೇ ಹೋಟೆಲುಗಳ ದರ ಬದಲಾವಣೆ ಮಾಡಬೇಕಿದೆ. ಅದಕ್ಕಾಗಿ ರಾತ್ರಿ 11.30ರ ಬಳಿಕ ಹೋಟೆಲ್‌ಗಳು ಮುಚ್ಚುವ ಸಾಧ್ಯತೆಯಿದೆ ಎನ್ನಲಾಗಿದೆ.

ಹೊರಗಿನ ಆಹಾರವನ್ನು ಅವಲಂಬಿಸಿರುವ ರಾಜ್ಯಗಳಲ್ಲಿ ಮುಂಬಯಿ ಮೊದಲನೇ ಸ್ಥಾನ ಪಡೆದುಕೊಂಡಿದೆ. ಹೀಗಾಗಿ ಮುಂಬಯಿ ನಗರದ ಜನರಿಗೆ ಜಿಎಸ್‌ಟಿ ಬಿಸಿ ಹೆಚ್ಚು ತಟ್ಟಲಿದೆ.

'ಜಿಎಸ್‌ಟಿ ಜಾರಿ ಹಿನ್ನೆಲೆಯಲ್ಲಿ ನಾವು ಕೆಲ ತಾಂತ್ರಿಕ ಬದಲಾಣೆ ಮಾಡಿಕೊಳ್ಳಬೇಕಿದೆ. ಕಂಪ್ಯೂಟರ್‌ಗಳಲ್ಲಿ ಹೊಸ ದರ ಪರಿಷ್ಕರಣೆ ಆಗಬೇಕಿದೆ. ಹೀಗಾಗಿ ಶುಕ್ರವಾರದಿಂದ ಶನಿವಾರ ಅಪರಾಹ್ನದವರೆಗೂ ಹೋಟೆಲ್‌ ತೆರೆಯುತ್ತಿಲ್ಲ,' ಎಂದು ಚೆಂಬರ್‌ನ ಓಶೆನಿಕ್‌ ರೆಸ್ಟೋರೆಂಟ್‌ ಮ್ಯಾನೇಜರ್‌ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ