ಆ್ಯಪ್ನಗರ

ಧೃತರಾಷ್ಟ್ರನಂತೆ ಚು. ಆಯೋಗದ ವರ್ತನೆ: ಕೇಜ್ರಿ ಆರೋಪ

ದಿಲ್ಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್ ಚುನಾವಣೆ ಆಯೋಗವನ್ನು ಮಹಾಭಾರತದ ಧೃತರಾಷ್ಟ್ರನಿಗೆ ಹೋಲಿಸಿದ್ದಾರೆ. ನಿಷ್ಪಕ್ಷಪಾತಿಯಾಗಿ ಕೆಲಸ ಮಾಡಬೇಕಿದ್ದ ಆಯೋಗ, 'ತನ್ನ ಪುತ್ರ' ಬಿಜೆಪಿಗೆ ಅನುಕೂಲವಾಗುವಂತೆ ದೋಷಪೂರಿತ ಮತಯಂತ್ರಗಳ ಬಗ್ಗೆ ಕಣ್ಣುಮುಚ್ಚಿ ಕುಳಿತಿದೆ ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ.

ಟೈಮ್ಸ್ ಆಫ್ ಇಂಡಿಯಾ 10 Apr 2017, 5:35 pm
ಹೊಸದಿಲ್ಲಿ: ದಿಲ್ಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್ ಚುನಾವಣೆ ಆಯೋಗವನ್ನು ಮಹಾಭಾರತದ ಧೃತರಾಷ್ಟ್ರನಿಗೆ ಹೋಲಿಸಿದ್ದಾರೆ. ನಿಷ್ಪಕ್ಷಪಾತಿಯಾಗಿ ಕೆಲಸ ಮಾಡಬೇಕಿದ್ದ ಆಯೋಗ, 'ತನ್ನ ಪುತ್ರ' ಬಿಜೆಪಿಗೆ ಅನುಕೂಲವಾಗುವಂತೆ ದೋಷಪೂರಿತ ಮತಯಂತ್ರಗಳ ಬಗ್ಗೆ ಕಣ್ಣುಮುಚ್ಚಿ ಕುಳಿತಿದೆ ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ.
Vijaya Karnataka Web ec behaving like dhritarashtra arvind kejriwal
ಧೃತರಾಷ್ಟ್ರನಂತೆ ಚು. ಆಯೋಗದ ವರ್ತನೆ: ಕೇಜ್ರಿ ಆರೋಪ


'ಚುನಾವಣೆ ಆಯೋಗವೀಗ ಧೃತರಾಷ್ಟ್ರನಂತಾಗಿದೆ. ಯಾವುದೇ ಬೆಲೆ ತೆತ್ತಾದರೂ ತನ್ನ ಪುತ್ರ ಬಿಜೆಪಿಗೇ ಗೆಲುವಾಗುವಂತೆ ಅದು ನೋಡಿಕೊಳ್ಳುತ್ತಿದೆ' ಎಂದು ಕೇಜ್ರಿವಾಲ್ ಕಿಡಿಕಾರಿದ್ದಾರೆ.

ದೋಷಯುಕ್ತ ಮತಯಂತ್ರಗಳನ್ನು ಆಯೋಗ ಬದಲಿಸುತ್ತದೆಯೇ ಹೊರತು ಆರೋಪಗಳ ಕುರಿತು ತನಿಖೆ ನಡೆಸುತ್ತಿಲ್ಲ. 'ಅಂತಹ ಸನ್ನಿವೇಶದಲ್ಲಿ ಚುನಾವಣೆ ನಡೆಸುವುದಾದರೂ ಯಾಕೆ?' ಎಂದು ಕೇಜ್ರಿವಾಲ್ ಪ್ರಶ್ನಿಸಿದರು.

'ಮತಯಂತ್ರಗಳು ದೋಷಪೂರಿತವಾಗಿವೆ ಎಂದಾದರೆ ಅವುಗಳನ್ನು ಯಾರಾದರೂ ತಮ್ಮ ಅನುಕೂಲಕ್ಕೆ ತಕ್ಕಂತೆ ತಿರುಚಿರಲೇಬೇಕು' ಎಂದು ಅವರು ಪ್ರತಿಪಾದಿಸಿದ್ದಾರೆ.

ಯಂತ್ರಗಳು ದೋಷಪೂರಿತವಾಗಿದ್ದರೆ ಕೆಲವು ಮತ ಯಂತ್ರಗಳಲ್ಲಾದರೂ ಕಾಂಗ್ರೆಸ್‌ ಅಥವಾ ಇತರ ಪಕ್ಷಗಳಿಗೆ ಮತಗಳು ಬೀಳಬೇಕಿತ್ತು ಎಂದು ಕೇಜ್ರಿವಾಲ್ ಹೇಳಿಕೊಂಡಿದ್ದಾರೆ.

ಏಪ್ರಿಲ್ 23ರಂದು ನಡೆಯುವ ದಿಲ್ಲಿ ಮುನಿಸಿಪಲ್ ಚುನಾವಣೆಗಳಿಗೆ ದಿಲ್ಲಿಯಲ್ಲೇ ಸಾಕಷ್ಟು ಲಭ್ಯವಿದ್ದರೂ ರಾಜಸ್ಥಾನದಿಂದ ಮತಯಂತ್ರಗಳನ್ನು ತರಿಸಲಾಗುತ್ತಿದೆ. ಈ ಚುನಾವಣೆ ಕೂಡ ನ್ಯಾಯಸಮ್ಮತವಾಗಿರುತ್ತದೆ ಎಂದು ಹೇಳಲಾಗದು ಎಂದು ಕೇಜ್ರಿವಾಲ್ ನುಡಿದರು.

EC behaving like Dhritarashtra: Arvind Kejriwal

NEW DELHI: Delhi chief minister Arvind Kejriwal today likened the Election Commission to the Mahabharat's Dhritarashtra character, saying the supposedly impartial election regulator is doing everything it can to get "its son" the BJP to win, by turning a blind eye to faulty voting machines.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ