ಆ್ಯಪ್ನಗರ

ಪಿಎಫ್‌ಐಗೆ ಇ.ಡಿ ದಾಳಿ ಬಿಸಿ, ಕರ್ನಾಟಕ ಸೇರಿ 9 ರಾಜ್ಯಗಳ 26 ಕಡೆ ಶೋಧ

ಬೆಂಗಳೂರು ಸೇರಿ 9 ರಾಜ್ಯಗಳ 26 ಕಡೆ ದಾಳಿ ನಡೆದಿದ್ದು ಪಿಎಫ್‌ಐ ಸಂಘಟನೆ ಹಾಗೂ ಚಂದ್ರಶೇಖರ್‌ ಆಜಾದ್‌ ಅವರ ಭೀಮ್‌ ಆರ್ಮಿ ನಡುವೆ ಅಕ್ರಮ ಹಣಕಾಸಿನ ವ್ಯವಹಾರ ಹಾಗೂ ಸಿಎಎ ವಿರೋಧಿ ಪ್ರತಿಭಟನೆ ಹಿಂದೆ ಈ ಎರಡು ಸಂಘಟನೆಗಳ ಕೈವಾಡದ ಬಗ್ಗೆ ಇ.ಡಿ ತನಿಖೆ ನಡೆಸುತ್ತಿದೆ.

Agencies 3 Dec 2020, 8:46 pm
ಹೊಸದಿಲ್ಲಿ: ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕೇರಳ, ಕರ್ನಾಟಕ ಸೇರಿದಂತೆ 9 ರಾಜ್ಯಗಳಲ್ಲಿನ 26 ಸ್ಥಳಗಳಲ್ಲಿ ಪಾಪ್ಯುಲರ್‌ ಫ್ರಾಂಟ್‌ ಆಫ್‌ ಇಂಡಿಯಾ (ಪಿಎಫ್‌ಐ) ಕಚೇರಿ ಹಾಗೂ ಸಂಘಟನೆಯ ಪದಾಧಿಕಾರಿಗಳ ಮನೆಗಳ ಮೇಲೆ ದಾಳಿ ನಡೆಸಿ, ಶೋಧಕಾರ್ಯ ಕೈಗೊಂಡಿದ್ದಾರೆ.
Vijaya Karnataka Web PFI


ಕೇರಳದ ಮಲಪ್ಪುರಂ ಮತ್ತು ತಿರುವನಂತಪುರಂ ಜಿಲ್ಲೆಗಳಲ್ಲಿ ಪಿಎಫ್‌ಐ ಮುಖ್ಯಸ್ಥ ಒ.ಎಂ. ಅಬ್ದುಲ್‌ ಸಲಾಮ್‌ ಮತ್ತು ರಾಷ್ಟ್ರೀಯ ಕಾರ್ಯದರ್ಶಿ ನಸ್ರುದ್ದೀನ್‌ ಎಲಮರಂ ಅವರ ಮನೆಗಳಲ್ಲೂ ಅಧಿಕಾರಿಗಳು ಶೋಧ ನಡೆಸಿದ್ದಾರೆ.

ಪಿಎಫ್‌ಐ ಸಂಘಟನೆ ಹಾಗೂ ಚಂದ್ರಶೇಖರ್‌ ಆಜಾದ್‌ ಅವರ ಭೀಮ್‌ ಆರ್ಮಿ ನಡುವೆ ಅಕ್ರಮ ಹಣಕಾಸಿನ ವ್ಯವಹಾರ ಹಾಗೂ ಸಿಎಎ ವಿರೋಧಿ ಪ್ರತಿಭಟನೆ ಹಿಂದೆ ಈ ಎರಡೂ ಸಂಘಟನೆಗಳ ಕೈವಾಡದ ಬಗ್ಗೆ ಇ.ಡಿ ತನಿಖೆ ನಡೆಸುತ್ತಿದೆ. ಪೂರಕ ಸಾಕ್ಷ್ಯಾಧಾರ ಸಂಗ್ರಹಕ್ಕಾಗಿ ಗುರುವಾರ ದಾಳಿ ನಡೆಸಲಾಗಿದೆ.

ಡಿಜೆ ಹಳ್ಳಿ ಗಲಭೆ: ಎಸ್‌ಡಿಪಿಐ, ಪಿಎಫ್‌ಐ ಕಚೇರಿ ಸೇರಿ 43 ಸ್ಥಳಗಳಲ್ಲಿ ಎನ್‌ಐಎ ದಾಳಿ
ಕೋಟಿ ಕೋಟಿ ಜಮೆ

2019ರ ಡಿಸೆಂಬರ್‌ ಮತ್ತು 2020ರ ಜನವರಿ ನಡುವೆ ದೇಶದ ವಿವಿಧ ಭಾಗಗಳಲ್ಲಿ ಪಿಎಫ್‌ಐ ಸಂಘಟನೆಗೆ ಸೇರಿದ 73 ಬ್ಯಾಂಕ್‌ ಖಾತೆಗಳಲ್ಲಿ ಒಟ್ಟು 120 ಕೋಟಿ ರೂ. ಹಣ ಜಮೆಯಾಗಿದ್ದು, ಈ ಕುರಿತು ಇ.ಡಿ ತನಿಖೆ ನಡೆಸುತ್ತಿದೆ.

ದಾಳಿ ಎಲ್ಲೆಲ್ಲಿ?

ಕರ್ನಾಟಕದ ಬೆಂಗಳೂರು, ಕೇರಳದ ಕೊಚ್ಚಿ, ಮಲಪ್ಪುರಂ ಮತ್ತು ತಿರುವನಂತಪುರಂ ಸೇರಿದಂತೆ ಆರು ಸ್ಥಳಗಳು, ತಮಿಳುನಾಡಿನಲ್ಲಿ ತೆಂಕಸಿ, ಮಧುರೈ ಮತ್ತು ಚೆನ್ನೈ ಸೇರಿದಂತೆ ಐದು ಸ್ಥಳಗಳು, ಪಶ್ಚಿಮ ಬಂಗಾಳದಲ್ಲಿ ಕೋಲ್ಕತಾ ಮತ್ತು ಮುರ್ಷಿದಾಬಾದ್‌, ದೆಹಲಿಯ ಶಾಹೀನ್‌ ಬಾಗ್‌, ಉತ್ತರ ಪ್ರದೇಶದ ಲಖನೌ ಮತ್ತು ಬರಾಬಂಕಿ, ಬಿಹಾರದ ದರ್ಭಂಗಾ ಮತ್ತು ಪೂರ್ಣಿಯಾ, ಮಹಾರಾಷ್ಟ್ರದ ಔರಂಗಾಬಾದ್‌, ಮತ್ತು ರಾಜಸ್ಥಾನದ ಜೈಪುರದಲ್ಲಿ ಇ.ಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ