ಆ್ಯಪ್ನಗರ

ಬೇಡವೆಂದು ಎಸೆದ ಧ್ವಜವೂ ಗಿಡವಾಗಿ, ಹೂ ಬಿಡುತ್ತದೆ!

ರಾಷ್ಟ್ರಧ್ವಜಕ್ಕೆ ಅದರದ್ದೇ ಆದ ಗೌರವ, ಮರ್ಯಾದೆ ಕೊಡಬೇಕಿದ್ದರೂ, ಕಾರ್ಯಕ್ರಮ ಮುಗಿದ ಬಳಿಕ ಅಲ್ಲಿಯೇ ಎಸೆದು ಹೋಗುತ್ತಾರೆ. ಹೀಗೆ ಎಸೆಯುವ ಧ್ವಜ ಪ್ಲಾಸ್ಟಿಕ್ ಇಲ್ಲವೆ ಪೇಪರ್‌ನಿಂದ ಮಾಡಿದ್ದಾಗಿರುತ್ತದೆ.

Vijaya Karnataka Web 26 Jan 2019, 2:59 pm
ಹೊಸದಿಲ್ಲಿ: ಸ್ವಾತಂತ್ರ್ಯೋತ್ಸವ ಮತ್ತು ಗಣರಾಜ್ಯೋತ್ಸವ ಸಂದರ್ಭದಲ್ಲಿ ಕಿರಿಯರು, ಹಿರಿಯರೆನ್ನದೆ ಎಲ್ಲರೂ ಪುಟ್ಟ ಪುಟ್ಟ ತ್ರಿವರ್ಣ ಧ್ವಜ ಹಿಡಿದುಕೊಂಡು ಬರುವುದು ಸಾಮಾನ್ಯ. ಆದರೆ ಆಚರಣೆ ಮುಗಿದ ಮರುಕ್ಷಣವೇ ಬಹುತೇಕರಿಗೆ ಧ್ವಜದ ನೆನಪೇ ಹೋಗಿರುತ್ತದೆ.
Vijaya Karnataka Web seed_flag_1548421951_725x725


ರಾಷ್ಟ್ರಧ್ವಜಕ್ಕೆ ಅದರದ್ದೇ ಆದ ಗೌರವ, ಮರ್ಯಾದೆ ಕೊಡಬೇಕಿದ್ದರೂ, ಕಾರ್ಯಕ್ರಮ ಮುಗಿದ ಬಳಿಕ ಅಲ್ಲಿಯೇ ಎಸೆದು ಹೋಗುತ್ತಾರೆ. ಹೀಗೆ ಎಸೆಯುವ ಧ್ವಜ ಪ್ಲಾಸ್ಟಿಕ್ ಇಲ್ಲವೆ ಪೇಪರ್‌ನಿಂದ ಮಾಡಿದ್ದಾಗಿರುತ್ತದೆ.

ಆದರೆ ಹೀಗಾಗುವುದನ್ನು ತಪ್ಪಿಸಲು ಖುಶಿಯಾನ್ ಫೌಂಡೇಶನ್ ಮತ್ತು ದಿ ಬಾಕ್ಸ್‌ವುಡ್ ಸಂಸ್ಥೆ ಜಂಟಿಯಾಗಿ ಸೇವ್ ದಿ ಫ್ಲ್ಯಾಗ್ ಅಭಿಯಾನದಡಿ ಪರಿಸರಸ್ನೇಹಿ ಧ್ವಜ ತಯಾರಿಸಿದೆ.

ಸೇವಂತಿಗೆ, ತುಳಸಿ ಮತ್ತಿತರ ವೇಗವಾಗಿ ಬೆಳೆಯುವ ಗಿಡಗಳ ಬೀಜವನ್ನೊಳಗೊಂಡ ಈ ಪರಿಸರಸ್ನೇಹಿ ಧ್ವಜಕ್ಕೆ 20 ರೂ. ದರವಿದೆ. ಈ ಧ್ವಜವನ್ನು ಬಳಸಿದ ಬಳಿಕ ಎಸೆದರೆ ಅದರಿಂದ ಪುಟ್ಟ ಗಿಡವೊಂದು ಜನಿಸುತ್ತದೆ. ಧ್ವಜ ತಾನಾಗಿಯೇ ವಿಸರ್ಜಿಸಲ್ಪಡುತ್ತದೆ.

ಇದರಿಂದ ಧ್ವಜ ಕಾಲಕೆಳಗೆ ಸಿಕ್ಕು ಮೌಲ್ಯ ಕಳೆದುಕೊಳ್ಳುವುದೂ ತಪ್ಪುತ್ತದೆ, ಪರಿಸರ ಹಾನಿಯಾಗುವುದೂ ತಡೆದಂತಾಗುತ್ತದೆ. ಹೀಗಾಗಿ ಈ ಮಾದರಿ ಕಾರ್ಯಕ್ಕೆ ಜನರೂ ಕೈಜೋಡಿಸಿದರೆ, ಅದರಿಂದ ಧ್ವಜದ ಮೌಲ್ಯವೂ ಉಳಿಯುತ್ತದೆ, ಪರಿಸರ ಸಂರಕ್ಷಣೆಯೂ ಸಾಧ್ಯವಾಗುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ